الجمعة، 13 فبراير 2009

ಮಿತ್ರನಿಗೊಂದು ಪತ್ರ



ಮಿತ್ರನಿಗೊಂದು ಪತ್ರ ಬರೆ
ನೆನಪುಗಳೊಂದು ಚಿತ್ರ ಬರೆ
ಹಗಲಲ್ಲೂ ರಾತ್ರಿಯ ಕತ್ತಲಿದೆ
ಮೋಡಗಳದ್ದೇ ತಂತ್ರ ಬರೆ
ದೇಶದ ಮಡಿಲಲಿ ನೆತ್ತರು ಹರಿಯಿತು
ಮಾತೆಯ ಕೊಂದ ಸುಪುತ್ರ ಬರೆ
'ಸಂಪತ್ತೊಂದೇ ಜೀವನ ಲಕ್ಷ್ಯ'
ನವ ಯುಗದ ನವ ಮಂತ್ರ ಬರೆ
ಕಲುಷಿತ ಸ್ನೇಹ,ಬತ್ತಿದ ಪ್ರೀತಿ
ಮನುಷ್ಯ ಚಲಿಸುವ ಯಂತ್ರ ಬರೆ
ಶಿರಗಳು ಬಾಗಿವೆ ಸ್ರಷ್ಟಿಯ ಮುಂದೆ
ಇದು ಬುದ್ಧಿಗೆ ನಿಲುಕದ ಸೂತ್ರ ಬರೆ
ಲಕ್ಷ್ಮಣ ರೇಖೆಯ ದಾಟುವ ' ಸೀತೆ '
ರಾವಣ ಕಾಮದ ಕುತಂತ್ರ ಬರೆ
ಜ್ಞಾನವೇ ಆಳುವ ಕುರ್ಚಿಯ ಒಡೆಯ
ಅಜ್ಞಾನವು ರಾಜನ ಮಿತ್ರ ಬರೆ

الأربعاء، 11 فبراير 2009

?ಅವನು ಯಾರೆಂದು ನಿಮಗೆ ಗೊತ್ತೇ

ಕೋಪಗೊಂಡರೆ ಅವನ ಪ್ರತಾಪವನ್ನು ಎದುರಿಸುವ ಧೈರ್ಯ ಯಾರಿಗೂ ಇಲ್ಲ

ಆದರೆ ಅವನ ಲ್ಲಿ ಕೋಪಕ್ಕಿಂತ ಕರುಣೆಯೇ ಅಧಿಕ

ನಿದ್ರೆ ಬಿಡಿ ಅವನಿ ಗೆ ತೂಕಡಿಕೆಯೂ ಬಾಧಿಸುವುದಿಲ್ಲ

ಅವನಿದ್ದಾನೆ ಆದರೆ ಅವನು ಯಾರಿಂದಲೂ ಬಂದಿಲ್ಲ ಅರ್ಥಾತ್ ಅವನು ಯಾರ ಸಂತಾನವೂ ಅಲ್ಲ

ಎಲ್ಲರನ್ನೂ, ಎಲ್ಲವನ್ನೂ ಅವನೇ ಸ್ರಷ್ಟಿಸಿದ ಆದರೆ ಅವನಿಗಾರೂ ಸಂತಾನವಿಲ್ಲ

ಅವನೇ ಮೊದಲು ಅವನಿಗಿಂತ ಮೊದಲು ಯಾರೂ ಇಲ್ಲ

ಅವನೇ ಅಂತ್ಯ ಅವನಿಗೆ ಅಂತ್ಯವಿಲ್ಲ

ಅವನು ಯಾವುದಾದರೊಂದು ವಿಷಯದ ಸಂಕಲ್ಪ ಮಾಡಿದಾಗ ಅದಕ್ಕೆ "ಆಗಿ ಬಿಡು" ಎಂಬ ಅಪ್ಪಣೆ ಕೊಡುವುದೇ ತಡ, ಅದು ಆಗಿ ಬಿಡುತ್ತದೆ

ಭೂಮಿಯು ಗೋಳಾಕಾರದಲ್ಲಿದೆ ಆದರೂ ಅದನ್ನು ನಿಮ್ಮ ವಾಸಸ್ಥಳವನ್ನಾಗಿಸಿದವನು ಅವನೇ

ನೀವು ಭೂಮಿಯ ಮೇಲೆ ಓಡಾಡುತ್ತೀರಲ್ಲವೇ,ಅದರಲ್ಲಿ ರಸ್ತೆಗಳನ್ನು ಹಾಸಿದವನೂ ಅವನೇ

ಕಣ್ಣುಗಳನ್ನೊಮ್ಮೆತ್ತಿ ಮೇಲೆ ನೋಡಿ! ವಿಶಾಲ ಆಕಾಶ ಯಾವುದೇ ಆಧಾರ ಸ್ತಂಭಗಳಿಲ್ಲದೆ ನಿಂತಿಲ್ಲವೇ!!?

ಆ ಸಪ್ತ ಗಗನಗಳನ್ನು ಇನ್ನೊಮ್ಮೆ ನೋಡಿರಿ.....,

ನಿಮಗೆಲ್ಲಾದರೂ ನ್ಯೂನತೆಕಾಣಿಸುತ್ತಿದೆಯೇ

ಪುನಃ ಪುನಃ ದ್ರಷ್ಟಿ ಹಾಯಿಸಿರಿ,ನಿಮ್ಮ ದ್ರಷ್ಟಿಯು ಸೋತು ಹತಾಶವಾಗಿ ಮರಳಿ ಬರುವುದು

ಹೌದು ಅವುಗಳನ್ನು ನಿಮಗೆ ಮೇಲ್ಛಾವಣಿಯಾಗಿ ಮಾಡಿದವನೂ ಅವನೇ

ಸಾಸಿವೆ ಕಾಳಿನಷ್ಟಿರುವ ಒಂದು ವಸ್ತು ಅದು ಯಾವುದೇ ಬಂಡೆಯಲ್ಲಿ ಅಥವಾ ಆಕಾಶಗಳಲ್ಲಿ ಅಥವಾ ಭೂಮಿಯೊಳಗೆ ಎಲ್ಲಾದರೂ ಅಡಗಿರಲಿ ಅದನ್ನು ಹೊರ ತರುವಷ್ಟು ಅವನು ಸೂಕ್ಷ್ಮದರ್ಶಿಯೂ ವಿವರಪೂರ್ಣನೂ ಆಗಿರುತ್ತಾನೆ.

ಪ್ರತಿಯೊಂದು ವಸ್ತುವಿನಲ್ಲೂ ನೀವು ಜೋಡಿಗಳನ್ನು ನೋಡುತ್ತೀರಲ್ಲವೇ?.....ಈ ವಸ್ತುಗಳನ್ನು ಸೃಷ್ಟಿಸಿದವನೂ ಅವನೇ

ತಾಯಿಯ ಗರ್ಭವನ್ನು ಸೇರುವ ಒಂದು ಬಿಂದು ತುಚ್ಛ ದ್ರವ ಹೇಗೆ ಆಲಿಸುವ ವೀಕ್ಷಿಸುವ ಒಂದು ಸುಂದರ ಮನುಷ್ಯನ ರೂಪ ಪಡೆಯುತ್ತದೆ .ಈ ಕುರಿತು ನೀವೆಂದಾದರೂ ವಿವೇಚಿಸಿದ್ದೀರಾ.... ಇದು ಯಾರ ಕೆಲಸವಾಗಿರಬಹುದು ಮನುಷ್ಯನಿಗಂತೂ ಹೀಗೆ ಮಾಡಲು ಸಾಧ್ಯವೇ ಇಲ್ಲ ... ಇನ್ನು ಕಲ್ಲು,ಮಣ್ಣು,ಮರಗಳು ಹೀಗೆ ಮಾಡಿರಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ .ಇದು ಕೂಡ ಅವನ ಅಗೋಚರ ಕೈಗಳ ಕೈಚಳಕವೇ ಆಗಿರುತ್ತದೆ

ರೈತನು ಭೂಮಿಯನ್ನು ಹೂಳಿ ಬೀಜವನ್ನು ಬಿತ್ತುತ್ತಾನೆ .ನಂತರ ಆಕಾಂಕ್ಷೆಗಳನ್ನು ಹೊತ್ತ ಕಣ್ಣುಗಳಿಂದ ಆಗಸದತ್ತ ನೋಡುತ್ತಾನೆ .... ಇದಕ್ಕಿಂತ ಅಧಿಕ ಅವನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ... ಆಗ"ಅವನು" ಆಕಾಶದಿಂದ ಸುಸಮ್ರದ್ಧ ನೀರನ್ನಿಳಿಸುತ್ತಾನೆ ತರುವಾಯ ಅದರಿಂದ ಉದ್ಯಾನಗಳನ್ನೂ ಕೊಯ್ಲಿನ ಧಾನ್ಯಗಳನ್ನೂ ಮತ್ತು ಎಲ್ಲ ವಿಧದ ನಯನ ಮನೋಹರ ಸಸ್ಯಗಳನ್ನು ಬೆಳೆಸುತ್ತಾನೆ

ನೀರಿನಿಂದ ನಿರ್ಜೀವ ಭೂಮಿಯಲ್ಲಿ ಜೀವಕಳೆಯನ್ನು ಮೂಡಿಸುವ ಅದ್ವಿತೀಯ ಮತ್ತು ಅತ್ಯದ್ಭುತ ಕಲೆಗಾರನವನು.

ಜೀವಿಗಳ ಆಹಾರದ ಹೊಣೆ ಹೊತ್ತವನಲ್ಲವೇ "ಅವನು" , ಆದ್ದರಿಂದಲೇ ಈ ಎಲ್ಲಾ ಏರ್ಪಾಡುಗಳು

ನೀವು ಒಲೆಗಳನ್ನು ಉರಿಸುತ್ತೀರಲ್ಲವೇ .....?

ಹಚ್ಚ ಹಸಿರಾದ ಮರಗಳಿಂದ ನಿಮಗಾಗಿ ಬೆಂಕಿಯನ್ನುಂಟು ಮಾಡಿದವರು ಯಾರು ....!!?

ಜೀವನ ಸಾಧನವಾದ ಈ ಬೆಂಕಿಯನ್ನು ನೀವೇನು ಸ್ವತಃ ಉಂಟು ಮಾಡಿದ್ದೀರಾ!?

ಇಲ್ಲ...!! ಇದೂ ಅವನ ಚಮತ್ಕಾರವೇ.

ಸಮ್ರದ್ಧಿದಾಯಕ ಹಾಲಿನ ಕುರಿತು ನೀವೆಂದಾದರೂ ಆಲೋಚಿಸಿದ್ದೀರಾ...?

"ಅವನು" ಹೇಳುತ್ತಾನೆ : "ನಿಶ್ಚಯವಾಗಿಯೂ ಜಾನುವಾರುಗಳಲ್ಲಿಯೂ ನಿಮಗೊಂದು ಪಾಠವಿದ್ದೇ ಇದೆ .ಅವುಗಳ ಸೆಗಣಿ ಮತ್ತು ರಕ್ತದ ಮಧ್ಯದಿಂದ ಕುಡಿಯುವವರಿಗೆ ಆಹ್ಲಾದಕರವಾದ ಶುದ್ಧ ಹಾಲನ್ನು ನಾವು ಕುಡಿಸುತ್ತೇವೆ " (ಪವಿತ್ರ ಕುರ್ಆನ್,೧೬:೬೬)

ನಿಮಗಾಗಿ ಮತ್ತು ನಿಮ್ಮ ಜೀವನಕ್ಕಾಗಿ ಇಷ್ಟೆಲ್ಲಾ ಅನುಗ್ರಹಗಳನ್ನು ನೀಡಿದ 'ಅವನನ್ನು' ನೀವೇಕೆ ಪರಿಚಯಿಸುತ್ತಿಲ್ಲ…?

ಅವನಾದರೂ ಹೀಗೆ ಪ್ರಶ್ನಿಸುತ್ತಿದ್ದಾನೆ , " ಓ ಮಾನವಾ! ಆ ನಿನ್ನ ಕರುಣಾಮಯಿ ಪ್ರಭುವಿನ ಬಗ್ಗೆ ನಿನ್ನನ್ನು ಮೊಸಕ್ಕೊಳಪಡಿಸಿದ ವಸ್ತು ಯಾವುದು?

ಅವನು ನಿನ್ನನ್ನು ಸ್ರಷ್ಟಿಸಿದನು,ನಿನ್ನನ್ನು ನಖ ಶಿಖಾಂತ ಸರಿಪಡಿಸಿದನು,ನಿನ್ನನ್ನು ಸಂತುಲಿತಗೊಳಿಸಿದನು,

ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿ ರಚಿಸಿದನು." (ಪವಿತ್ರ ಕುರ್ಆನ್,82 : 6-8 )

ಮನುಷ್ಯ ಶ್ರೇಷ್ಠ ಸ್ರಷ್ಟಿಯಲ್ಲವೇ , ಅವನ ಶಿರವೂ ಶ್ರೇಷ್ಟ

ಹಾಗಾದರೆ ಶ್ರೇಷ್ಠವಲ್ಲದವುಗಳ ಮುಂದೆ ಶಿರವ ಬಾಗುವುದಂತೂ ಹೇಗೆ?

ಕಲ್ಲು ,ಮಣ್ಣು ಮರ ಮುಂತಾದವುಗಳನ್ನು ಆರಾಧ್ಯ ವಸ್ತುಗಳನ್ನಾಗಿಸುವ ಔಚಿತ್ಯವಾದರೂ ಏನು?