الأربعاء، 18 فبراير 2009
الثلاثاء، 17 فبراير 2009
الجمعة، 13 فبراير 2009
ಮಿತ್ರನಿಗೊಂದು ಪತ್ರ
ಮಿತ್ರನಿಗೊಂದು ಪತ್ರ ಬರೆ
ನೆನಪುಗಳೊಂದು ಚಿತ್ರ ಬರೆ
ಹಗಲಲ್ಲೂ ರಾತ್ರಿಯ ಕತ್ತಲಿದೆ
ಮೋಡಗಳದ್ದೇ ತಂತ್ರ ಬರೆ
ದೇಶದ ಮಡಿಲಲಿ ನೆತ್ತರು ಹರಿಯಿತು
ಮಾತೆಯ ಕೊಂದ ಸುಪುತ್ರ ಬರೆ
'ಸಂಪತ್ತೊಂದೇ ಜೀವನ ಲಕ್ಷ್ಯ'
ನವ ಯುಗದ ನವ ಮಂತ್ರ ಬರೆ
ಕಲುಷಿತ ಸ್ನೇಹ,ಬತ್ತಿದ ಪ್ರೀತಿ
ಮನುಷ್ಯ ಚಲಿಸುವ ಯಂತ್ರ ಬರೆ
ಶಿರಗಳು ಬಾಗಿವೆ ಸ್ರಷ್ಟಿಯ ಮುಂದೆ
ಇದು ಬುದ್ಧಿಗೆ ನಿಲುಕದ ಸೂತ್ರ ಬರೆ
ಲಕ್ಷ್ಮಣ ರೇಖೆಯ ದಾಟುವ ' ಸೀತೆ '
ರಾವಣ ಕಾಮದ ಕುತಂತ್ರ ಬರೆ
ಜ್ಞಾನವೇ ಆಳುವ ಕುರ್ಚಿಯ ಒಡೆಯ
ಅಜ್ಞಾನವು ರಾಜನ ಮಿತ್ರ ಬರೆ
الأربعاء، 11 فبراير 2009
?ಅವನು ಯಾರೆಂದು ನಿಮಗೆ ಗೊತ್ತೇ
ಕೋಪಗೊಂಡರೆ ಅವನ ಪ್ರತಾಪವನ್ನು ಎದುರಿಸುವ ಧೈರ್ಯ ಯಾರಿಗೂ ಇಲ್ಲ
ಆದರೆ ಅವನ ಲ್ಲಿ ಕೋಪಕ್ಕಿಂತ ಕರುಣೆಯೇ ಅಧಿಕ
ನಿದ್ರೆ ಬಿಡಿ ಅವನಿ ಗೆ ತೂಕಡಿಕೆಯೂ ಬಾಧಿಸುವುದಿಲ್ಲ
ಅವನಿದ್ದಾನೆ ಆದರೆ ಅವನು ಯಾರಿಂದಲೂ ಬಂದಿಲ್ಲ ಅರ್ಥಾತ್ ಅವನು ಯಾರ ಸಂತಾನವೂ ಅಲ್ಲ
ಎಲ್ಲರನ್ನೂ, ಎಲ್ಲವನ್ನೂ ಅವನೇ ಸ್ರಷ್ಟಿಸಿದ ಆದರೆ ಅವನಿಗಾರೂ ಸಂತಾನವಿಲ್ಲ
ಅವನೇ ಮೊದಲು ಅವನಿಗಿಂತ ಮೊದಲು ಯಾರೂ ಇಲ್ಲ
ಅವನೇ ಅಂತ್ಯ ಅವನಿಗೆ ಅಂತ್ಯವಿಲ್ಲ
ಅವನು ಯಾವುದಾದರೊಂದು ವಿಷಯದ ಸಂಕಲ್ಪ ಮಾಡಿದಾಗ ಅದಕ್ಕೆ "ಆಗಿ ಬಿಡು" ಎಂಬ ಅಪ್ಪಣೆ ಕೊಡುವುದೇ ತಡ, ಅದು ಆಗಿ ಬಿಡುತ್ತದೆ
ಭೂಮಿಯು ಗೋಳಾಕಾರದಲ್ಲಿದೆ ಆದರೂ ಅದನ್ನು ನಿಮ್ಮ ವಾಸಸ್ಥಳವನ್ನಾಗಿಸಿದವನು ಅವನೇ
ನೀವು ಭೂಮಿಯ ಮೇಲೆ ಓಡಾಡುತ್ತೀರಲ್ಲವೇ,ಅದರಲ್ಲಿ ರಸ್ತೆಗಳನ್ನು ಹಾಸಿದವನೂ ಅವನೇ
ಕಣ್ಣುಗಳನ್ನೊಮ್ಮೆತ್ತಿ ಮೇಲೆ ನೋಡಿ! ವಿಶಾಲ ಆಕಾಶ ಯಾವುದೇ ಆಧಾರ ಸ್ತಂಭಗಳಿಲ್ಲದೆ ನಿಂತಿಲ್ಲವೇ!!?
ಆ ಸಪ್ತ ಗಗನಗಳನ್ನು ಇನ್ನೊಮ್ಮೆ ನೋಡಿರಿ.....,
ನಿಮಗೆಲ್ಲಾದರೂ ನ್ಯೂನತೆಕಾಣಿಸುತ್ತಿದೆಯೇ
ಪುನಃ ಪುನಃ ದ್ರಷ್ಟಿ ಹಾಯಿಸಿರಿ,ನಿಮ್ಮ ದ್ರಷ್ಟಿಯು ಸೋತು ಹತಾಶವಾಗಿ ಮರಳಿ ಬರುವುದು
ಹೌದು ಅವುಗಳನ್ನು ನಿಮಗೆ ಮೇಲ್ಛಾವಣಿಯಾಗಿ ಮಾಡಿದವನೂ ಅವನೇ
ಸಾಸಿವೆ ಕಾಳಿನಷ್ಟಿರುವ ಒಂದು ವಸ್ತು ಅದು ಯಾವುದೇ ಬಂಡೆಯಲ್ಲಿ ಅಥವಾ ಆಕಾಶಗಳಲ್ಲಿ ಅಥವಾ ಭೂಮಿಯೊಳಗೆ ಎಲ್ಲಾದರೂ ಅಡಗಿರಲಿ ಅದನ್ನು ಹೊರ ತರುವಷ್ಟು ಅವನು ಸೂಕ್ಷ್ಮದರ್ಶಿಯೂ ವಿವರಪೂರ್ಣನೂ ಆಗಿರುತ್ತಾನೆ.
ಪ್ರತಿಯೊಂದು ವಸ್ತುವಿನಲ್ಲೂ ನೀವು ಜೋಡಿಗಳನ್ನು ನೋಡುತ್ತೀರಲ್ಲವೇ?.....ಈ ವಸ್ತುಗಳನ್ನು ಸೃಷ್ಟಿಸಿದವನೂ ಅವನೇ
ತಾಯಿಯ ಗರ್ಭವನ್ನು ಸೇರುವ ಒಂದು ಬಿಂದು ತುಚ್ಛ ದ್ರವ ಹೇಗೆ ಆಲಿಸುವ ವೀಕ್ಷಿಸುವ ಒಂದು ಸುಂದರ ಮನುಷ್ಯನ ರೂಪ ಪಡೆಯುತ್ತದೆ .ಈ ಕುರಿತು ನೀವೆಂದಾದರೂ ವಿವೇಚಿಸಿದ್ದೀರಾ.... ಇದು ಯಾರ ಕೆಲಸವಾಗಿರಬಹುದು ಮನುಷ್ಯನಿಗಂತೂ ಹೀಗೆ ಮಾಡಲು ಸಾಧ್ಯವೇ ಇಲ್ಲ ... ಇನ್ನು ಕಲ್ಲು,ಮಣ್ಣು,ಮರಗಳು ಹೀಗೆ ಮಾಡಿರಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ .ಇದು ಕೂಡ ಅವನ ಅಗೋಚರ ಕೈಗಳ ಕೈಚಳಕವೇ ಆಗಿರುತ್ತದೆ
ರೈತನು ಭೂಮಿಯನ್ನು ಹೂಳಿ ಬೀಜವನ್ನು ಬಿತ್ತುತ್ತಾನೆ .ನಂತರ ಆಕಾಂಕ್ಷೆಗಳನ್ನು ಹೊತ್ತ ಕಣ್ಣುಗಳಿಂದ ಆಗಸದತ್ತ ನೋಡುತ್ತಾನೆ .... ಇದಕ್ಕಿಂತ ಅಧಿಕ ಅವನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ... ಆಗ"ಅವನು" ಆಕಾಶದಿಂದ ಸುಸಮ್ರದ್ಧ ನೀರನ್ನಿಳಿಸುತ್ತಾನೆ ತರುವಾಯ ಅದರಿಂದ ಉದ್ಯಾನಗಳನ್ನೂ ಕೊಯ್ಲಿನ ಧಾನ್ಯಗಳನ್ನೂ ಮತ್ತು ಎಲ್ಲ ವಿಧದ ನಯನ ಮನೋಹರ ಸಸ್ಯಗಳನ್ನು ಬೆಳೆಸುತ್ತಾನೆ
ನೀರಿನಿಂದ ನಿರ್ಜೀವ ಭೂಮಿಯಲ್ಲಿ ಜೀವಕಳೆಯನ್ನು ಮೂಡಿಸುವ ಅದ್ವಿತೀಯ ಮತ್ತು ಅತ್ಯದ್ಭುತ ಕಲೆಗಾರನವನು.
ಜೀವಿಗಳ ಆಹಾರದ ಹೊಣೆ ಹೊತ್ತವನಲ್ಲವೇ "ಅವನು" , ಆದ್ದರಿಂದಲೇ ಈ ಎಲ್ಲಾ ಏರ್ಪಾಡುಗಳು
ನೀವು ಒಲೆಗಳನ್ನು ಉರಿಸುತ್ತೀರಲ್ಲವೇ .....?
ಹಚ್ಚ ಹಸಿರಾದ ಮರಗಳಿಂದ ನಿಮಗಾಗಿ ಬೆಂಕಿಯನ್ನುಂಟು ಮಾಡಿದವರು ಯಾರು ....!!?
ಜೀವನ ಸಾಧನವಾದ ಈ ಬೆಂಕಿಯನ್ನು ನೀವೇನು ಸ್ವತಃ ಉಂಟು ಮಾಡಿದ್ದೀರಾ!?
ಇಲ್ಲ...!! ಇದೂ ಅವನ ಚಮತ್ಕಾರವೇ.
ಸಮ್ರದ್ಧಿದಾಯಕ ಹಾಲಿನ ಕುರಿತು ನೀವೆಂದಾದರೂ ಆಲೋಚಿಸಿದ್ದೀರಾ...?
"ಅವನು" ಹೇಳುತ್ತಾನೆ : "ನಿಶ್ಚಯವಾಗಿಯೂ ಜಾನುವಾರುಗಳಲ್ಲಿಯೂ ನಿಮಗೊಂದು ಪಾಠವಿದ್ದೇ ಇದೆ .ಅವುಗಳ ಸೆಗಣಿ ಮತ್ತು ರಕ್ತದ ಮಧ್ಯದಿಂದ ಕುಡಿಯುವವರಿಗೆ ಆಹ್ಲಾದಕರವಾದ ಶುದ್ಧ ಹಾಲನ್ನು ನಾವು ಕುಡಿಸುತ್ತೇವೆ " (ಪವಿತ್ರ ಕುರ್ಆನ್,೧೬:೬೬)
ನಿಮಗಾಗಿ ಮತ್ತು ನಿಮ್ಮ ಜೀವನಕ್ಕಾಗಿ ಇಷ್ಟೆಲ್ಲಾ ಅನುಗ್ರಹಗಳನ್ನು ನೀಡಿದ 'ಅವನನ್ನು' ನೀವೇಕೆ ಪರಿಚಯಿಸುತ್ತಿಲ್ಲ…?
ಅವನಾದರೂ ಹೀಗೆ ಪ್ರಶ್ನಿಸುತ್ತಿದ್ದಾನೆ , " ಓ ಮಾನವಾ! ಆ ನಿನ್ನ ಕರುಣಾಮಯಿ ಪ್ರಭುವಿನ ಬಗ್ಗೆ ನಿನ್ನನ್ನು ಮೊಸಕ್ಕೊಳಪಡಿಸಿದ ವಸ್ತು ಯಾವುದು?
ಅವನು ನಿನ್ನನ್ನು ಸ್ರಷ್ಟಿಸಿದನು,ನಿನ್ನನ್ನು ನಖ ಶಿಖಾಂತ ಸರಿಪಡಿಸಿದನು,ನಿನ್ನನ್ನು ಸಂತುಲಿತಗೊಳಿಸಿದನು,
ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿ ರಚಿಸಿದನು." (ಪವಿತ್ರ ಕುರ್ಆನ್,82 : 6-8 )
ಮನುಷ್ಯ ಶ್ರೇಷ್ಠ ಸ್ರಷ್ಟಿಯಲ್ಲವೇ , ಅವನ ಶಿರವೂ ಶ್ರೇಷ್ಟ
ಹಾಗಾದರೆ ಶ್ರೇಷ್ಠವಲ್ಲದವುಗಳ ಮುಂದೆ ಶಿರವ ಬಾಗುವುದಂತೂ ಹೇಗೆ?
ಕಲ್ಲು ,ಮಣ್ಣು ಮರ ಮುಂತಾದವುಗಳನ್ನು ಆರಾಧ್ಯ ವಸ್ತುಗಳನ್ನಾಗಿಸುವ ಔಚಿತ್ಯವಾದರೂ ಏನು?
السبت، 7 فبراير 2009
ಪವಾಡ
ಅವನಿಗೆ ವಂಶಪರಂಪರೆಯಿಲ್ಲ
ಪ್ರಸಿದ್ಧ ಮನೆತನವೂ ಅವನದ್ದಲ್ಲ
ಗೋತ್ರ,ಜನಾಂಗದ
ಶೀರ್ಷಿಕೆಯೂ ಅವನಿಗಿರಲಿಲ್ಲ
ಸಮಾಜದಲ್ಲಿ ಗುರುತಿಸಿಕೊಳ್ಳಲು
ಯಾವ ಕುಲನಾಮವೂ
ಅವನಿಗೆ ಲಭ್ಯವಿರಲಿಲ್ಲ
ಹೌದು ..
ಅವನೊಬ್ಬ ಅಜ್ಞಾತನಾಮಕ
ವೈಶಿಷ್ಟ್ಯರಹಿತ ಸಾಮಾನ್ಯ ವ್ಯಕ್ತಿ
ರಸ್ತೆ ಬದಿಯಲ್ಲಿ ಚಿಗುರಿದ ಹುಲ್ಲಿನಂತೆ
ಯಾವ ಬೆಲೆಯೂ ಅವನಿಗಿರಲಿಲ್ಲ
ಆದರೆ ಇಂದು....
ಎಲ್ಲರೂ ಆತನನ್ನು ಹೊಗಳುತ್ತಿದ್ದಾರೆ
ಅದೆಷ್ಟೋ ವಂಶಜರನ್ನವನು
ಮೆಟ್ಟಿ ನಿಂತಿದ್ದಾನೆ
ಅದೆಷ್ಟೋ ಕುಲಜರು ಅವನೆದುರು
ತಲೆ ತಗ್ಗಿಸಿ ನಿಂತಿದ್ದಾರೆ
ಎತ್ತರದಲ್ಲಿ ಎವರಸ್ಟ್ ಬೆಟ್ಟವನ್ನೂ
ಮೀರಿ ನಿಂತಿದ್ದಾನೆ
ಆಲದ ಮರದಂತೆ
ಬೆಳೆದು ನಿಂತಿದ್ದಾನೆ
ಜನ ಮನದಾಸನವನ್ನಲಂಕರಿಸಿದ್ದಾನೆ
ಸಮಾಜದ ಆಗಸದಲ್ಲಿ
ಸೂರ್ಯನಂತೆ ಪ್ರಜ್ವಲಿಸುತ್ತಿದ್ದಾನೆ
ಜನರೀಗ ಆತನ ಹೆಸರನ್ನು
ಗೌರವಾದರದಿಂದ ತೆಗೆಯುತ್ತಾರೆ
ಅವನ ಆತ್ಮಗಥೆಯ
ಗ್ರಂಥ ರಚಿಸುತ್ತಾರೆ
ವಜ್ರ ಮಣಿಗಳು
ದಿನವೊಂದರಲ್ಲಿ ಹಲವು ಬಾರಿ ಮುಖವನ್ನು ತೊಳೆದುಕೊಳ್ಳಲು ತೋರುವ ಉತ್ಸಾಹವನ್ನು ವರ್ಷಕ್ಕೊಮ್ಮೆಯಾದರೂ ಮನ ತೊಳೆದುಕೊಳ್ಳಲು ತೋರಬೇಡವೇ?!
ಒಬ್ಬ ವ್ಯಕ್ತಿಯ ಯತಾರ್ಥ ಗೌರವ ಅವನೆಷ್ಟು ಉನ್ನತಿ ಗೇರಿದ್ದಾನೆಂಬುದರಲ್ಲಿಲ್ಲ ಬದಲಾಗಿ ಆ ಉನ್ನತಿಗೇರಲು ತುಳಿದ ಹಾದಿಯಿಂದ ಬರುತ್ತದೆ.
ಮೌನವಾಗಿರು ಜನರ ಪ್ರೀತಿಗೆ ಪಾತ್ರನಾಗುವೆ. ಮ್ರದುವಾಗಿರು ಜನರ ಗೌರವಕ್ಕೆ ಪಾತ್ರನಾಗುವೆ.
ತನ್ನನ್ನು ಯಾರೊಂದಿಗೂ ಹೋಲಿಸ ಬೇಡ . ಅದು ನಿನ್ನನ್ನು ನೀನೇ ಹೀಯಾಳಿಸಿದಂತೆ.
ಇತರರನ್ನು ದೂರಬೇಡ ಸಾಧ್ಯವಾದರೆ ತನ್ನನ್ನು ತಾನೇ ಬದಲಾಯಿಸಿಕೊಳ್ಳು ಏಕೆಂದರೆ ಭೂಮಿಗೆ ಹೊದಿಕೆ ಹಾಸುವುದಕ್ಕಿಂತ ಮೆಟ್ಟು ಧರಿಸಿ ಕಾಲನ್ನು ರಕ್ಷಿಸಿಕೊಳ್ಳುವುದೇ ಲೇಸು.
ಆರಂಭವು ಕೆಟ್ಟದಾಗಿತ್ತೆಂದು ಹಿಂದೆ ಹೋಗಿ ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ತತ್ ಕ್ಷಣ ಕ್ರಿಯಾಶೀಲನಾಗಿ ಒಳ್ಳೆಯ ಅಂತ್ಯವನ್ನು ಕಾಣಲು ಎಲ್ಲರಿಂದಲೂ ಸಾಧ್ಯ.
ಇತರರ ತಪ್ಪುಗಳೆಡೆಗೆ ಬೆರಳು ತೋರಿಸುವುದು ಸುಲಭದ ಕೆಲಸ ಆದರೆ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದೇ ಕಷ್ಟ ಬಗೆಹರಿಸಲು ಸಾಧ್ಯವಿರುವ ಸಮಸ್ಯೆಯ ಕುರಿತು ಬೇಸರ ಪಡುವ ಅಗತ್ಯವಿಲ್ಲ.
ಬಗೆಹರಿಸಲಸಾಧ್ಯವಾದ ಸಮಸ್ಯೆಯ ಕುರಿತು ಬೇಸರ ಪಟ್ಟು ಲಭಿಸುವುದಾದರೂ ಏನು? ಸೋಲನ್ನು ಧೈರ್ಯದಿಂದ ಎದುರಿಸು ಮತ್ತು ಗೆದ್ದೂ ಶಾಂತವಾಗಿರು.
ಕೈ ಇಲ್ಲದ ಕೀಲಿಯನ್ನು ಯಾವೊಬ್ಬನೂ ತಯಾರಿಸುವುದಿಲ್ಲ ಅಂದ ಹಾಗೆ ಪರಿಹಾರವಿಲ್ಲದ ಸಮಸ್ಯೆಯನ್ನೂ ದೇವನು ಸ್ರಷ್ಟಿಸಿಲ್ಲ. ಯಶಸ್ಸನ್ನರಸಿದ ಪ್ರತಿಯೊಬ್ಬನ ಹಿಂದೆಯೂ ವೇದನಾಜನಕ ಕಥೆಯೊಂದಿರುತ್ತದೆ ಅದೇ ಪ್ರಕಾರ ಪ್ರತಿಯೊಂದು ವೇದನಾಯುಕ್ತ ಕಥೆಯೂ ಯಶಸ್ಸಿನೊಂದಿಗೆ ಅಂತ್ಯಗೊಳ್ಳುತ್ತದೆ ಎಂಬ ನಂಬಿಕೆ ಇಡು. ಕಾಯಿಸಿದ ಸ್ವರ್ಣ ಆಭರಣವಾಗಿ ಬದಲಾಗುತ್ತದೆ.
ಪೆಟ್ಟು ತಿಂದ ತಾಮ್ರ ತಂತಿಯಾಗಿ ರೂಪುಗೊಳ್ಳುತ್ತದೆ ಮತ್ತು ಕೆತ್ತಲ್ಪಟ್ಟ ಶಿಲೆಯು ಶಿಲ್ಪವಾಗುತ್ತದೆ. ಹಾಗಾದರೆ ನೋವು ತಿಂದಷ್ಟೂ ನೀನು ಅಮೂಲ್ಯನಾಗುತ್ತಾ ಹೋಗುವೆ.
ತಪ್ಪು ಸಂಭವಿಸುವುದು ಮನುಷ್ಯ ಸಹಜ . ತಪ್ಪು ಸಂಭವಿಸಿದ ಕ್ಷಣ ಬಹಳ ಖೇದ ಉಂಟಾಗುತ್ತದೆ ಆದರೆ ಒಂದು ಹಂತದಲ್ಲಿ ಇದೇ ತಪ್ಪುಗಳು ವಿಜಯದತ್ತ ಸಾಗಿಸುವ ಅನುಭವ ಜ್ಞಾನವಾಗಿರುತ್ತದೆ.
ನೀನು ವ್ಯಾಕುಲನಾದಾಗ ಜೀವನ ನಿನ್ನನ್ನು ಗೇಲಿಮಾಡಿ ನಗುತ್ತದೆ. ನಿನ್ನನ್ನು ಸಂತ್ರಪ್ತನಾಗಿ ಕಂಡಾಗ ಜೀವನ ಮಂದಹಾಸ ಬೀರುತ್ತದೆ. ಆದರೆ ನೀನು ಇತರರನ್ನು ಸಂತೋಷ ಪಡಿಸಿದರೆ ಜೀವನ ನಿನ್ನನ್ನು ಅಬಿವಂದಿಸುತ್ತದೆ.
ಒಂದು ಸುದವಕಾಶವು ಕೈ ಚೆಲ್ಲಿತೆಂದು ಕಣ್ಣಲ್ಲಿ ನೀರು ತುಂಬಿಕೊಳ್ಳಬೇಡ, ಇತರ ಉತ್ತಮ ಅವಕಾಶಗಳೂ ಕಾಣದೆ ಹೋಗಬಹುದು.
الجمعة، 6 فبراير 2009
ವ್ಯಕ್ತಿ ಮತ್ತು ಆತನ ಪ್ರಭು
ಮನುಷ್ಯನ ತನ್ನ ಸ್ರಷ್ಟಿಕರ್ತನೊಂದಿಗಿರುವ ಸಂಬಂಧವು ಏಕದೇವತ್ವದ ಸಂದೇಶವನ್ನು ಸಾರುವ "ಲಾ ಇಲಾಹ ಇಲ್ಲಲ್ಲಾಹು" ಎಂಬ ಪವಿತ್ರ ವಚನದ ಆಧಾರದ ಮೇಲೆ ನಿಂತಿದೆ. ಇದರ ಅರ್ಥ ಅಲ್ಲಾಹನ ಹೊರತು ಆರಾಧನೆಗೆ ಅರ್ಹ ಯಾರೂ ಇಲ್ಲ ವೆಂದಾಗಿರುತ್ತದೆ. ವ್ಯಕ್ತಿಯು ತನ್ನ ಪ್ರಭುವಿಗೆ ತೋರುವ ವಿಧೇಯತೆಯು ಎಲ್ಲ ಸಮಯ ಮತ್ತು ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಕಟವಾಗಬೇಕು. ಕೇವಲ ಅವನನ್ನು ಮಾತ್ರ ಸರ್ವಾಧಿಕಾರಿಯನ್ನಾಗಿ ಅಂಗೀಕರಿಸಬೇಕು, ಅವನ ಮೇಲೆ ಭರವಸೆಯಿಡಬೇಕು, ಅವನನ್ನು ಭಯ ಪಡಬೇಕು, ಅವನೆಡೆಗೆ ಮರಳುವವನಾಗಿರಬೇಕು, ಅವನ ನಿಯಮವನ್ನು ಜಾರಿ ಗೊಳಿಸಬೇಕು, ಅವನ ಧರ್ಮವನ್ನು ಸಂಸ್ಥಾಪಿಸಬೇಕು. ಇವುಗಳೆಲ್ಲ ವ್ಯಕ್ತಿಯ ಸಂಬಂಧವನ್ನು ಆತನ ಪ್ರಭುವಿನೊಂದಿಗೆ ಗಟ್ಟಿಯಾಗಿಸುತ್ತದೆ. ಮತ್ತು ಅಲ್ಲಾಹನ ಮುಂದೆ ಆತನ ಶರಣಾಗತಿಯ ಪ್ರಮಾಣವನ್ನು ವ್ಯಕ್ತವಾಗಿಸುತ್ತದೆ.
ಆರಾಧನೆಗಳು ಆತ್ಮವನ್ನು ಸಂಸ್ಕರಿಸುತ್ತದೆ ಮತ್ತು ಅದನ್ನು ನಿರ್ಮಲಗೊಳಿಸುತ್ತದೆ. ತೆರೆಯಲ್ಲಿಯೂ ಮರೆಯಲ್ಲಿಯೂ ಅಲ್ಲಾಹನ ಸ್ಮರಣೆ ಅವನನ್ನು ದುಷ್ಕರ್ಮಗಳಿಂದ ತಡೆದು ನಿಲ್ಲಿಸುತ್ತದೆ ಹಾಗೂ ಸತ್ಕರ್ಮಗಳನ್ನು ಮಾಡಲು ಪ್ರೇರೇಪಿಸುತ್ತದೆ. ಇದು ಸಮಾಜದ ಸ್ಥಿರತೆಗೆ ಕಾರಣವಾಗುತ್ತದೆ. ಮಾತ್ರವಲ್ಲ ಇದು ಸಮಾಜದಲ್ಲಿ ಸಮಾನತೆ, ನ್ಯಾಯ, ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಹಿರಿಮೆ, ಹೊಂದಾಣಿಕೆ ಮತ್ತು ತ್ಯಾಗಗಳಂತಹ ಉತ್ತಮ ಆದರ್ಶಗಳನ್ನು ವ್ರದ್ಧಿಸಲೂ ಕಾರಣವಾಗುತ್ತದೆ. ಹೀಗೆ ವ್ಯಕ್ತಿ ಮತ್ತು ಆತನ ಪ್ರಭುವಿನ ಮಧ್ಯೆ ಸಂಬಂಧ ಗಟ್ಟಿಯಾದಂತೆಲ್ಲಾ ವ್ಯಕ್ತಿ ಮತ್ತು ಸಮಾಜದ ಮಧ್ಯೆ ಸಂಬಂಧವನ್ನು ವ್ರದ್ಧಿಸಲು ವಿಶಾಲ ದಾರಿ ಉಂಟಾಗುತ್ತದೆ.
الأحد، 1 فبراير 2009
?ಜೀವನವೇನು
ಅದು ಬಿಡಿಸಲಾಗದ ಒಗಟು
ಮೃದುವಾಗಿದ್ದೂ ಬಲು ಒರಟು
ಜೀವನವೇನು ?
ಅದು ಕಡಲಾಚೆಯ ಸುಂದರ ದ್ವೀಪ
ಅದು ಕಾಣದ, ನೌಕೆಯ ಲೋಪ
ಜೀವನವೇನು ?
ಅರಳಿದರೆ ಅದು ಹೂಗಳ ಪರಿಮಳ
ಕೆರಳಿದರೆ ಅದು ಕ್ಲೇಷಗಳಂಗಳ
ಜೀವನವೇನು ?
ಹಿಗ್ಗಿದರೆ ಅದು ಗಣನಾತೀತ
ಕುಗ್ಗಿದರೆ ಅದು ಉಸಿರಿಗೆ ಸೀಮಿತ
ಜೀವನವೇನು ?
ಕರಗಿದರೆ ಅದು ಬಾಷ್ಪದ ಹನಿಗಳು
ಮೆರೆದರೆ ಅದು ಸಾಗರ ಅಲೆಗಳು
ಜೀವನವೇನು ?
ಅದು ಆಸೆ, ಬಯಕೆಗಳ ಬಿಡಾರ
ಅದು ಸುಖ, ಸಂತೋಷದ ಆಗರ
ಜೀವನವೇನು ?
ಅದು ಚಿಂತೆ, ವ್ಯಥೆಗಳ ಬೀಡು
ಅದು ಶೋಕತಪ್ತರ ನಾಡು
ಜೀವನವೇನು ?
ಅದು ಬೆಳದಿಂಗಳ ಬೆಳಕು
ಅದು ತಾರೆಗಳ ಥಳಕು
ಜೀವನವೇನು ?
ಅದು ನಿರೀಕ್ಷೆಯ ಯಾತನೆ
ಅದು ವಿರಹದ ವೇದನೆ
ಜೀವನವೇ ನಾ ನಿನ್ನ ಅರಿಯದಾದೆ
ನನ್ನನ್ನು ಅಗಲಿ ನೀ ಎಲ್ಲಿ ಮರೆಯಾದೆ
الخميس، 29 يناير 2009
ಉಸಿರು ಆಟ
ಬದುಕೆಂಬುದು ಒಂದು 'ಉಸಿರು ಆಟ'
ತೈಲವು ಮುಗಿದರೆ ಸಾಗದು ಬಂಡಿ
ನಿಂತರೆ ಉಸಿರು ಮುಗಿಯಿತು ಆಟ
ಆದರೆ ಮುಗಿಯದು ಕರ್ಮದ ಕಾಟ
ಆತ್ಮಕೆ ಉಣಿಸಿರಿ ಅಮ್ರತ ಊಟ
ಮಾನವ ಕಲಿಯಲಿ ಇದರಿಂದ ಪಾಠ
ಮುಂದೆ ಸಾಗಲಿ ಬದುಕಿನ ಓಟ
السبت، 24 يناير 2009
?'ಇಸ್ಲಾಂ' ಏನಿದು ? ಯಾಕಿದು
ಹ್ರದಯ ಬಿಚ್ಚಿದ ಅಣ್ಣಾದೊರೈ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀ ಅಣ್ಣಾದೊರೈಯವರು 1957 ರ ಅಕ್ಟೋಬರ್
7 ರಂದು ಪ್ರವಾದಿ ಜೀವನ ಕುರಿತು ಒಂದು ಭಾಷಣ ಮಾಡಿದ್ದರು ಅದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ. ತನ್ನಭಾಷಣದಲ್ಲಿ ಅಣ್ಣಾದೊರೈಯವರು ಈ ರೀತಿ ಹೇಳಿದ್ದರು.
"ಇಸ್ಲಾಂ ಧರ್ಮದ ತತ್ವಗಳು ಮತ್ತು ವಿಶ್ವಾಸಗಳ ಅಗತ್ಯ ಆರನೇ ಶತಮಾನದಲ್ಲಿದ್ದಂತೆಯೇ ಇಂದಿನ ಜಗತ್ತಿಗೂ ಇದೆ. ಇಂದುಜಗತ್ತು ಅನೇಕ ಸಿದ್ಧಾಂತಗಳ ಹುಡುಕಾಟದಲ್ಲಿ ಎಡವಿ ಬೀಳುತ್ತಿದೆ; ಎಲ್ಲಿಯೂ ಅದಕ್ಕೆ ತ್ರಪ್ತಿ ಲಭಿಸಿಲ್ಲ.
ಇಸ್ಲಾಂ ಕೇವಲ ಒಂದು ಧರ್ಮವಲ್ಲ. ಅದು ಒಂದು ಜೀವನ ಸಿದ್ಧಾಂತ ಮತ್ತು ಅತ್ಯುತ್ತಮ ಜೀವನ ವ್ಯವಸ್ಥೆ ಯಾಗಿದೆ. ಈ ಜೀವನಕ್ರಮವನ್ನು ಲೋಕದ ಅನೇಕ ರಾಷ್ಟ್ರಗಳು ಪಾಲಿಸುತ್ತಿವೆ."
ಇಸ್ಲಾಮೀ ಜೀವನ ಸಿದ್ಧಾಂತ ಮತ್ತು ಇಸ್ಲಾಮೀ ಜೀವನ ವ್ಯವಸ್ಥೆಯನ್ನು ನಾವು ಹೊಗಳುವುದು ಏಕೆ?
ಅಣ್ಣಾದೊರೈಯವರು ಹೇಳುತ್ತಾರೆ "..ಇಸ್ಲಾಮೀ ಜೀವನ ಸಿದ್ಧಾಂತವು ಮನುಷ್ಯ ಮನಸ್ಸಿನಲ್ಲಿ ಏಳುವ ಎಲ್ಲ ಸಂಶಯಗಳಿಗೆಅತ್ಯುತ್ತಮ ರೀತಿಯಲ್ಲಿ ಉತ್ತರನೀಡುತ್ತದೆ ಎಂಬುದಕ್ಕಾಗಿ ಮಾತ್ರ." (ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"(ನಾನುಪ್ರೀತಿಸುವ ಇಸ್ಲಾಂ )ಪುಟ 38.ಅನುವಾದಕರು:ಇಬ್ರಾಹೀಂ ಸಯೀದ್)
ಗಾಂಧೀಜಿಯ ಕನಸು
ಇದೇರೀತಿ ಮಹಾತ್ಮ ಗಾಂಧೀಜಿಯವರೊಮ್ಮೆ ಹೇಳಿದ್ದರು "ಒಂದು ವೇಳೆ ನಾನು ಭಾರತದ ಸರ್ವಾಧಿಕಾರಿಯಾದರೆ ಒಂದುಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯದ ಖಲೀಫರಾಗಿದ್ದ ಉಮರ್ ರಂತೆ ಆಡಳಿತ
ನಡೆಸುತ್ತೇನೆ " ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್(ರ) ರವರ ಆಡಳಿತಾವಧಿಯು ಎಲ್ಲ ವಿಧದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು'ಖಲೀಫ'ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು.
ನಂಬರ್ ವನ್....
ಡಾ .ಹೆಚ್ ಮೈಕಲ್ ಹಾರ್ಟ್ ಮನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ
ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ ಆದರೆ ಅವರೆಲ್ಲರ ಪೈಕಿ ಮುಹಮ್ಮದ್(ಸ)ರಿಗೆ ಮೊದಲ ಸ್ಥಾನ ಕೊಡಲು ಅವರುನಿರ್ಬಂಧಿತರಾಗುತ್ತಾರೆ.ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್(ಸ)ರಿಗೆ ಮಾತ್ರ ಸೇರಿದ್ದಾಗಿದೆ.
ಸರ್ವ ಸಮಸ್ಯೆಗಳ ಏಕೈಕ ಪರಿಹಾರ
ಪ್ರಸಿದ್ಧ ತತ್ವಜ್ಞಾನಿ ಹಾಗೂ ಖ್ಯಾತ ಚಿಂತಕನಾದ ಬರ್ನಾಡ್ ಷಾ ಹೇಳುವಂತೆ "ಆಧುನಿಕ ಲೋಕದ ಎಲ್ಲ ವಿಧ ಸಮಸ್ಯೆಗಳನ್ನುಬಗೆಹರಿಸಬೇಕಾದರೆ ಅದಕ್ಕಿರುವ ಒಂದೇ ಒಂದು ಮಾರ್ಗ ಮುಹಮ್ಮದರಂತಹ ಓರ್ವ ವ್ಯಕ್ತಿಯನ್ನು ಸರ್ವಾಧಿಕಾರಿಯನ್ನಾಗಿಮಾಡುವುದಾಗಿದೆ."
ಅದೇ ಪ್ರಕಾರ " ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಒಂದು ಧರ್ಮವಿದ್ದರೆ ಅದು ಇಸ್ಲಾಂ ಮಾತ್ರ ವಾಗಿದೆ ." ಎಂದೂ ಬರ್ನಾಡ್ಷಾ ಹೇಳಿರುತ್ತಾನೆ.
ಈ ಎಲ್ಲ ಅಬಿಪ್ರಾಯಗಳಿಂದ ವ್ಯಕ್ತವಾಗುವುದೇನೆಂದರೆ ಇಸ್ಲಾಂ ಮಾತ್ರ ಸರ್ವಸಮಸ್ಯೆಗಳ ಏಕೈಕ
ಪರಿಹಾರವಾಗಿದೆ.
ರಾಜಭಾವನದಲ್ಲೂ, ತನು ಮನದಲ್ಲೂ ಆಡಳಿತ ನಡೆಸಲು ಯೋಗ್ಯವಾದ ಮಾತ್ರವಲ್ಲ ಅದನ್ನು ನಿಜ ಜೀವನದಲ್ಲಿ ಸಾಧಿಸಿತೋರಿಸಿದ ಏಕೈಕ ಧರ್ಮವಾಗಿದೆ ಇಸ್ಲಾಂ. ಬುದ್ಧಿಯುಳ್ಳವರು ಮತ್ತು ಚಿಂತನೆ ನಡೆಸುವವರಿಗೆ ಇದನ್ನು ಅಂಗೀಕರಿಸದೆ ಬೇರೆಉಪಾಯವಿಲ್ಲ.
ನಿರಕ್ಷರಿ ತಂದ ಕ್ರಾಂತಿ
ಚರಿತ್ರೆಯ ಪುಟಗಳಲ್ಲೊಮ್ಮೆ ಇಣುಕಿ ಈ ಧರ್ಮ ತುಳಿದು ಬಂದ ಹಾದಿಯನ್ನೊಮ್ಮೆ ವೀಕ್ಷಿಸೋಣ.
ಸರಿಸುಮಾರು 1450 ವರ್ಷಗಳ ಹಿಂದೆ ಅರೇಬಿಯಾ ಮರುಭೂಮಿಯಲ್ಲಿರುವ ಮಕ್ಕಾನಗರಿಯ ಇತಿಹಾಸ ವು ಅತ್ಯದ್ಭುತತಿರುವನ್ನು ಕಂಡಿತು. ತನ್ನ ಬಾಲ್ಯ ದಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದವನೊಬ್ಬ ತನ್ನ 40ನೇ ವಯಸ್ಸಿನಲ್ಲಿ ಮರಳುಗಾಡಿನಲ್ಲಿಕ್ರಾಂತಿಯ ಬಿರುಗಾಳಿಯನ್ನೆಬ್ಬಿಸಿದ ರೋಚಕ ಕಥೆಯಿದು. ಅಚ್ಚರಿ ಮೂಡಿಸುವ ಈ ಕ್ರಾಂತಿಯು ಬಿರುಗಾಳಿಯಂತೆ ಅಖಂಡ ಅರಬ್ದೇಶ ಮಾತ್ರವಲ್ಲ ಇಡೀ ಜಗತ್ತನ್ನೇ ವ್ಯಾಪಿಸಿತು.ತಂದೆಯ ಮುಖವನ್ನು ನೋಡದ ಬಾಲ್ಯದಲ್ಲೇ ತಾಯಿಯ ವಿಯೋಗದ ವೇದನೆಯನ್ನನುಭ ವಿಸಿದ ಮತ್ತದರ ಬೆನ್ನಲ್ಲೇ ಪ್ರೀತಿಯ ತಾತರನ್ನೂ ಕಳಕೊಂಡು ಒಬ್ಬಂಟಿಗನಾಗಿ ಸಂಕಷ್ಟದಲ್ಲಿ ಸಿಲುಕಿದ ಓರ್ವ ನಿರಕ್ಷರಿಅನಾಥನ ಮೂಲಕ ಮಾನವ ಜಗತ್ತಿಗೆ ದೊರೆತ ಅನುಗ್ರಹೀತ ಹಾಗೂ ಅವಿಸ್ಮರಣೀಯ ಕ್ರಾಂತಿಯ ಕಥೆಯಿದು.ಈ ಕ್ರಾಂತಿಯಹೆಸರೇ'ಇಸ್ಲಾಂ'ಆಗಿದೆ. ಆದಿ ಮಾನವನೂ ಮೊತ್ತ ಮೊದಲ ಪ್ರವಾದಿಯೂ ಆದ ಹ.ಆದಮ್ (ಅ)ರಿಂದ ಹಿಡಿದು ಮಾನವಮಾರ್ಗದರ್ಶನಕ್ಕಾಗಿ ಹಂತ ಹಂತವಾಗಿ ಆಗಮಿಸುತ್ತಿದ್ದ ಪ್ರವಾದಿಗಳ ಸರಪಳಿಯ ಕೊನೆಯ ಕೊಂಡಿಯಾಗಿ ಈ ಮಹಾನ್ಕ್ರಾಂತಿಕಾರಿ ಪ್ರವಾದಿಯು ಜಗತ್ತಿಗಾಗಮಿಸಿದರು. ಅವರೇನೂ ಹೊಸ ಸಂದೇಶವನ್ನು ನೀಡಲಿಲ್ಲ ಬದಲಾಗಿ ತನಗಿಂತ ಮುಂಚೆಪ್ರತ್ಯೇಕ ಕಾಲ ಮತ್ತು ಸಮುದಾಯಗಳಲ್ಲಿ ಆಗಮಿಸುತ್ತಿದ್ದ, ಪ್ರವಾದಿಗಳೆಂದು ಕರೆಯಲ್ಪಡುತ್ತಿದ್ದ ಸತ್ಪುರುಷರು ನೀಡಿದ "ಏಕ ಮತ್ತುನೈಜ ಆರಾಧ್ಯನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ" ಎಂಬ ಸಂದೇಶವನ್ನೇ ಅವರೂ ಸಾರಿದರು. ಆಡಮ್ ಎಂದುನಾಮಾಂಕಿತರಾದ ಹ.ಆದಂ, ನೋಹಾ ಎಂದು ಕರೆಯಲ್ಪಡುವ ಹ.ನೂಹ್,ಅಬ್ರಹಾಂ ಎಂದು ಪ್ರಸಿದ್ಧರಾದ ಹ.ಇಬ್ರಾಹೀಂ, ಡೇವಿಡ್ಎಂದು ಪ್ರಖ್ಯಾತ ರಾದ ಹ.ದಾವೂದ್,ಮೋಸೆಸ್ ಎಂದು ನಾಮಪಡೆದ ಹ.ಮೂಸಾ,ಏಸುಕ್ರಿಸ್ತ ಎಂದು ಆರಾಧ್ಯ ಪಟ್ಟಕ್ಕೇರಿ ಸಲ್ಪಟ್ಟಹ.ಈಸಾ ಈಎಲ್ಲ ಗತಕಾಲದ ಪ್ರವಾದಿಗಳೂ ಇದೇ ಸಂದೇಶವನ್ನು ತನ್ನ ತನ್ನ ಸಮುದಾಯ ಗಳ ಮುಂದಿಟ್ಟಿದ್ದರು.
ನಲ್ವತ್ತು ವರ್ಷಗಳ ಕಾಲ ಪ್ರತಿಯೊಂದು ನಿಮಿಷವನ್ನೂ ತನ್ನದೇ ಸಮಾಜದಲ್ಲಿ ಅವರು ಕಳೆದಿದ್ದರು. ತನ್ನ ಉತ್ತಮ ಗುಣನಡತೆಮತ್ತು ಪಾವನ, ಪರಿಶುದ್ಧ ಸ್ವಭಾವದಿಂದಾಗಿ ಬಾಲ್ಯದಿಂದಲೇ ಸಮಾಜದ ಪ್ರತಿ ಯೊಬ್ಬ ಸದಸ್ಯನ ಕಣ್ಮಣಿಯಾಗಿದ್ದ ಇವರಪ್ರಾಮಾಣಿಕತೆ ಮತ್ತು ಸತ್ಯವಂತಿಕೆ ಜನಜನಿತವಾಗಿತ್ತು, ಆದ್ದರಿಂದಲೇ ಇಡೀ ಜನಾಂಗವೇ ಅವರನ್ನು'ಅಲ್ ಅಮೀನ್' ಅರ್ಥಾತ್ಪ್ರಾಮಾಣಿಕ ಮತ್ತು 'ಅಸ್ಸಾದಿಕ್' ಅರ್ಥಾತ್ ಸತ್ಯವಂತ ಎಂಬ ಬಿರುದಿನಿಂದ ಕರೆಯುತ್ತಿತ್ತು. ಎಂದೂ ಯಾರನ್ನೂ ದುಖಿಸದ ಇವರುಸ್ವಯಂ ಇತರರಿಗಾಗಿ ದುಃಖವನ್ನು ಸಹಿಸುತ್ತಿದ್ದರು. ಅವರು ಮೂರ್ತಿಪೂಜಕರ ಜನಾಂಗ ದಲ್ಲಿದ್ದರು.ಆದರೆ ಅವ ರೆಂದೂಮೂರ್ತಿಪೂಜೆ ಮಾಡಿದವರಲ್ಲ.ವಿಗ್ರಹಾರಾಧನೆಯನ್ನು ಅವರು ದ್ವೇಷಿಸುತ್ತಿದ್ದರು.ಯಾವ ವಸ್ತುವೂ ಪೂಜಾರ್ಹ ವಲ್ಲವೆಂದು ಅವರಅಂತರಾತ್ಮವೇ ಹೇಳುತ್ತಿತ್ತು.ದೇವನು ಕೇವಲ ಒಬ್ಬನೇ ಆಗಿರಲು ಸಾಧ್ಯ ಎಂದು ಅವರ ಮನಸ್ಸು ಸ್ವಯಂ ಸಾಕ್ಷ್ಯ ವಹಿಸುತ್ತಿತ್ತು.ಆಅಜ್ಞಾನಿ ಜನಾಂಗದ ಮಧ್ಯೆ ಅವರು ಕಲ್ಲಿನ ರಾಶಿ ಯಲ್ಲಿರುವ ವಜ್ರದಂತೆ ಮಿನುಗುತ್ತಿದ್ದರು ಅಥವಾ ಗಾಢ ಅಂಧಕಾರದಲ್ಲಿಅವರೊಂದು ಪ್ರಾಕಾಶಮಾನ ದೀಪವಾಗಿದ್ದರು.
ಗುಹೆಯ ಏಕಾಂತದಲ್ಲಿ
ನಲವತ್ತನೇ ವಯಸ್ಸಿನಲ್ಲಿ ಅವರು ತನ್ನ ಸುತ್ತಲಿರುವ ಅಂಧಕಾರವನ್ನು ಕಂಡು ಗಾಬರಿ ಗೊಳ್ಳುತ್ತಾರೆ. ಅಜ್ಞಾನ,ಅನೀತಿ, ದುರ್ನಡತೆ,ಅಶಿಸ್ತು, ಬಹುದೇವ ವಿಶ್ವಾಸ ಮತ್ತು ವಿಗ್ರಹಾರಾಧನೆಯ ಒಂದು ಭಯಂಕರ ಸಮುದ್ರವು ಅವರನ್ನು ಸುತ್ತುವರಿದಿತ್ತು. ಈಉಸಿರು ಕಟ್ಟುವ ವಾತಾವರಣದಿಂದ ಅವರು ಹೊರ ಬರ ಬಯಸುತ್ತಿದ್ದರು ಮಾತ್ರವಲ್ಲ ತನ್ನಸುತ್ತ ಕವಿದಿರುವ ಅಂಧಕಾರವನ್ನುದೂರೀಕರಿಸುವ ಜ್ಯೋತಿಯೊಂದನ್ನು ಶೋಧಿಸುತ್ತಿದ್ದರು. ಈ ಕೆಟ್ಟು ಹೋದ ವಿಶ್ವವನ್ನು ಅಳಿಸಿ ಒಂದು ಹೊಸ ವಿಶ್ವವನ್ನು ಕಟ್ಟಿ ಬೆಳೆಸಬಯಸುತ್ತಿದ್ದರು. ಅದಕ್ಕಾಗಿ ಅವರು ಜನವಾಸ ದಿಂದ ದೂರ ಮಕ್ಕಾನಗರಿಯ ಹೊರ ಭಾಗದ ಲ್ಲಿದ್ದ ಒಂದು ಬೆಟ್ಟದ ಗವಿಯಲ್ಲಿಏಕಾಂತ ಮತ್ತು ಪ್ರಶಾಂತ ವಾತಾವರಣದಲ್ಲಿ ದಿನಕಳೆಯ ತೊಡಗಿದರು. ಅಲ್ಲಿ ಉಪವಾಸವಿದ್ದು ತಮ್ಮ ಆತ್ಮ,ಮನಸ್ಸು ಮತ್ತುಮಸ್ತಿಷ್ಕವನ್ನು ಇನ್ನಷ್ಟು ಶುದ್ಧವೂ ಪಾವನವೂ ಆಗಿ ಮಾರ್ಪಡಿಸುತ್ತಿದ್ದರು. ಧ್ಯಾನ ಚಿಂತನೆಗಳಲ್ಲಿ ನಿರತ ರಾಗುತ್ತಿದ್ದರು. ಇದ್ದಕ್ಕಿದ್ದಂತೆಒಂದು ದಿನ ಅವರ ಬಳಿ ದೇವಚರರಾದ'ಜಿಬ್ರೀಲ್'ಬಂದು ತಾವು ಸ್ರಷ್ಟಿಕರ್ತನ ಕಡೆಯಿಂದ ಆತನ ಸಂದೇಶವಾಹಕರಾಗಿದ್ದೀರೆಂದುಹೇಳಿ ಅವರಿಗೆ ದೇವನಿದರ್ಶನಗಳನ್ನು ನೀಡಿದರು. ಹೀಗೆ ಅವರು ಗುಹೆಯ ಏಕಾಂತದಿಂದ ಹೊರ ಬರುತ್ತಾರೆ.ಮತ್ತು ತಮ್ಮಜನಾಂಗದ ಮುಂದೆ ಹೋಗಿ "ಈ ವಿಗ್ರಹಗಳು ಯಾವ ಕೆಲಸಕ್ಕೂ ಬರಲಾರವು. ಇವುಗಳನ್ನು ಬಿಟ್ಟು ಬಿಡಿ.ಈ ಭೂಮಿ,ಈ ಸೂರ್ಯ, ಈ ನಕ್ಷತ್ರಗಳು,ಈ ಭೂಮಿ-ಆಕಾಶಗಳಲ್ಲಿರುವ ಎಲ್ಲ ಶಕ್ತಿಗಳು ಒಬ್ಬ ದೇವನ ಸ್ರಷ್ಟಿಗಳು. ಅವನೇ ನಿಮ್ಮಸ್ರಷ್ಟಿಕರ್ತನು,ಪರಿಪಾಲಕನು, ಅನ್ನದಾತನು, ಜೀವನ ಮರಣಗಳನ್ನು ನೀಡುವವನು. ಎಲ್ಲವನ್ನೂ ತೊರೆದು ಆತನನ್ನೇ ಪೂಜಿಸಿರಿ. ಎಲ್ಲರನ್ನೂ ಬಿಟ್ಟು ಅವನಲ್ಲೇ ನಿಮ್ಮ ಅಗತ್ಯಗಳನ್ನು ಬೇಡಿರಿ. ನೀವು ಮಾಡುತ್ತಿರುವ ಈ ಕಳ್ಳತನ,ಲೂಟಿ ,ಮದ್ಯಪಾನ, ಜೂಜಾಟವ್ಯಭಿಚಾರ ಎಲ್ಲವೂ ಮಹಾಪಾಪಗಳಾಗಿವೆ, ಅವುಗಳನ್ನು ತೊರೆಯಿರಿ" ಎಂದು ಹೇಳುತ್ತಾರೆ.
(ಇನ್ನೂ ವಿವರಣೆಗಾಗಿ ಓದಿರಿ ಸಯ್ಯದ್ ಅಬುಲ್ ಆಲಾಮೌದೂದಿಯವರ ಪುಸ್ತಕ'ಇಸ್ಲಾಂ ಧರ್ಮ' ಅನುವಾದಕರು:ಇಬ್ರಾಹೀಂಸಯೀದ್)
ಆಪ್ತರು ಶತ್ರುವಾದಾಗ…
ಸತ್ಯಪಥದ ಸಂದೇಶವಾಹಕರಾಗಿ ಕಾರ್ಯರಂಗಕ್ಕಿಳಿದ ಈ ಪ್ರವಾದಿಯನ್ನು ಕುಟುಂಬ ಸಮೇತ ಇಡೀ ಸಮುದಾಯವೇಪ್ರತಿರೋಧಿಸಿತು.ಈ ಪ್ರತಿರೋಧವೇ ಕ್ರಮೇಣ ದ್ವೇಷ ಮತ್ತು ಹಿಂಸೆಯ ರೂಪ ತಾಳಿತು. ಪ್ರವಾದಿ ಮತ್ತು ಅವರ ಅನುಯಾಯಿಗಳೂಸಮಾಜದ ಹಿಂಸೆ ಮತ್ತು ಅತಿಕ್ರಮಣಕ್ಕೆ ಗುರಿಯಾದರು. ಹಿಂಸೆಯು ಅತಿರೇಕಕ್ಕೆ ತಲುಪಿದಾಗ ಅವರಪೈಕಿ ಕೆಲವರುಪ್ರವಾದಿಯವರ ಆದೇಶದ ಮೇರೆಗೆ ಸಮುದ್ರ ದಾಚಿನ ದೇಶವಾದ ಅಬಿಸೀನಿಯಾಕ್ಕೆ ವಲಸೆ ಹೋಗುತ್ತಾರೆ ಆದರೆ ಶತ್ರುಗಳು ಅಲ್ಲೂಇವರನ್ನು ಹಿಂಬಾ ಲಿಸಿ ಕೊಂಡು ಹೋಗುತ್ತಾರೆ. ಕ್ರೈಸ್ತ ಧರ್ಮಾನುಯಾಯಿಯಾದ ಅಲ್ಲಿಯ ಅರಸ ನಜ್ಜಾಶಿಯ ಮುಂದೆಮುಸಲ್ಮಾನರ ವಿರುದ್ಧ ದೂರನ್ನು ನೀಡಿ ಇವರನ್ನು ನಮಗೆ ಹಿಂತಿರುಗಿಸಬೇಕೆಂದು ವಿನಂತಿಸುತ್ತಾರೆ.
ಆಗ ಸ್ತ್ರೀ-ಪುರುಷ ರನ್ನೊಳಗೊಂಡ ಸರಿಸುಮಾರು ನೂರು ಜನರ ತಂಡವನ್ನು ಪ್ರತಿನಿಧಿಸುತ್ತಾ ಪ್ರವಾದಿ ಯವರ ಪ್ರೀತಿಯಚಿಕ್ಕಪ್ಪರಾದ ಅಬೂತಾಲಿಬರ ಮಗನಾದ ಹ.ಜಾಫರ್(ರ)ರಾಜನ ಮುಂದೆ ಒಂದು ಭಾಷಣ ಮಾಡುತ್ತಾರೆ.
ಹೀಗಿರುವಾಗ ಅಲ್ಲಾಹನು ನಮ್ಮ ಬಳಿ ನ ಮ್ಮಿಂದಲೇ ಒಬ್ಬ ಮಹಾತ್ಮರನ್ನು ಕಳುಹಿಸಿದನು. ಅವರು ಕುಲೀನರೂ ಉತ್ತಮ ವಂಶಪರಂಪರೆಯುಳ್ಳವರೂ ಆಗಿದ್ದರು. ಅವರ ಸತ್ಯ ಸಂಧತೆ, ಪ್ರಾಮಾಣಿಕತೆ, ಪಾವಿತ್ರ್ಯತೆ ಮತ್ತು ಪರಿಶುದ್ಧತೆಯನ್ನು ನಾವೆಲ್ಲರೂಚೆನ್ನಾಗಿ ಅರಿತಿದ್ದೆವು, ಅವರು ನಮಗೆ ಏಕದೇವ ವಿಶ್ವಾಸದ ಸಂದೇಶವನ್ನು ನೀಡಿದರು. ಆ ಏಕ ನೈಜ ಆರಾಧ್ಯ ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿಸಬಾರದು, ಕಲ್ಲುಗಳನ್ನೂ, ಮೂರ್ತಿಗಳನ್ನೂ ಪೂಜಿಸಬಾರದು ಎಂದವರು ನಮಗೆ ತಿಳಿ ಹೇಳಿದರು. ಸತ್ಯವನ್ನೇ ನುಡಿಯಿರಿ, ಕೆಡುಕುಗಳಿಂದ ಮತ್ತು ದುಶ್ಚಟಗಳಿಂದ ದೂರವಿರಿ, ವಾಗ್ದಾನ ವನ್ನು ಪಾಲಿಸಿರಿ ಎಂದವರು ನಮಗೆ ಉಪದೇಶಿಸಿದರು. ಅವರು ನಮಗೆ ವಿನಮ್ರನಾಗುವ, ನಮಾಜ್ ನಿರ್ವಹಿಸುವ,ದಾನ ಧರ್ಮ ನೀಡುವ ಮತ್ತು ವ್ರತಾಚರಿಸುವ ಆದೇಶಗಳನ್ನು ನೀಡಿದರು. ಈ ಮಾತುಗಳಿಂದಲೇ ನಮ್ಮ ಸಮುದಾಯ ನಮ್ಮ ಶತ್ರುವಾಯಿತು ಅವರು ನಮ್ಮನ್ನು ದ್ವೇಷಿಸತೊಡಗಿದರು ಮತ್ತು ಸಾಧ್ಯವಾದಷ್ಟು ನಮ್ಮನ್ನು ಹಿಂಸಿಸಿದರು. ಏಕ ಅಲ್ಲಾಹನನ್ನು ಆರಾಧಿಸುವುದನ್ನು ಬಿಟ್ಟು ಪುನಃ ಕಲ್ಲು,ಮರ ಮತ್ತು ಅವುಗಳಿಂದ ಸ್ವತಃ ನಾವೇ ತಯಾರಿಸಿದ ಮೂರ್ತಿಗಳನ್ನು ಪೂಜಿಸುವಂತೆ ಈಗ ಅವರು ನಮ್ಮನ್ನು ಬಲಾತ್ಕರಿಸುತ್ತಿದ್ದಾರೆ.
ಹೇ ಮಹಾರಾಜರುಗಳೇ ! ನಾವು ಅವರಿಂದ ಬಹಳ ಕಷ್ಟ ಹಾಗೂ ತೊಂದರೆಗಳನ್ನು ಅನುಭವಿಸಿದ್ದೇವೆ. ಸಹಿಸಲಸಾಧ್ಯವಾದ ಹಿಂಸೆಗೆ ಗುರಿಯಾಗಿದ್ದೇವೆ. ಕೊನೆಗೆ ತಮ್ಮ ದೇಶದಲ್ಲಿ ಆಶ್ರಯ ಪಡೆಯಲೆಂದು ವಲಸೆ ಬಂದಿದ್ದೇವೆ......"
ಮಾನವಜಗತ್ತು ಇಂದು ಕೂಡಾ ಪತನದ ಹಾದಿ ತುಳಿದಿರಿವುದನ್ನು ನೀವು ನೋಡುತ್ತಿಲ್ಲವೇ.ವಿಚಾರಗಳು ವಿನಾಶವನ್ನುಹೊತ್ತುಕೊಂಡಿವೆ. ಮಕ್ಕಳು ಭಯಾನಕ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ. ಯುವ ಪೀಳಿಗೆಯ ರಕ್ತದಲ್ಲಿ ವಿಷ ಸಂಚರಿಸುತ್ತಿದೆ. ವ್ರಧ್ಯಾಪವು ವಿಕಾರಗೊಳ್ಳುತ್ತಿವೆ. ಮಾನವ ಸಭ್ಯತೆ ಮತ್ತು ನಾಗರಿಕತೆಯ ಹೆಸರಲ್ಲಿ ಮ್ರಗತ್ವವನ್ನು ಸ್ವೀಕರಿಸುತ್ತಿದ್ದಾನೆ. ಹೀಗಿರುವಾಗ ಮೋಕ್ಷದ ಏಕೈಕ ಮಾರ್ಗ ಇಸ್ಲಾಂ ಮಾತ್ರ ಆಗಿರುತ್ತದೆ. ಇಸ್ಲಾಂ ಮನುಷ್ಯನನ್ನು ಮನುಷ್ಯನಾಗಿಸುತ್ತದೆ. ಅವನ ಆತ್ಮ ಮತ್ತು ಶರೀರ ವನ್ನು ಪರಿಶುದ್ಧ ಮತ್ತು ಪಾವನ ಗೊಳಿಸುತ್ತದೆ. ಇದು ಸಕಲ ಮಾನವರ ಬದುಕನ್ನು ಸುಗಮ ಮತ್ತು ಸುಂದರ ಗೊಳಿಸಲು ಅವತೀರ್ಣಗೊಂಡ ದೈವಿಕ ಜೀವನ ವ್ಯವಸ್ಥೆಯಾಗಿದೆ. ಆದರೆ ಅನೇಕರುಇದನ್ನರಿಯದೆ
"ಹೇ ಜನರೇ! ನಿಮ್ಮನ್ನೂ ನಿಮ್ಮ ಪೂರ್ವಿಕರನ್ನೂ ಸ್ರಷ್ಟಿಸಿದ ನಿಮ್ಮ ಪ್ರಭುವಿನ ದಾಸ್ಯಾರಾಧನೆ ಮಾಡಿರಿ. ಹೀಗೆ ಮಾಡಿದರೆ ನೀವುರಕ್ಷಣೆ ಹೊಂದಬಹುದು. ಅವನೇ ಭೂಮಿಯನ್ನುನಿಮಗೆ ಹಾಸನ್ನಾಗಿ ಹಾಸಿದನು. ನಿಮಗಾಗಿ ಆಕಾಶವನ್ನು ಮೇಲ್ಛಾವಣಿ ಮಾಡಿದನು. ಮೇಲ್ಭಾಗದಿಂದ ಮಳೆ ಸುರಿಸಿದನು.ಅದರ ಮೂಲಕ ತರತರದ ಬೆಳೆಗಳನ್ನು ಉತ್ಪಾದಿಸಿ ನಿಮಗೆ ಆಹಾರ ಒದಗಿಸಿದನು. ಇದನ್ನುನೀವು ಅರಿತಿರುತ್ತ ಇತರ ರನ್ನು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನಾಗಿ ಮಾಡದಿರಿ (ಪವಿತ್ರಕುರ್ಆನ್:ಅಧ್ಯಾಯ 2,ಸೂಕ್ತ 22)
ಇಸ್ಲಾಂ ಎಂದರೇನು?
ಆತ್ಮೀಯರೇ! ನಾವು ಇನ್ನೂ ಸ್ವಲ್ಪ ಮುಂದೆ ಸಾಗಿ ಇಸ್ಲಾಮಿನ ಅಧಿಕ್ರತ ವ್ಯಾಖ್ಯಾನವನ್ನು ತಿಳಿಯೋಣ
ಅರಬೀ ಭಾಷೆಯ'ಇಸ್ಲಾಂ'ಎಂಬ ಪದಕ್ಕೆ ನಿಘಂಟುಗಳಲ್ಲಿ ಅನುಸರಣೆ, ವಿಧೇಯತೆ,ಸಮರ್ಪಣೆ ಎಂಬರ್ಥಗಳಿವೆ. ಅಲ್ಲಾಹನಅನುಸರಣೆ ಮಾಡುವುದು, ಆತನಿಗೆ ವಿಧೇಯತೆ ತೋರುವುದು ಮತ್ತು
ಸರ್ವಸ್ವವನ್ನೂ ಆತನಿಗಾಗಿ ಸಮರ್ಪಿಸುವುದನ್ನು ಇಲ್ಲಿ ಇಸ್ಲಾಂ ಎಂದು ಕರೆಯಲಾಯಿತು. ಹೌದು,ಅಲ್ಲಾಹನ ಸಾನಿಧ್ಯದಲ್ಲಿಸಂಪೂರ್ಣ ಸಮರ್ಪಣೆಯ ಹೆಸರೇ ಇಸ್ಲಾಂ ಆಗಿದೆ.ಆತ್ಮ ಮತ್ತು ಶರೀರದ ಸಂಪೂರ್ಣ ಸಮರ್ಪಣೆ.
ಮನುಷ್ಯ ತನ್ನ ಜೀವನದ ಪ್ರತಿಯೊಂದು ರಂಗದಲ್ಲಿಯೂ ಅಲ್ಲಾಹನ ಆದೇಶ, ನಿರ್ದೇಶಗಳನ್ನು ಪಾಲಿಸ ಬೇಕೆಂದು ಇಸ್ಲಾಂಆಶಿಸುತ್ತದೆ. ಶಿರವನ್ನು ಬಾಗಿಸಿ ದವನು ಮನವನ್ನೂ ಬಾಗಿಸ ಬೇಕೆಂದು ಅದು ಹೇಳುತ್ತದೆ. ಅಲ್ಲಾಹನ ಆದೇಶ ಗಳಿಗೆವಿರುದ್ಧವಾಗಿರುವ ಎಲ್ಲವಿಧ ಆಚಾರ-ವಿಚಾರ,ಸಂಪ್ರದಾಯ ಮತ್ತು ದೇಹೇಚ್ಛೆಗಳನ್ನೂ ಮೆಟ್ಟಿ ನಿಲ್ಲಬೇಕೆಂದು ಇಸ್ಲಾಂ ಆದೇಶಿಸುತ್ತದೆ. ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ ಅವನ ಕಾನೂನುಗಳಿಗೆ ಬದ್ಧನಾಗಿ ಜೀವಿಸಬೇಕು. ವಿಧೇಯತೆಗೆ ಅರ್ಹ ಅಲ್ಲಾಹನುಮಾತ್ರನಾಗಿದ್ದಾನೆ. ಇಸ್ಲಾಂ ಸ್ವೀಕರಿಸುವುದೆಂದರೆ ತನ್ನನ್ನು ದೇಹೇಚ್ಛೆಗಳಿಂದಲೂ,ಅಲ್ಲಾಹೇತರ ದೈವಿಕ ಶಕ್ತಿಗಳ ನಂಬಿಕೆಯಿಂದಲೂಮುಕ್ತಗೊಳಿಸಿ ಅಲ್ಲಾಹನ ಮಾತ್ರ ಅಧೀನತೆ ಯನ್ನು ಸ್ವೀಕರಿಸುವುದಾಗಿದೆ. ಇಸ್ಲಾಮನ್ನು ಪ್ರವೇಶಿಸುವಾಗ ಹೇಳುವ 'ಲಾ ಇಲಾಹಇಲ್ಲಲ್ಲಾಹು'ಎಂಬ ಪವಿತ್ರ ವಚನದ ತಾತ್ಪರ್ಯವೂ ಇದೇ ಆಗಿರುತ್ತದೆ.
ಇಲ್ಲಿ ಯಾಕಿಷ್ಟು ನೀರವತೆ?
ಇಸ್ಲಾಂ ಎಂಬ ಪದಕ್ಕಿರುವ ಇನ್ನೊಂದರ್ಥ ಶಾಂತಿ ಮತ್ತು ಸಮಾಧಾನ ಎಂದಾಗಿದೆ. ಅಲ್ಲಾಹನ ನಿಯಮ ಗಳ ಪಾಲನೆ ಮತ್ತುಆತನ ಕಲ್ಪನೆಗಳ ಅನುಸರಣೆ ಸಂಘರ್ಷ ರಹಿತ ಜೀವನ ನಡೆಸಲು ಅನುಕೂಲಕರ ವಾತಾವರಣವನ್ನು ಸ್ರಷ್ಟಿ ಸುತ್ತದೆ. ಕುಟುಂಬ, ಸಮಾಜ ಮತ್ತು ರಾಷ್ಟ್ರದಲ್ಲೂ ಸಮಾಧಾನ ನೆಲೆಸುತ್ತದೆ. ಹ್ರದಯವು ನೆಮ್ಮದಿಯ ತಾಣವಾಗಿ ಬಿಡುತ್ತದೆ. ಸ್ವಲ್ಪತನ್ನ ಸುತ್ತಮುತ್ತಲಿನಜಗತ್ತನ್ನೊಮ್ಮೆ ಗಮನಿಸಿ ನೋಡಿ ಸೂರ್ಯ, ಚಂದ್ರ, ಭೂಮಿ, ನಕ್ಷತ್ರ ಮತ್ತು ವಿಶ್ವದಲ್ಲಿರುವ ಅಸಂಖ್ಯ ಅಂಗಗಳೆಲ್ಲವೂ ಸೌಹಾರ್ದಯುತ ವಾಗಿ,ಶಾಂತ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆಯಾದರೆ ಅವೆಲ್ಲವೂ ಮುಸ್ಲಿಂ ಆಗಿದೆಯೆಂದರ್ಥ ಇದು ಅವೆಲ್ಲವೂ ಒಬ್ಬನೇದೇವನ ನಿಯಂತ್ರಣದಲ್ಲಿರುವುದನ್ನು ಸಾಬೀತು ಪಡಿಸುತ್ತದೆ . ಆತನಿಗೆ ವಿಧೇ ಯತೆ ತೋರಿ ಅವನನ್ನು ಅನುಸರಿಸುವುದರಿಂದಲೇಇಲ್ಲಿ ಶಾಂತಿ ನೆಲೆಸಿರುವುದು.ಇದೇ ವಾಸ್ತವಿಕತೆ ಯನ್ನು ಪವಿತ್ರ ಕುರ್ಆನ್ ಅತ್ಯಂತ ಮನೋಜ್ಞವಾಗಿ ಈ ರೀತಿ ವಿವರಿಸುತ್ತದೆ.
"ಭೂಮಿ ಆಕಾಶಗಳಲ್ಲಿ ಏಕೈಕ ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಇವೆರಡರ ವ್ಯವಸ್ಥೆಯೂ ಕೆಟ್ಟು ಹೋಗುತ್ತಿತ್ತು. ಆದುದರಿಂದ ವಿಶ್ವ ಸಿಂಹಾಸನದ ಪ್ರಭುವಾಗಿರುವ ಅಲ್ಲಾಹ್ ಇವರು ಹೊರಿಸುವ ಆರೋಪಗಳಿಂದ ಪರಿಶುದ್ಧನಾಗಿರುತ್ತಾನೆ. (ಪವಿತ್ರಕುರ್ಆನ್:ಅಧ್ಯಾಯ21,ಸೂಕ್ತ 22)
ಭೂಮಿಯ ಮೇಲೆ ಈಗ ತಾಂಡವಾಡುತ್ತಿರುವ ಅರಾಜಕತೆ, ಅಶಾಂತಿ ಮತ್ತು ಅಸಮಾಧಾನಕ್ಕೆ ಅಲ್ಲಾಹೇತರ ನಿಯಮ ,ನಿರ್ದೇಶಮತ್ತು ಮನುಷ್ಯ ನಿರ್ಮಿತ ಕಾನೂನುಗಳೇ ಮೂಲ ಕಾರಣ ವಾಗಿದೆ. ನಿಯಮ ನಿರ್ಮಿಸುವ ಅಧಿಕಾರ ಕೇವಲ ಅಲ್ಲಾಹನಿಗೆ ಮಾತ್ರಸೀಮಿತವಾಗಿ ರುತ್ತದೆ.' ಯಾರೂ ಯಾರಿಗೂ ನಿಯಮ ನಿರ್ಮಿಸದಿರಿ, ಎಲ್ಲರೂ ಸ್ರಷ್ಟಿಕರ್ತನೂ,ಜಗದೊಡೆಯನೂ ಆದ ಅಲ್ಲಾಹನನಿಯಮಗಳನ್ನು ಮಾತ್ರ ಪಾಲಿಸಿರಿ'ಎಂದು ಇಸ್ಲಾಂ ಸಾರಿ ಹೇಳುತ್ತದೆ. ಅಲ್ಲಾಹನು ನೀಡಿದ ಜೀವನ ವ್ಯವಸ್ಥೆಯನ್ನು ಮನಃಪೂರ್ವಕ,ಪೂರ್ಣ ಸ್ವತಂತ್ರನಾಗಿ ಸ್ವೀಕರಿಸಿ ಅದನ್ನನುಸರಿಸುವ ಪ್ರತಿಜ್ಞೆ ಮಾಡಿದವನೇ ಯತಾರ್ಥದಲ್ಲಿ ಮುಸ್ಲಿಂ ಆಗಿರುತ್ತಾನೆ.
ಏಕದೇವ ವಿಶ್ವಾಸ
ಏಕದೇವ ವಿಶ್ವಾಸವು ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಮೊದಲನೆ ಯದಾಗಿದೆ.ಈ ಜಗತ್ತು ಮತ್ತದರಲ್ಲಿರುವ ಸಕಲವಸ್ತುಗಳೂ ಏಕ ಸ್ರಷ್ಟಿಕರ್ತನ ಸ್ರಷ್ಟಿಗಳಾಗಿವೆ, ಸಮಸ್ತ ವಿಶ್ವದ ಪರಿಪಾಲಕನೂ, ಒಡೆಯನೂ, ಅಧಿಪತಿಯೂ ಅವನೇ ಆಗಿರುತ್ತಾನೆ. ಆದುದರಿಂದ ಅವನೊಬ್ಬನೇ ಎಲ್ಲ ವಿಧ ಆರಾಧನೆ ಮತ್ತು ಅರ್ಪಣೆಗಳಿಗೆ ಅರ್ಹನಾದವನು, ಅವನ ಹೊರತು ಪೂಜೆ ಮತ್ತುಆರಾಧನೆಗೆ ಅರ್ಹನಾದವನು ಯಾರೂ ಇಲ್ಲ.ಅವನಲ್ಲದೆ ದಾಸ್ಯ ಮತ್ತು ಅನುಸರಣೆಗೆ ಯೋಗ್ಯ ಯಾರೂ ಇಲ್ಲ. ಅವನೊಂದಿಗೆಭಾಗೀ ದಾರನಾಗಿ ಯಾರೂ ಇಲ್ಲ. ಎಲ್ಲರೂ ಆತನ ಆಶ್ರಿತರು,ಅವನಿಂದ ಸಹಾಯ ಯಾಚಿಸಲು ನಿರ್ಬಂಧಿತರು. ಅವನುಭೌತಿಕವಾದ ಒಂದು ವಸ್ತು ಅಲ್ಲದಿರುವುದರಿಂದ ಅವನಿಗೆ ನಿರ್ದಿಷ್ಟ ಬಣ್ಣ,ರೂಪ ಮತ್ತು ಸ್ಥಳ ಎಂಬ
ಬಂಧನಗಳಿಲ್ಲ.ಆದ್ದರಿಂದ ಮಾನವ ಕಣ್ಣಿಗೆ ಆತನನ್ನು ನೋಡಲು ಸಾಧ್ಯವಿಲ್ಲ . ಪ್ರವಾದಿ ಇಬ್ರಾಹೀಂ(ಅ)ರ ಘಟನೆಯನ್ನು ಲ್ಲೇಖಿಸಿಪವಿತ್ರ ಕುರ್ಆನ್ ಹೇಳುತ್ತದೆ:
"ನಾವು ಇಬ್ರಾಹೀಮರಿಗೆ ಇದೇ ರೀತಿಯಲ್ಲಿ ಭೂಮಿ-ಆಕಾಶಗಳ ಸಾಮ್ರಾಜ್ಯ ವ್ಯವಸ್ಥೆಯನ್ನು ತೋರಿಸಿ ಕೊಡುತ್ತಿದ್ದೆವು.ಅವರು ದ್ರಢವಿಶ್ವಾಸವುಳ್ಳವರಾಗ ಬೇಕೆಂದು. ಒಮ್ಮೆ ರಾತ್ರಿಕಾಲವು ಅವರನ್ನಾವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು.'ಇದು ನನ್ನ ಪ್ರಭುಎಂದರು.ಆದರೆ ಅದು ಅಸ್ತಮಿಸಿ ದಾಗ 'ನಾನು ಅಸ್ತಮಿಸುವವರಿಗೆ ಮಾರು ಹೋಗುವುದಿಲ್ಲ 'ಎಂದರು.
ಅನಂತರ ಚಂದ್ರವು ಪ್ರಕಾಶಿಸುತ್ತಿರುವುದನ್ನು ಕಂಡಾಗ'ಇದು ನನ್ನ ಪ್ರಭು'ಎಂದರು.ಆದರೆ ಅದೂ ಮುಳುಗಿ ದಾಗ'ನನ್ನ ಪ್ರಭು ನನಗೆಮಾರ್ಗದರ್ಶನ ವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ ಎಂದರು' ತರುವಾಯ ಸೂರ್ಯನನ್ನು ಪ್ರಕಾಶಮಯವಾಗಿಕಂಡಾಗ 'ಇದು ನನ್ನ ಪ್ರ ಭು,ಇದು ಎಲ್ಲಕ್ಕಿಂತ ದೊಡ್ಡ ದಾಗಿದೆ' ಎಂದರು.ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರುಉದ್ಗರಿಸಿದರು:
"ಓ,ನನ್ನ ಜನಾಂಗ ಬಾಂಧವರೆ ನೀವು ಯಾವುದನ್ನೆಲ್ಲಾ ದೇವನೊಂದಿಗೆ ಸಹಭಾಗಿಗಳನ್ನಾಗಿಸುತ್ತೀರಿ ಅವುಗಳಿಂದ ನಾನುವಿರಕ್ತನಾಗುವೆನು.(ನಂತರ ಹೇಳಿದರು) ನಾನು ಏಕನಿಷ್ಥೆಯಿಂದ ನನ್ನ ಮುಖವನ್ನು ಭೂಮಿ-ಆಕಾಶಗಳನ್ನು ಸ್ರಷ್ಟಿಸಿದವನ ಕಡೆಗೆತಿರುಗಿಸಿದೆನು.ನಾನು ಎಷ್ಟುಮಾತ್ರಕ್ಕೂ ಅಲ್ಲಾಹ ನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ" (ಪವಿತ್ರಕುರ್ಆನ್ :ಅಧ್ಯಾಯ 66,ಸೂಕ್ತ 25-29)
ಮಯನೂ ಕರುಣಾನಿಧಿಯೂ ಆಗಿರುತ್ತಾನೆ. ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ.ಅವನು ಸಾಮ್ರಾಟನು, ಪರಮ ಪಾವನನು. ಸಾಧ್ಯಂತ ಮಂಗಲಮಯನು. ಶಾಂತಿದಾತನು, ಸಂರಕ್ಷಕನು,ಪ್ರಬಲನು, ತನ್ನ ಆಜ್ಞೆಯನ್ನು ಶಕ್ತಿಯಿಂದಅನುಷ್ಥಾನಿಸಿ ಬಿಡುವವನು, ಸದಾ ಸರ್ವೊನ್ನತನಾಗಿಯೇ ಇರುವವನು,ಜನರು ಮಾಡುವ ಸಹಭಾಗಿತ್ವದಿಂದ ಅಲ್ಲಾಹನುಪರಿಶುದ್ಧನು ಸ್ರಷ್ಟಿಯ ಯೋಜನೆ ಮಾಡುವವನೂ ಅದನ್ನು ಜಾರಿ ಗೊಳಿಸುವವನೂ ಅದರಂತೆ ರೂಪ ಕೊಡುವವನೂಅಲ್ಲಾಹನೇ.ಅವನಿಗೆ ಅತ್ಯುತ್ತಮವಾದ ನಾಮಗಳಿವೆ. ಭೂಮಿ ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನನ್ನು ಜಪಿಸುತ್ತದೆ. ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. (ಪವಿತ್ರಕುರ್ಆನ್ :ಅಧ್ಯಾಯ 59,ಸೂಕ್ತ 22-24)
ದೇವನ ಸಹಭಾಗಿ ಯಾರು ತಾನೇ ಆಗಲು ಸಾಧ್ಯ?
ಈ ಹಿಂದೆ ನಾನು ಅಣ್ಣಾದೊರೈಯವರನ್ನು ಪ್ರಸ್ತಾವಿಸಿ ಬಂದಿದ್ದೇನೆ. ನಾನು ಪುನಃ ಅವರ ಭಾಷಣವನ್ನು ಉಲ್ಲೇಖಿಸುತ್ತಿದ್ದೇನೆ.ತನ್ನಭಾಷಣದಲ್ಲಿ ಅವರು ಇಸ್ಲಾಮಿನ ಏಕ ದೇವತ್ವವನ್ನು ವಿವರಿಸುತ್ತಾ ಹೇಳಿದ್ದರು "ದೇವನೊಂದಿಗೆ ಯಾರನ್ನೂ ಸಹಭಾಗಿಗಳಾಗಿಮಾಡಬಾರದು" ಎಂಬುದು ಪ್ರವಾದಿವರ್ಯರ ಶಿಕ್ಷಣ ಗಳಲ್ಲಿ ಅತಿ ಪ್ರಾಮುಖ್ಯವಾದುದು.ಈ ಶಿಕ್ಷಣವನ್ನು ನಾನು ಮನಸಾರೆಗೌರವಿಸುತ್ತೇನೆ ಮತ್ತು ಅದನ್ನು ಮೆಚ್ಚುತ್ತೇನೆ.
ಈ ಶಿಕ್ಷಣವನ್ನು ಏಕೆ ಇಷ್ಟೊಂದು ಗೌರವಿಸಬೇಕು?
ಏಕೆಂದರೆ ಈ ಶಿಕ್ಷಣವು ಮನುಷ್ಯನನ್ನು ವಿಚಾರ ಮಾಡಲು ಪ್ರಚೋದಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ.
ಮುಂದೆ ಹೇಳುತ್ತಾರೆ:ದೇವನೊಂದಿಗೆ ಇತರರನ್ನು ಸಹಭಾಗಿಗಳಾಗಿಸುವು ದೆಂದರೆ ಅವರನ್ನು ದೇವನಿಗೆ ಸಮಾನರೆಂದು
ಪರಿಗಣಿಸಿದಂತಾಗುವುದು.ದೇವನ ಸಹಭಾಗಿ ಯಾರು ತಾನೇ ಆಗಲು ಸಾಧ್ಯ? ಆದುದ ರಿಂದಲೇ ಪ್ರವಾದಿವರ್ಯರುಬಹುದೇವಾರಾಧನೆಯಿಂದ ಜನರನ್ನು ತಡೆದರು.
ಅಣ್ಣಾದೊರೈಹೇಳುತ್ತಾರೆ" ಇತರ ಧರ್ಮಗಳಲ್ಲಿ ಬಹುದೇವಾರಾಧನೆಯ ಶಿಕ್ಷಣ ಮತ್ತು ಅನುಮತಿಯಿರುವು ದರಿಂದ ನಮ್ಮಂಥವರುಅನೇಕ ತರದ ನಷ್ಟಗಳಿಗೆ ಗುರಿಯಾಗಿದ್ದಾರೆ. ಬಹುದೇವಾರಾಧನೆಯ ಎಲ್ಲ ದಾರಿ ಗಳನ್ನು ಮುಚ್ಚುವ ಮೂಲಕ ಇಸ್ಲಾಂ ಮನುಷ್ಯನಿಗೆಹಿರಿಮೆ ಮತ್ತು ಔನ್ನತ್ಯವನ್ನು ನೀಡಿದೆಯಲ್ಲದೆ ನೀಚತೆ ಮತ್ತದರ ಪರಿಣಾಮಗಳಿಂದ ಅವನನ್ನು ರಕ್ಷಿಸಿದೆ."(ಅಡಿಯಾರ್ ರ ಪುಸ್ತಕನಾನ್ ಕಾದಲಿಕ್ಕುಂ ಇಸ್ಲಾಂ"(ನಾನು ಪ್ರೀತಿಸುವ ಇಸ್ಲಾಂ )ಪುಟ 39.ಅನುವಾದಕರು:ಇಬ್ರಾಹೀಂ ಸಯೀದ್ )
ನೇಮಿಸಿದನು.ಮನುಷ್ಯರಾಗಿದ್ದರೂ ಪ್ರವಾದಿಗಳು ಶ್ರೇಷ್ಠ ಸ್ವಭಾವದವರಾಗಿದ್ದರು. ಉತ್ತಮ ಚಾರಿತ್ರ್ಯದಉತ್ತುಂಗಕ್ಕೇರಿದವರಾಗಿದ್ದರು .ಇತರರಂತೆ ಅವರೂ ಆಹಾರವನ್ನು ಸೇವಿಸುತ್ತಿದ್ದರು .ಮಲಮೂತ್ರ ವಿಸ ರ್ಜನೆಮಾಡುತ್ತಿದ್ದರು.ವೈವಾಹಿಕ ಜೀವನ ನಡೆಸುತ್ತಿದ್ದರು.ಸಾರ್ವಜನಿಕ ಮತ್ತು ಸಾಮಾಜಿಕ ಚಟುವಟಿಕೆ ಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇತರರಿಗೆ ನೀಡದ ಪ್ರ ತ್ಯೇಕತೆಯೊಂದನ್ನು ಅ ಲ್ಲಾಹನು ಅವರಿಗೆ ನೀಡಿದ್ದನು.ಅಗೋಚರವಾಗಿ ದೇವಚರರು ಬಂದುಮಾನವರ ಮಾರ್ಗದರ್ಶನಕ್ಕಾಗಿ ಅಲ್ಲಾಹನ ಸಂದೇಶ ಗಳನ್ನು ನೀಡುತ್ತಿದ್ದರು.ದೇವ ಮಾರ್ಗದಿಂದ ದೂರ ಸರಿಯುತ್ತಿದ್ದಮಾನವಸಮೂಹವನ್ನು ದೇವಸಾನಿಧ್ಯಕ್ಕೆ ಕರೆತರಲು ಪ್ರತ್ಯೇಕ ಕಾಲ ಮತ್ತು ವಿಭಿನ್ನ ಸಮುದಾಯಗಳಲ್ಲಿ ಪ್ರವಾದಿಗಳನ್ನುನಿಯೋಜಿಸುವುದು ಅನಿ ವಾರ್ಯವಾಗಿತ್ತು. ಹೀಗೆ ನಿಯೋಜಿಸಲ್ಪಟ್ಟ ಪ್ರವಾದಿಗಳ ಪೈಕಿ ಹ.ಮುಹಮ್ಮದ್(ಸ)ಕೊನೆಯ ಮತ್ತುಅಂತಿಮ ಪ್ರವಾದಿಯಾಗಿರುವರು. ಇನ್ನು ಅಂತ್ಯ ದಿನದವರೆಗೆ ಬೇರೆ ಯಾವ ಪ್ರವಾದಿಯೂ ಆಗಮಿಸ ಲಿಕ್ಕಿಲ್ಲ . ಎಲ್ಲ ಪ್ರವಾದಿಗಳಮೇಲೆ ವಿಶ್ವಾಸವಿಡುವುದು ಕಡ್ದಾಯವಾಗಿದೆಯಾದರೂ ಪ್ರವಾದಿ ಮುಹಮ್ಮದ್(ಸ)ರನ್ನು ಮಾತ್ರ ಅನುಸರಿಸಬೇಕೆಂದು ಇಸ್ಲಾಂಆದೇಶಿಸುತ್ತದೆ.ಇಸ್ಲಾಮನ್ನು ಪ್ರವೇಶಿಸುವಾಗ 'ಮುಹಮ್ಮದುರ್ರಸೂಲುಲ್ಲಾಹಿ 'ಎಂದು ಹೇಳಿ ಇದನ್ನೇ ಪ್ರಖ್ಯಾಪಿಸಲಾಗುತ್ತದೆ.
ಕರ್ಮಗಳಿಗನುಸಾರ ಸ್ವರ್ಗದಲ್ಲಿ ಉನ್ನತ ಪದವಿ ಗಳಲ್ಲಿ ಅಲಂಕರಿಸಲ್ಪಡುವರು.ಅಲ್ಲಿ ಅವರಿಗಾಗಿ ಅವರು ಬಯಸಿದ್ದೆಲ್ಲವೂಇರುವುದು. ಅಲ್ಲಿ ಅವರಿಗೆ ಚಿಲುಮೆಗಳು ಹರಿಯುತ್ತಿರುವ ಉದ್ಯಾನಗಳಿರುವುವು. ಹಚ್ಚ ಹಸುರಾದ ಮರಗಳಿರುವಉದ್ಯಾನವದು.ಅಲ್ಲಿ ಅವರು ದಪ್ಪ ಗಿನ ರೇಷ್ಮೆಯ ಕವಚಗಳಿರುವ ಹಾಸುಗಳ ಮೇಲೆ ದಿಂಬಿಗೊರಗಿ ಕುಳಿತಿರುವರು.ಅಲ್ಲಿಯಮರಗಳು ಫಲ ಗಳ ಭಾರದಿಂದ ಬಾಗುತ್ತಿರುವುವು. ಈ ಸ್ವರ್ಗನಿವಾಸಿಗಳಿಗೆ ಮಾನವನಾಗಲಿ ಅಥವಾ ಜಿನ್ನ್ಆಗಲೀ ಹಿಂದೆಂದೂಸ್ಪರ್ಶಿಸಿರದಂತಹ ವಜ್ರ ಮತ್ತು ಮುತ್ತುಗಳಂತೆ ಸೌಂದರ್ಯವುಳ್ಳ ಲಜ್ಜಾಪೂರ್ಣ ನಯನೆಯರಿರುವರು.
ಇನ್ನು ಯಾರು ಅಲ್ಲಾಹನಿಗೆ ಅವಿಧೇಯತೆ ತೋರಿ ದುಷ್ಕರ್ಮಗಳನ್ನೆಸಗಿರುವರೋ ಅವರು ತಮ್ಮ ಕರ್ಮ ಗಳಿಗೆ ತಕ್ಕ ಶಿಕ್ಷೆಯನ್ನೂಪಡೆಯುವರು.ಶರೀರವನ್ನು ಮಾತ್ರವಲ್ಲ ಮನ ಮಸ್ತಿಷ್ಕವನ್ನೂ ಸುಟ್ಟು ಕರಕಲಾಗಿ ಸುವ 'ನರಕ' ವೆಂಬ ಅಗ್ನಿಕುಂಡವಾಗಿರುವುದುಅವರ ವಾಸಸ್ಥಳ.ಸತ್ಯವನ್ನು ನಿಷೇಧಿಸಿದವರನ್ನು ಅಗ್ನಿಜ್ವಾಲೆ ಗಳು ಆವರಿಸಿರುವುದು.ಅಲ್ಲಿ ಅವರು ದಾಹವನ್ನು ಸಹಿಸಲಾಗದೆನೀರನ್ನು ಕೇಳುವರು ಆಗ ಅವರ ಬಾಯನ್ನು ಸುಟ್ಟುಹಾಕುವಂಥ ಎಣ್ಣೆಯ ಮಡ್ಡಿಯನ್ತಿರುವ ನೀರಿನಿಂದ ಅವರನ್ನು ಸತ್ಕರಿಸ ಲಾಗುವುದು. ಅಲ್ಲಿ ಅನುಕಂಪ ತೋರುವವರಾರೂ ಇರಲಾರರು. ಗಾಯದ ಕೀವು ಇವರ ಆಹಾರವಾಗಿರುವುದು
ಇಸ್ಲಾಮಿನ ಮಹಾ ಸೌಧವು ಐದು ಅಧಾರ ಸ್ತಂಭಗಳ ಮೇಲೆ ನಿಂತಿದೆ.ಅವುಗಳಲ್ಲಿ
ಮೊದಲನೆಯದು ಸತ್ಯದ ಸಾಕ್ಷ್ಯ ವಹಿಸುವುದು
ಎರಡನೆಯದು ನಮಾಜ್ ನಿರ್ವಹಿಸುವುದು
ಮೂರನೆಯದು ಝಕಾತ್ ನೀಡುವುದು
ನಾಲ್ಕನೆಯದು ರಮದಾನ್ ತಿಂಗಳ ವ್ರತಾಚರಿಸುವುದು ಮತ್ತು
ಐದನೆಯದು ಹಜ್ಜ್ ನಿರ್ವಹಿಸುವುದು
ಇನ್ನು ಪ್ರತಿಯೊಂದನ್ನೂ ಸವಿಸ್ತಾರವಾಗಿ ತಿಳಿಯೋಣ
ಸತ್ಯದ ಸಾಕ್ಷ್ಯ ವಹಿಸುವುದೆಂದರೇನು?
ಈಗ ತಾನೆ ವಿವರಿಸಿ ಬಂದಂತೆ ಇಸ್ಲಾಂ ಏಕದೇವತ್ವ,ಪ್ರವಾದಿತ್ವ ಮತ್ತು ಪರಲೋಕವಿಶ್ವಾಸಗಳಂತಹ ಮೂಲಭೂತನಂಬಿಕೆಗಳನ್ನೊಳಗೊಂಡಿದೆ.ಈ ನಂಬಿಕೆಗಳ ಅಂಗೀಕಾರ ಪ್ರಖ್ಯಾಪನೆಯನ್ನೇ ಸತ್ಯದ ಸಾಕ್ಷ್ಯ ವಹಿಸುವುದೆಂದು ಹೇಳಲಾಗುತ್ತದೆ. "ಸ್ರಷ್ಟಿಕರ್ತನೂ,ಪರಿಪಾಲಕನೂ ಆದ ಏಕಅಲ್ಲಾಹನ ಹೊರತು ಆರಾಧನೆ,ವಿಧೇಯತೆ ಮತ್ತು ಅನುಸರಣೆಗೆ ಅರ್ಹರಾದವರುಬೇರಾರೂ ಇಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ದಾಸರೂ ಅಂತಿಮ ದೂತರೂ ಆಗಿರುವರು" ಎಂದಾಗಿದೆ ಈ ಪ್ರಖ್ಯಾಪನೆಯಸಾರ.
ಇದು ಅಂತರಂಗ ಶುದ್ಧಿ, ಇದು...
ಎರಡೆನೆಯ ಕರ್ಮ ನಮಾಜ್ ನಿರ್ವಹಿಸುವುದಾಗಿದೆ.ಪ್ರತಿ ದಿನ ಹಗಲು ರಾತ್ರಿ ಯಾಗಿ ಐದುಬಾರಿ ತನ್ನ ಸ್ರಷ್ಟಿಕರ್ತನೊಂದಿಗೆನೇರಸಂಪರ್ಕ ಸಾಧಿಸ ಬಹುದಾದ ಆರಾಧನೆಯಾಗಿದೆ ಈ ನಮಾಜ್. ನಿಜ ಜೀವ ನದ ಪ್ರತಿ ಘಳಿಗೆಯಲ್ಲೂ ಅಲ್ಲಾಹನೊಂದಿಗೆನಿರಂತರ ಸಂಪರ್ಕ ಸಾಧಿಸುವುದೂ ಇದರ ಮೂಲೋದ್ದೇಶ ಗಳಲ್ಲೊಂದು. ನಮಾಜ್ ಮನುಷ್ಯನ ಅಂತರಂಗವನ್ನೂಬಹಿರಂಗವನ್ನೂ ಕೊಳಕು ಮತ್ತು ಮಾಲಿನ್ಯ ಗಳಿಂದ ಶುಚಿಗೊಳಿಸುವ ಸಾಧನವೂ ಹೌದು.ಅಂಗಾಂಗಗಳನ್ನು ಶುಚಿಗೊಳಿಸದೆನಮಾಜ್ ನಿರ್ವಹಿಸಲು ಸಾಧ್ಯವೇ ಇಲ್ಲ.ಪವಿತ್ರ ಕುರ್ಆನ್ ಹೇಳುತ್ತದೆ:
"ಓ,ಸತ್ಯ ವಿಶ್ವಾಸಿಗಳೇ!ನೀವು ನಮಾಜಿಗೆಂದು ಹೊರಟಾಗ ನಿಮ್ಮಮುಖಗಳನ್ನು ಮತ್ತು ಮೊಣಕೈ ಗಂಟುಗಳವರೆಗೆ ಕೈಗಳನ್ನುತೊಳೆದು ಕೊಳ್ಳಿರಿ. ಜನಾಬತ್ ಅಥವಾ ವೀರ್ಯಸ್ಖಲನಾ ನಂತರದ ಮಾಲಿನ್ಯದ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ಧ ರಾಗಿ ಕೊಳ್ಳಿರಿ. ನೀವು ಅನಾರೋಗ್ಯದಿಂದಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲಾರಾದರೂ ಮಲ ಮೂತ್ರ ವಿಸರ್ಜನೆ ಮಾಡಿ ಬಂದರೆಅಥವಾ ನೀವು ಸ್ತ್ರೀಯರನ್ನು ಸ್ಪರ್ಶಿಸಿದ್ದರೆ ಮತ್ತು ಆಬಳಿಕ ನೀರು ಸಿಗದೇ ಹೋದರೆ ಶುದ್ಧ ಮಣ್ಣನ್ನು ಉಪಯೋಗಿಸಿ ಕೊಳ್ಳಿರಿ. ಅದರಮೇಲೆ ಹಸ್ತಗಳನ್ನು ಬಡಿದು ನಿಮ್ಮ ಮುಖ ಮತ್ತು ಕೈಗಳ ಮೇಲೆ
ಸವರಿಕೊಳ್ಳಿರಿ. ಅಲ್ಲಾಹ್ ನಿಮ್ಮ ಜೀವನ ವನ್ನು ಸಂಕುಚಿತಗೊಳಿಸಲಿಚ್ಛಿಸುವುದಿಲ್ಲ.ಬದಲಾಗಿನೀವು ಕ್ರತಜ್ಞರಾಗಲೆಂದು.ಅವನುನಿಮ್ಮನ್ನು ಪರಿಶುದ್ಧಗೊಳಿಸಲಿಕ್ಕೂ ನಿಮ್ಮಮೇಲೆ ತನ್ನ ಕೊಡುಗೆಗಳನ್ನು ಪರಿಪೂರ್ಣಗೊಳಿಸಲಿಕ್ಕೂ . (ಪವಿತ್ರಕುರ್ಆನ್:ಅಧ್ಯಾಯ5ಸೂಕ್ತ 6)
ಪ್ರವಾದಿ ಮುಹಮ್ಮದ್(ಸ)ಈ ರೀತಿ ಹೇಳಿರುವರು:
"ನಿಮ್ಮ ಪೈಕಿ ಒಬ್ಬಾತನ ಮನೆಯ ಮುಂದೆ ಒಂದು ನದಿ ಹರಿಯುತ್ತಿದೆ ಅದರಲ್ಲಿ ಅವನು ಪ್ರತಿ ದಿನ ಐದುಬಾರಿ ಸ್ನಾನಮಾಡುತ್ತಾನೆಂದಾದರೆ ಅವನ ಕುರಿತು ನಿಮ್ಮ ಅಭಿಪ್ರಾಯವೇನು?ಆತನ ಶರೀರದಲ್ಲಿ ಅಲ್ಪವಾದರೂ ಮಲಿನತೆ ಅಥವಾ ಕೊಳಕುಬಾಕಿಯಿರುವುದೇ? ಸಹಚರರು ಉತ್ತರಿಸಿದರು, ಇಲ್ಲ, ಅವನ ಶರೀರದಲ್ಲಿ ಸ್ವಲಪವೂ ಮಲಿನತೆ ಅಥವಾ ಕೊಳಕು ಬಾಕಿಯಿರಲಾರದು. ಆಗ ಪ್ರವಾದಿ(ಸ) ಹೇಳಿದರು ಇದೇತರ ಐದು ಸಮಯದ ನಮಾಜ್ ಗಳಿಂದಲೂ ಅಲ್ಲಾಹನು ವ್ಯಕ್ತಿಯ ಪಾಪಗಳನ್ನುಕ್ಷಮಿಸಿ ಬಿಡುತ್ತಾನೆ"
ಹೌದು, ನಮಾಜ್ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ.
1. ಸಂಪತ್ತನ್ನು ಶುಚಿಗೊಳಿಸುವುದು.ಅದನ್ನು ವ್ರದ್ಧಿಸುವುದು ಮತ್ತು ಅಲ್ಲಾಹನ ಆಜ್ಞಾಪಾಲನೆಯಿಂದ ಸಂಭವನೀಯ ವಿಪತ್ತುಗಳಿಂದಅದನ್ನು ರಕ್ಷಿಸಿಕೊಳ್ಳುವುದು.
2. ಲೋಭ,ಜಿಪುಣತೆ ಮತ್ತು ದುರಾಸೆಗಳಂತಹ ದುಶ್ಚಟಗಳಿಂದ ಮನುಷ್ಯ ಮನಸ್ಸನ್ನು ಸ್ವಚ್ಛಗೊಳಿಸುವುದು.
3. ಬಡವರು ಮತ್ತು ನಿರ್ಗತಿಕರೊಂದಿಗೆ ಸಹಾನುಭೂತಿ ತೋರುವುದರ ಜೊತೆಗೆ ದರಿದ್ರರ,ವಂಚಿತರ ಮತ್ತು ಹಸಿದವರಅವಶ್ಯಕತೆಗಳನ್ನು ಪೂರೈಸುವುದು.
4. ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಸಮಾಜವನ್ನು ಬಲಿಷ್ಠಗೊಳಿಸುವುದು.
ಇದೇ ಕಾರಣದಿಂದ ಝಕಾತ್ ನೀಡದವರಿಗೆ ಮತ್ತು ಅದನ್ನು ತಡೆಹಿಡಿದವರಿಗೆ ಕಠಿಣ ಶಿಕ್ಷೆಯಾಗುವುದೆಂದು ಪವಿತ್ರಕುರ್ಆನ್ಎಚ್ಚರಿಕೆ ನೀಡುತ್ತದೆ. ಅದು ಹೇಳುತ್ತದೆ:
" ಓ ಸತ್ಯ ವಿಶ್ವಾಸಿಗಳೇ! ಗ್ರಂಥದವರ ಅಧಿಕಾಂಶ ವಿಧ್ವಾಂಸರೂ ಸಂತರೂ ಜನರ ಸಂಪತ್ತನ್ನು ಅನಧಿಕ್ರತ ವಿಧಾನಗಳಿಂದಕಬಳಿಸುತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನುದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ
ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ.ಈ ಚಿನ್ನ ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು.ತರುವಾಯಅದರಿಂದಲೇ ಅವರ ಹಣೆಗಳಿಗೂ,ಪಾರ್ಶ್ವಗಳಿಗೂ ಮತ್ತು ಬೆನ್ನುಗಳಿಗೂ ಬರೆ ಹಾಕಲಾಗು ವುದು.ನೀವು ನಿಮಗಾಗಿ ಸಂಗ್ರಹಿಸಿಟ್ಟಿದ್ದಸಂಪತ್ತು ಇದುವೇ,ಈಗ ನೀವು ಕೂಡಿ ಹಾಕಿದ್ದ ಸಂಪತ್ತನ್ನು ಸವಿಯಿರಿ"(ಎನ್ನಲಾಗುವುದು)(ಪವಿತ್ರಕುರ್ಆನ್:ಅಧ್ಯಾಯ 9ಸೂಕ್ತ
ಮಾನ್ಯರೇ!ಒಂದು ವಿಭಾಗ ಜನರು ಸಂಪತ್ತನ್ನು ಶೇಖರಿಸಿಡುವುದು ಮತ್ತೊಂದು ವಿಭಾಗ ಜನರು ನಿರ್ಗತಿಕರಾಗಿರುವುದಕ್ಕೆ ಇಸ್ಲಾಂಎಂದಿಗೂ ಆಸ್ಪದ ಕೊಡುವುದಿಲ್ಲ.
'ಮಾನವ ಸಮಾನತೆಯ ಯಾವ ಎತ್ತರಕ್ಕೆ ಇಸ್ಲಾಂ ತಲುಪಿರುತ್ತದೆ ಅಲ್ಲಿಗೆ ತಲುಪಲು ಇತರ ಯಾವ ಧರ್ಮಕ್ಕೂಸಾಧ್ಯವಾಗಿಲ್ಲವೆಂದು' ಸ್ವಾಮಿ ವಿವೇಕಾನಂದರು ಹೇಳಿರುವರು
(ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"(ನಾನು ಪ್ರೀತಿಸುವ ಇಸ್ಲಾಂ) ಪುಟ 40. ಅನುವಾದಕರು:ಇಬ್ರಾಹೀಂಸಯೀದ್
ವ್ಯಾಕುಲರಿಗೊಂದು ಸಂಧ್ಯಾರಾಗ
ಕತ್ತಲು ಭಾಗ್ಯದ ಆಶಾ ಕಿರಣ