السبت، 24 يناير 2009

?'ಇಸ್ಲಾಂ' ಏನಿದು ? ಯಾಕಿದು

ಮೋಡ ಕವಿದ ಸೂರ್ಯ
ಪ್ರಸಕ್ತ ಭೂಮುಖದ ಮೇಲೆ ಇಸ್ಲಾಮಿನಷ್ಟು ಅಪಪ್ರಚಾರ ಮತ್ತು ಅವಹೇಳನಕ್ಕೆ ಗುರಿಯಾದ ಬೇರೊಂದು ವಸ್ತು ಇರಲಾರದು. ಪ್ರಕಾಶಿಸುತ್ತಿದ್ದ ಸೂರ್ಯನನ್ನು ಮೋಡಗಳು ಆವರಿಸಿದಂತೆ ಇಸ್ಲಾಮನ್ನು ಸಂಶಯಗಳ ಕಪ್ಪು ಮೋಡಗಳುಸುತ್ತಿಕೊಂಡಿವೆ.ಅಪಪ್ರಚಾರಗಳ ಕಪ್ಪು ಮೋಡಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.ಮೋಡಗಳು ಕವಿದರೇನಂತೆ ಸೂರ್ಯನು ತನ್ನ ಪ್ರಕಾಶವನ್ನು ಕಳಕೊಳ್ಳುತ್ತಾನೆಯೇ? ಇವರು ತನ್ನ ಬಾಯಿಯಿಂದ ಊದಿ ದೇವ ಬೆಳಗಿದ ಜ್ಯೋತಿಯನ್ನು ನಂದಿಸಲು ಹೊರಟಿದ್ದಾರೆ.ಆದರೆ ಅಲ್ಲಾಹನು ತನ್ನ ಜ್ಯೋತಿಯನ್ನು ಹಬ್ಬಿಸಿಯೇ ತೀರಲು ನಿರ್ಧರಿಸಿದ್ದಾನೆ.ಆದ್ದರಿಂದಲೇ ಇಸ್ಲಾಮಿನ ವಿರುದ್ಧಕುತಂತ್ರಗಳು ಹೆಚ್ಚಿದಂತೆಲ್ಲಾ ಅದನ್ನು ಸ್ವೀಕರಿಸಿ ತನ್ನ ಜೀವನವನ್ನು ಧನ್ಯರಾಗಿಸಿಕೊಳ್ಳುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ಮನೆಯಂಗಳವನ್ನು ಬೆಳಗಿಸುವ ಸೂರ್ಯನಿಂದ ಮನದಂಗಳವನ್ನು ಬೆಳಗಿಸಲು ಸಾಧ್ಯವೇ!? ಮನಸ್ಸಿನಲ್ಲಿ ಕವಿದ ಅಂಧಕಾರವನ್ನು ಹೋಗಲಾಡಿಸಲು ಕೇವಲ ಇಸ್ಲಾಮಿನಿಂದ ಮಾತ್ರ ಸಾಧ್ಯ .. ಮನುಷ್ಯನು ಅನೇಕ ಯಂತ್ರಗಳನ್ನು ಕಂಡುಹಿಡಿದಿದ್ದಾನೆ.ಆದರೆ ಇಸ್ಲಾಂ ಮನುಷ್ಯನನ್ನು ಮನುಷ್ಯನಾಗಿಸುವ ದೈವಿಕ ಯಂತ್ರವಾಗಿದೆ....ಬುದ್ಧಿಜೀವಿಗಳಿಗೆ ಇದರ ಮುಂದೆಸುಮ್ಮನೆ ಸಾಗಲು ಸಾಧ್ಯವೇ ಇಲ್ಲ . ಇದೇ ಕಾರಣವಾಗಿರಬಹುದು ಅಬೂತಾಲಿಬ್ ರಿಂದ ಹಿಡಿದು ಆಧುನಿಕ ಕಾಲದ ಬರ್ನಾಡ್ ಷಾ, ಮಹಾತಮಾ ಗಾಂಧೀಜಿ , ಸ್ವಾಮಿ ವಿವೇಕಾನಂದ ಮತ್ತು ಇವರಂತಹ ಅನೇಕ ಚಿಂತಕರು ಮತ್ತು ದಾರ್ಶನಿಕರು ಸತ್ಯಧರ್ಮವನ್ನು ಮುಕ್ತ ಕಂಠದಿಂದ ಹೊಗಳಿ ಹೋದರು. ಮುಂದಿನ ಸಾಲುಗಳಲ್ಲಿ ಇಸ್ಲಾಮಿನ ಸಂಕ್ಷಿಪ್ತಚಿತ್ರಣವನ್ನು ನಿಮ್ಮ ಮುಂದಿಡುವುದಕ್ಕಿಂತ ಮುಂಚಿತವಾಗಿ ಇಂತಹದೇ ಕೆಲ ಜಗದ್ವಿಖ್ಯಾತರ ಮತ್ತು ಗಣ್ಯವ್ಯಕ್ತಿಗಳ ಇಸ್ಲಾಮಿನ ಕುರಿತಾದ ಹೇಳಿಕೆಗಳನ್ನು ಉಲ್ಲೇಖಿಸುತ್ತಿದ್ದೇನೆ.ಇದು ಇಸ್ಲಾಮಿನ ನೈಜತೆಯನ್ನರಿಯಲು ಸಹಕಾರಿಯಾಗಬಹುದು.

ಹ್ರದಯ ಬಿಚ್ಚಿದ ಅಣ್ಣಾದೊರೈ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀ ಅಣ್ಣಾದೊರೈಯವರು 1957 ಅಕ್ಟೋಬರ್
7 ರಂದು ಪ್ರವಾದಿ ಜೀವನ ಕುರಿತು ಒಂದು ಭಾಷಣ ಮಾಡಿದ್ದರು ಅದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ. ತನ್ನಭಾಷಣದಲ್ಲಿ ಅಣ್ಣಾದೊರೈಯವರು ರೀತಿ ಹೇಳಿದ್ದರು.
"ಇಸ್ಲಾಂ ಧರ್ಮದ ತತ್ವಗಳು ಮತ್ತು ವಿಶ್ವಾಸಗಳ ಅಗತ್ಯ ಆರನೇ ಶತಮಾನದಲ್ಲಿದ್ದಂತೆಯೇ ಇಂದಿನ ಜಗತ್ತಿಗೂ ಇದೆ. ಇಂದುಜಗತ್ತು ಅನೇಕ ಸಿದ್ಧಾಂತಗಳ ಹುಡುಕಾಟದಲ್ಲಿ ಎಡವಿ ಬೀಳುತ್ತಿದೆ; ಎಲ್ಲಿಯೂ ಅದಕ್ಕೆ ತ್ರಪ್ತಿ ಲಭಿಸಿಲ್ಲ.
ಇಸ್ಲಾಂ ಕೇವಲ ಒಂದು ಧರ್ಮವಲ್ಲ. ಅದು ಒಂದು ಜೀವನ ಸಿದ್ಧಾಂತ ಮತ್ತು ಅತ್ಯುತ್ತಮ ಜೀವನ ವ್ಯವಸ್ಥೆ ಯಾಗಿದೆ. ಜೀವನಕ್ರಮವನ್ನು ಲೋಕದ ಅನೇಕ ರಾಷ್ಟ್ರಗಳು ಪಾಲಿಸುತ್ತಿವೆ."
ಇಸ್ಲಾಮೀ ಜೀವನ ಸಿದ್ಧಾಂತ ಮತ್ತು ಇಸ್ಲಾಮೀ ಜೀವನ ವ್ಯವಸ್ಥೆಯನ್ನು ನಾವು ಹೊಗಳುವುದು ಏಕೆ?
ಅಣ್ಣಾದೊರೈಯವರು ಹೇಳುತ್ತಾರೆ "..ಇಸ್ಲಾಮೀ ಜೀವನ ಸಿದ್ಧಾಂತವು ಮನುಷ್ಯ ಮನಸ್ಸಿನಲ್ಲಿ ಏಳುವ ಎಲ್ಲ ಸಂಶಯಗಳಿಗೆಅತ್ಯುತ್ತಮ ರೀತಿಯಲ್ಲಿ ಉತ್ತರನೀಡುತ್ತದೆ ಎಂಬುದಕ್ಕಾಗಿ ಮಾತ್ರ." (ಅಡಿಯಾರ್ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"(ನಾನುಪ್ರೀತಿಸುವ ಇಸ್ಲಾಂ )ಪುಟ 38.ಅನುವಾದಕರು:ಇಬ್ರಾಹೀಂ ಸಯೀದ್)

ಗಾಂಧೀಜಿಯ ಕನಸು
ಇದೇರೀತಿ ಮಹಾತ್ಮ ಗಾಂಧೀಜಿಯವರೊಮ್ಮೆ ಹೇಳಿದ್ದರು "ಒಂದು ವೇಳೆ ನಾನು ಭಾರತದ ಸರ್ವಾಧಿಕಾರಿಯಾದರೆ ಒಂದುಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯದ ಖಲೀಫರಾಗಿದ್ದ ಉಮರ್ ರಂತೆ ಆಡಳಿತ
ನಡೆಸುತ್ತೇನೆ " ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್() ರವರ ಆಡಳಿತಾವಧಿಯು ಎಲ್ಲ ವಿಧದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು'ಖಲೀಫ'ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು.

ನಂಬರ್ ವನ್....
ಡಾ .ಹೆಚ್ ಮೈಕಲ್ ಹಾರ್ಟ್ ಮನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ
ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ ಆದರೆ ಅವರೆಲ್ಲರ ಪೈಕಿ ಮುಹಮ್ಮದ್()ರಿಗೆ ಮೊದಲ ಸ್ಥಾನ ಕೊಡಲು ಅವರುನಿರ್ಬಂಧಿತರಾಗುತ್ತಾರೆ.ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್()ರಿಗೆ ಮಾತ್ರ ಸೇರಿದ್ದಾಗಿದೆ.

ಸರ್ವ ಸಮಸ್ಯೆಗಳ ಏಕೈಕ ಪರಿಹಾರ
ಪ್ರಸಿದ್ಧ ತತ್ವಜ್ಞಾನಿ ಹಾಗೂ ಖ್ಯಾತ ಚಿಂತಕನಾದ ಬರ್ನಾಡ್ ಷಾ ಹೇಳುವಂತೆ "ಆಧುನಿಕ ಲೋಕದ ಎಲ್ಲ ವಿಧ ಸಮಸ್ಯೆಗಳನ್ನುಬಗೆಹರಿಸಬೇಕಾದರೆ ಅದಕ್ಕಿರುವ ಒಂದೇ ಒಂದು ಮಾರ್ಗ ಮುಹಮ್ಮದರಂತಹ ಓರ್ವ ವ್ಯಕ್ತಿಯನ್ನು ಸರ್ವಾಧಿಕಾರಿಯನ್ನಾಗಿಮಾಡುವುದಾಗಿದೆ."
ಅದೇ ಪ್ರಕಾರ " ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಒಂದು ಧರ್ಮವಿದ್ದರೆ ಅದು ಇಸ್ಲಾಂ ಮಾತ್ರ ವಾಗಿದೆ ." ಎಂದೂ ಬರ್ನಾಡ್ಷಾ ಹೇಳಿರುತ್ತಾನೆ.
ಎಲ್ಲ ಅಬಿಪ್ರಾಯಗಳಿಂದ ವ್ಯಕ್ತವಾಗುವುದೇನೆಂದರೆ ಇಸ್ಲಾಂ ಮಾತ್ರ ಸರ್ವಸಮಸ್ಯೆಗಳ ಏಕೈಕ
ಪರಿಹಾರವಾಗಿದೆ.
ರಾಜಭಾವನದಲ್ಲೂ, ತನು ಮನದಲ್ಲೂ ಆಡಳಿತ ನಡೆಸಲು ಯೋಗ್ಯವಾದ ಮಾತ್ರವಲ್ಲ ಅದನ್ನು ನಿಜ ಜೀವನದಲ್ಲಿ ಸಾಧಿಸಿತೋರಿಸಿದ ಏಕೈಕ ಧರ್ಮವಾಗಿದೆ ಇಸ್ಲಾಂ. ಬುದ್ಧಿಯುಳ್ಳವರು ಮತ್ತು ಚಿಂತನೆ ನಡೆಸುವವರಿಗೆ ಇದನ್ನು ಅಂಗೀಕರಿಸದೆ ಬೇರೆಉಪಾಯವಿಲ್ಲ.

ನಿರಕ್ಷರಿ ತಂದ ಕ್ರಾಂತಿ
ಚರಿತ್ರೆಯ ಪುಟಗಳಲ್ಲೊಮ್ಮೆ ಇಣುಕಿ ಧರ್ಮ ತುಳಿದು ಬಂದ ಹಾದಿಯನ್ನೊಮ್ಮೆ ವೀಕ್ಷಿಸೋಣ.
ಸರಿಸುಮಾರು 1450 ವರ್ಷಗಳ ಹಿಂದೆ ಅರೇಬಿಯಾ ಮರುಭೂಮಿಯಲ್ಲಿರುವ ಮಕ್ಕಾನಗರಿಯ ಇತಿಹಾಸ ವು ಅತ್ಯದ್ಭುತತಿರುವನ್ನು ಕಂಡಿತು. ತನ್ನ ಬಾಲ್ಯ ದಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದವನೊಬ್ಬ ತನ್ನ 40ನೇ ವಯಸ್ಸಿನಲ್ಲಿ ಮರಳುಗಾಡಿನಲ್ಲಿಕ್ರಾಂತಿಯ ಬಿರುಗಾಳಿಯನ್ನೆಬ್ಬಿಸಿದ ರೋಚಕ ಕಥೆಯಿದು. ಅಚ್ಚರಿ ಮೂಡಿಸುವ ಕ್ರಾಂತಿಯು ಬಿರುಗಾಳಿಯಂತೆ ಅಖಂಡ ಅರಬ್ದೇಶ ಮಾತ್ರವಲ್ಲ ಇಡೀ ಜಗತ್ತನ್ನೇ ವ್ಯಾಪಿಸಿತು.ತಂದೆಯ ಮುಖವನ್ನು ನೋಡದ ಬಾಲ್ಯದಲ್ಲೇ ತಾಯಿಯ ವಿಯೋಗದ ವೇದನೆಯನ್ನನುಭ ವಿಸಿದ ಮತ್ತದರ ಬೆನ್ನಲ್ಲೇ ಪ್ರೀತಿಯ ತಾತರನ್ನೂ ಕಳಕೊಂಡು ಒಬ್ಬಂಟಿಗನಾಗಿ ಸಂಕಷ್ಟದಲ್ಲಿ ಸಿಲುಕಿದ ಓರ್ವ ನಿರಕ್ಷರಿಅನಾಥನ ಮೂಲಕ ಮಾನವ ಜಗತ್ತಿಗೆ ದೊರೆತ ಅನುಗ್ರಹೀತ ಹಾಗೂ ಅವಿಸ್ಮರಣೀಯ ಕ್ರಾಂತಿಯ ಕಥೆಯಿದು. ಕ್ರಾಂತಿಯಹೆಸರೇ'ಇಸ್ಲಾಂ'ಆಗಿದೆ. ಆದಿ ಮಾನವನೂ ಮೊತ್ತ ಮೊದಲ ಪ್ರವಾದಿಯೂ ಆದ .ಆದಮ್ ()ರಿಂದ ಹಿಡಿದು ಮಾನವಮಾರ್ಗದರ್ಶನಕ್ಕಾಗಿ ಹಂತ ಹಂತವಾಗಿ ಆಗಮಿಸುತ್ತಿದ್ದ ಪ್ರವಾದಿಗಳ ಸರಪಳಿಯ ಕೊನೆಯ ಕೊಂಡಿಯಾಗಿ ಮಹಾನ್ಕ್ರಾಂತಿಕಾರಿ ಪ್ರವಾದಿಯು ಜಗತ್ತಿಗಾಗಮಿಸಿದರು. ಅವರೇನೂ ಹೊಸ ಸಂದೇಶವನ್ನು ನೀಡಲಿಲ್ಲ ಬದಲಾಗಿ ತನಗಿಂತ ಮುಂಚೆಪ್ರತ್ಯೇಕ ಕಾಲ ಮತ್ತು ಸಮುದಾಯಗಳಲ್ಲಿ ಆಗಮಿಸುತ್ತಿದ್ದ, ಪ್ರವಾದಿಗಳೆಂದು ಕರೆಯಲ್ಪಡುತ್ತಿದ್ದ ಸತ್ಪುರುಷರು ನೀಡಿದ "ಏಕ ಮತ್ತುನೈಜ ಆರಾಧ್ಯನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ" ಎಂಬ ಸಂದೇಶವನ್ನೇ ಅವರೂ ಸಾರಿದರು. ಆಡಮ್ ಎಂದುನಾಮಾಂಕಿತರಾದ .ಆದಂ, ನೋಹಾ ಎಂದು ಕರೆಯಲ್ಪಡುವ .ನೂಹ್,ಅಬ್ರಹಾಂ ಎಂದು ಪ್ರಸಿದ್ಧರಾದ .ಇಬ್ರಾಹೀಂ, ಡೇವಿಡ್ಎಂದು ಪ್ರಖ್ಯಾತ ರಾದ .ದಾವೂದ್,ಮೋಸೆಸ್ ಎಂದು ನಾಮಪಡೆದ .ಮೂಸಾ,ಏಸುಕ್ರಿಸ್ತ ಎಂದು ಆರಾಧ್ಯ ಪಟ್ಟಕ್ಕೇರಿ ಸಲ್ಪಟ್ಟಹ.ಈಸಾ ಈಎಲ್ಲ ಗತಕಾಲದ ಪ್ರವಾದಿಗಳೂ ಇದೇ ಸಂದೇಶವನ್ನು ತನ್ನ ತನ್ನ ಸಮುದಾಯ ಗಳ ಮುಂದಿಟ್ಟಿದ್ದರು.
ನಲ್ವತ್ತು ವರ್ಷಗಳ ಕಾಲ ಪ್ರತಿಯೊಂದು ನಿಮಿಷವನ್ನೂ ತನ್ನದೇ ಸಮಾಜದಲ್ಲಿ ಅವರು ಕಳೆದಿದ್ದರು. ತನ್ನ ಉತ್ತಮ ಗುಣನಡತೆಮತ್ತು ಪಾವನ, ಪರಿಶುದ್ಧ ಸ್ವಭಾವದಿಂದಾಗಿ ಬಾಲ್ಯದಿಂದಲೇ ಸಮಾಜದ ಪ್ರತಿ ಯೊಬ್ಬ ಸದಸ್ಯನ ಕಣ್ಮಣಿಯಾಗಿದ್ದ ಇವರಪ್ರಾಮಾಣಿಕತೆ ಮತ್ತು ಸತ್ಯವಂತಿಕೆ ಜನಜನಿತವಾಗಿತ್ತು, ಆದ್ದರಿಂದಲೇ ಇಡೀ ಜನಾಂಗವೇ ಅವರನ್ನು'ಅಲ್ ಅಮೀನ್' ಅರ್ಥಾತ್ಪ್ರಾಮಾಣಿಕ ಮತ್ತು 'ಅಸ್ಸಾದಿಕ್' ಅರ್ಥಾತ್ ಸತ್ಯವಂತ ಎಂಬ ಬಿರುದಿನಿಂದ ಕರೆಯುತ್ತಿತ್ತು. ಎಂದೂ ಯಾರನ್ನೂ ದುಖಿಸದ ಇವರುಸ್ವಯಂ ಇತರರಿಗಾಗಿ ದುಃಖವನ್ನು ಸಹಿಸುತ್ತಿದ್ದರು. ಅವರು ಮೂರ್ತಿಪೂಜಕರ ಜನಾಂಗ ದಲ್ಲಿದ್ದರು.ಆದರೆ ಅವ ರೆಂದೂಮೂರ್ತಿಪೂಜೆ ಮಾಡಿದವರಲ್ಲ.ವಿಗ್ರಹಾರಾಧನೆಯನ್ನು ಅವರು ದ್ವೇಷಿಸುತ್ತಿದ್ದರು.ಯಾವ ವಸ್ತುವೂ ಪೂಜಾರ್ಹ ವಲ್ಲವೆಂದು ಅವರಅಂತರಾತ್ಮವೇ ಹೇಳುತ್ತಿತ್ತು.ದೇವನು ಕೇವಲ ಒಬ್ಬನೇ ಆಗಿರಲು ಸಾಧ್ಯ ಎಂದು ಅವರ ಮನಸ್ಸು ಸ್ವಯಂ ಸಾಕ್ಷ್ಯ ವಹಿಸುತ್ತಿತ್ತು.ಆಅಜ್ಞಾನಿ ಜನಾಂಗದ ಮಧ್ಯೆ ಅವರು ಕಲ್ಲಿನ ರಾಶಿ ಯಲ್ಲಿರುವ ವಜ್ರದಂತೆ ಮಿನುಗುತ್ತಿದ್ದರು ಅಥವಾ ಗಾಢ ಅಂಧಕಾರದಲ್ಲಿಅವರೊಂದು ಪ್ರಾಕಾಶಮಾನ ದೀಪವಾಗಿದ್ದರು.

ಗುಹೆಯ ಏಕಾಂತದಲ್ಲಿ
ನಲವತ್ತನೇ ವಯಸ್ಸಿನಲ್ಲಿ ಅವರು ತನ್ನ ಸುತ್ತಲಿರುವ ಅಂಧಕಾರವನ್ನು ಕಂಡು ಗಾಬರಿ ಗೊಳ್ಳುತ್ತಾರೆ. ಅಜ್ಞಾನ,ಅನೀತಿ, ದುರ್ನಡತೆ,ಅಶಿಸ್ತು, ಬಹುದೇವ ವಿಶ್ವಾಸ ಮತ್ತು ವಿಗ್ರಹಾರಾಧನೆಯ ಒಂದು ಭಯಂಕರ ಸಮುದ್ರವು ಅವರನ್ನು ಸುತ್ತುವರಿದಿತ್ತು. ಈಉಸಿರು ಕಟ್ಟುವ ವಾತಾವರಣದಿಂದ ಅವರು ಹೊರ ಬರ ಬಯಸುತ್ತಿದ್ದರು ಮಾತ್ರವಲ್ಲ ತನ್ನಸುತ್ತ ಕವಿದಿರುವ ಅಂಧಕಾರವನ್ನುದೂರೀಕರಿಸುವ ಜ್ಯೋತಿಯೊಂದನ್ನು ಶೋಧಿಸುತ್ತಿದ್ದರು. ಕೆಟ್ಟು ಹೋದ ವಿಶ್ವವನ್ನು ಅಳಿಸಿ ಒಂದು ಹೊಸ ವಿಶ್ವವನ್ನು ಕಟ್ಟಿ ಬೆಳೆಸಬಯಸುತ್ತಿದ್ದರು. ಅದಕ್ಕಾಗಿ ಅವರು ಜನವಾಸ ದಿಂದ ದೂರ ಮಕ್ಕಾನಗರಿಯ ಹೊರ ಭಾಗದ ಲ್ಲಿದ್ದ ಒಂದು ಬೆಟ್ಟದ ಗವಿಯಲ್ಲಿಏಕಾಂತ ಮತ್ತು ಪ್ರಶಾಂತ ವಾತಾವರಣದಲ್ಲಿ ದಿನಕಳೆಯ ತೊಡಗಿದರು. ಅಲ್ಲಿ ಉಪವಾಸವಿದ್ದು ತಮ್ಮ ಆತ್ಮ,ಮನಸ್ಸು ಮತ್ತುಮಸ್ತಿಷ್ಕವನ್ನು ಇನ್ನಷ್ಟು ಶುದ್ಧವೂ ಪಾವನವೂ ಆಗಿ ಮಾರ್ಪಡಿಸುತ್ತಿದ್ದರು. ಧ್ಯಾನ ಚಿಂತನೆಗಳಲ್ಲಿ ನಿರತ ರಾಗುತ್ತಿದ್ದರು. ಇದ್ದಕ್ಕಿದ್ದಂತೆಒಂದು ದಿನ ಅವರ ಬಳಿ ದೇವಚರರಾದ'ಜಿಬ್ರೀಲ್'ಬಂದು ತಾವು ಸ್ರಷ್ಟಿಕರ್ತನ ಕಡೆಯಿಂದ ಆತನ ಸಂದೇಶವಾಹಕರಾಗಿದ್ದೀರೆಂದುಹೇಳಿ ಅವರಿಗೆ ದೇವನಿದರ್ಶನಗಳನ್ನು ನೀಡಿದರು. ಹೀಗೆ ಅವರು ಗುಹೆಯ ಏಕಾಂತದಿಂದ ಹೊರ ಬರುತ್ತಾರೆ.ಮತ್ತು ತಮ್ಮಜನಾಂಗದ ಮುಂದೆ ಹೋಗಿ " ವಿಗ್ರಹಗಳು ಯಾವ ಕೆಲಸಕ್ಕೂ ಬರಲಾರವು. ಇವುಗಳನ್ನು ಬಿಟ್ಟು ಬಿಡಿ. ಭೂಮಿ, ಸೂರ್ಯ, ನಕ್ಷತ್ರಗಳು, ಭೂಮಿ-ಆಕಾಶಗಳಲ್ಲಿರುವ ಎಲ್ಲ ಶಕ್ತಿಗಳು ಒಬ್ಬ ದೇವನ ಸ್ರಷ್ಟಿಗಳು. ಅವನೇ ನಿಮ್ಮಸ್ರಷ್ಟಿಕರ್ತನು,ಪರಿಪಾಲಕನು, ಅನ್ನದಾತನು, ಜೀವನ ಮರಣಗಳನ್ನು ನೀಡುವವನು. ಎಲ್ಲವನ್ನೂ ತೊರೆದು ಆತನನ್ನೇ ಪೂಜಿಸಿರಿ. ಎಲ್ಲರನ್ನೂ ಬಿಟ್ಟು ಅವನಲ್ಲೇ ನಿಮ್ಮ ಅಗತ್ಯಗಳನ್ನು ಬೇಡಿರಿ. ನೀವು ಮಾಡುತ್ತಿರುವ ಕಳ್ಳತನ,ಲೂಟಿ ,ಮದ್ಯಪಾನ, ಜೂಜಾಟವ್ಯಭಿಚಾರ ಎಲ್ಲವೂ ಮಹಾಪಾಪಗಳಾಗಿವೆ, ಅವುಗಳನ್ನು ತೊರೆಯಿರಿ" ಎಂದು ಹೇಳುತ್ತಾರೆ.
(ಇನ್ನೂ ವಿವರಣೆಗಾಗಿ ಓದಿರಿ ಸಯ್ಯದ್ ಅಬುಲ್ ಆಲಾಮೌದೂದಿಯವರ ಪುಸ್ತಕ'ಇಸ್ಲಾಂ ಧರ್ಮ' ಅನುವಾದಕರು:ಇಬ್ರಾಹೀಂಸಯೀದ್)

ಆಪ್ತರು ಶತ್ರುವಾದಾಗ
ಸತ್ಯಪಥದ ಸಂದೇಶವಾಹಕರಾಗಿ ಕಾರ್ಯರಂಗಕ್ಕಿಳಿದ ಪ್ರವಾದಿಯನ್ನು ಕುಟುಂಬ ಸಮೇತ ಇಡೀ ಸಮುದಾಯವೇಪ್ರತಿರೋಧಿಸಿತು. ಪ್ರತಿರೋಧವೇ ಕ್ರಮೇಣ ದ್ವೇಷ ಮತ್ತು ಹಿಂಸೆಯ ರೂಪ ತಾಳಿತು. ಪ್ರವಾದಿ ಮತ್ತು ಅವರ ಅನುಯಾಯಿಗಳೂಸಮಾಜದ ಹಿಂಸೆ ಮತ್ತು ಅತಿಕ್ರಮಣಕ್ಕೆ ಗುರಿಯಾದರು. ಹಿಂಸೆಯು ಅತಿರೇಕಕ್ಕೆ ತಲುಪಿದಾಗ ಅವರಪೈಕಿ ಕೆಲವರುಪ್ರವಾದಿಯವರ ಆದೇಶದ ಮೇರೆಗೆ ಸಮುದ್ರ ದಾಚಿನ ದೇಶವಾದ ಅಬಿಸೀನಿಯಾಕ್ಕೆ ವಲಸೆ ಹೋಗುತ್ತಾರೆ ಆದರೆ ಶತ್ರುಗಳು ಅಲ್ಲೂಇವರನ್ನು ಹಿಂಬಾ ಲಿಸಿ ಕೊಂಡು ಹೋಗುತ್ತಾರೆ. ಕ್ರೈಸ್ತ ಧರ್ಮಾನುಯಾಯಿಯಾದ ಅಲ್ಲಿಯ ಅರಸ ನಜ್ಜಾಶಿಯ ಮುಂದೆಮುಸಲ್ಮಾನರ ವಿರುದ್ಧ ದೂರನ್ನು ನೀಡಿ ಇವರನ್ನು ನಮಗೆ ಹಿಂತಿರುಗಿಸಬೇಕೆಂದು ವಿನಂತಿಸುತ್ತಾರೆ.
ಆಗ ಸ್ತ್ರೀ-ಪುರುಷ ರನ್ನೊಳಗೊಂಡ ಸರಿಸುಮಾರು ನೂರು ಜನರ ತಂಡವನ್ನು ಪ್ರತಿನಿಧಿಸುತ್ತಾ ಪ್ರವಾದಿ ಯವರ ಪ್ರೀತಿಯಚಿಕ್ಕಪ್ಪರಾದ ಅಬೂತಾಲಿಬರ ಮಗನಾದ .ಜಾಫರ್()ರಾಜನ ಮುಂದೆ ಒಂದು ಭಾಷಣ ಮಾಡುತ್ತಾರೆ.
ಮರ್ದಿತನ ಭಾಷಣ
ಅವರು ಹೇಳಿದರು "ಹೇ ಮಹಾರಾಜರುಗಳೇ! ನಾವು ಅಜ್ಞಾನದಲ್ಲಿದ್ದೆವು,ವಿಗ್ರಹಗಳನ್ನು ಪೂಜಿಸುತ್ತಿದ್ದೆವು ಸತ್ತ ಪ್ರಾಣಿಗಳನ್ನುತಿನ್ನುತ್ತಿದ್ದೆವು, ದುಷ್ಕ್ರತ್ಯಗಳನ್ನೆಸಗುತ್ತಿದ್ದೆವು, ವ್ಯಭಿಚಾರ ಮತ್ತು ಅತ್ಯಾಚಾರಗಳಲ್ಲಿ ತಲ್ಲೀನರಾಗಿದ್ದೆವು, ನೆರೆಯವರನ್ನುಉಪದ್ರವಿಸುತ್ತಿದ್ದೆವು,ಸ್ವತಃ ನಮ್ಮ ಸಹೋದರನನ್ನೇ ಅಕ್ರಮ ಮತ್ತು ಅನ್ಯಾಯಕ್ಕೆ ಗುರಿಪಡಿಸುತ್ತಿದ್ದೆವು,ನಮ್ಮ ಪೈಕಿಯ ಬಲಾಡ್ಯರುದುರ್ಬಲರನ್ನು ತಿಂದೇಬಿಡುತ್ತಿದ್ದರು,ನಾವು ವ್ಯರ್ಥ ಮಾತುಗಳನ್ನಾಡುತ್ತಿದ್ದೆವು,ಯಾವುದೇ ಕಾನೂನು ಮತ್ತು ನಿಯಮಗಳಿಗೆ ನಾವುಬದ್ಧರಾಗಿರಲಿಲ್ಲ,
ಹೀಗಿರುವಾಗ ಅಲ್ಲಾಹನು ನಮ್ಮ ಬಳಿ ಮ್ಮಿಂದಲೇ ಒಬ್ಬ ಮಹಾತ್ಮರನ್ನು ಕಳುಹಿಸಿದನು. ಅವರು ಕುಲೀನರೂ ಉತ್ತಮ ವಂಶಪರಂಪರೆಯುಳ್ಳವರೂ ಆಗಿದ್ದರು. ಅವರ ಸತ್ಯ ಸಂಧತೆ, ಪ್ರಾಮಾಣಿಕತೆ, ಪಾವಿತ್ರ್ಯತೆ ಮತ್ತು ಪರಿಶುದ್ಧತೆಯನ್ನು ನಾವೆಲ್ಲರೂಚೆನ್ನಾಗಿ ಅರಿತಿದ್ದೆವು, ಅವರು ನಮಗೆ ಏಕದೇವ ವಿಶ್ವಾಸದ ಸಂದೇಶವನ್ನು ನೀಡಿದರು. ಏಕ ನೈಜ ಆರಾಧ್ಯ ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿಸಬಾರದು, ಕಲ್ಲುಗಳನ್ನೂ, ಮೂರ್ತಿಗಳನ್ನೂ ಪೂಜಿಸಬಾರದು ಎಂದವರು ನಮಗೆ ತಿಳಿ ಹೇಳಿದರು. ಸತ್ಯವನ್ನೇ ನುಡಿಯಿರಿ, ಕೆಡುಕುಗಳಿಂದ ಮತ್ತು ದುಶ್ಚಟಗಳಿಂದ ದೂರವಿರಿ, ವಾಗ್ದಾನ ವನ್ನು ಪಾಲಿಸಿರಿ ಎಂದವರು ನಮಗೆ ಉಪದೇಶಿಸಿದರು. ಅವರು ನಮಗೆ ವಿನಮ್ರನಾಗುವ, ನಮಾಜ್ ನಿರ್ವಹಿಸುವ,ದಾನ ಧರ್ಮ ನೀಡುವ ಮತ್ತು ವ್ರತಾಚರಿಸುವ ಆದೇಶಗಳನ್ನು ನೀಡಿದರು. ಈ ಮಾತುಗಳಿಂದಲೇ ನಮ್ಮ ಸಮುದಾಯ ನಮ್ಮ ಶತ್ರುವಾಯಿತು ಅವರು ನಮ್ಮನ್ನು ದ್ವೇಷಿಸತೊಡಗಿದರು ಮತ್ತು ಸಾಧ್ಯವಾದಷ್ಟು ನಮ್ಮನ್ನು ಹಿಂಸಿಸಿದರು. ಏಕ ಅಲ್ಲಾಹನನ್ನು ಆರಾಧಿಸುವುದನ್ನು ಬಿಟ್ಟು ಪುನಃ ಕಲ್ಲು,ಮರ ಮತ್ತು ಅವುಗಳಿಂದ ಸ್ವತಃ ನಾವೇ ತಯಾರಿಸಿದ ಮೂರ್ತಿಗಳನ್ನು ಪೂಜಿಸುವಂತೆ ಈಗ ಅವರು ನಮ್ಮನ್ನು ಬಲಾತ್ಕರಿಸುತ್ತಿದ್ದಾರೆ.
ಹೇ ಮಹಾರಾಜರುಗಳೇ ! ನಾವು ಅವರಿಂದ ಬಹಳ ಕಷ್ಟ ಹಾಗೂ ತೊಂದರೆಗಳನ್ನು ಅನುಭವಿಸಿದ್ದೇವೆ. ಸಹಿಸಲಸಾಧ್ಯವಾದ ಹಿಂಸೆಗೆ ಗುರಿಯಾಗಿದ್ದೇವೆ. ಕೊನೆಗೆ ತಮ್ಮ ದೇಶದಲ್ಲಿ ಆಶ್ರಯ ಪಡೆಯಲೆಂದು ವಲಸೆ ಬಂದಿದ್ದೇವೆ......"
ಕ್ರಾಂತಿಯ ತಿರುಳು
ನಿಜ ಹೇಳುವುದಾದರೆ ಭಾಷಣ ಇಸ್ಲಾಮಿನ ಸುಂದರ ಪರಿಚಯವಾಗಿರುತ್ತದೆ ಮಾತ್ರವಲ್ಲ ಇಸ್ಲಾಂ ಮನುಷ್ಯನ ಮನ ಮಸ್ತಿಷ್ಕಮತ್ತು ಅವನ ಆಚಾರ-ವಿಚಾರಗಳಲ್ಲಿ ಯಾವ ತರದ ಬದ ಲಾವಣೆ ತರಬಯಸುತ್ತ ದೆಂಬುದನ್ನೂ ವ್ಯಕ್ತ ಪಡಿಸುತ್ತದೆ. ಅಂದಿನ ನೈತಿಕದಿವಾಳಿತನವನ್ನು ನಿವಾರಿಸಲು ಇಸ್ಲಾಮಿನಿಂದ ಸಾಧ್ಯವಾಯಿತು.ಇಂದು ಕೂಡಾ ರೋಗವನ್ನು ಶಮನಗೊಳಿಸಲು ಕೇವಲ ಇಸ್ಲಾಮಿನಿಂದ ಮಾತ್ರ ಸಾಧ್ಯ.
ಮಾನವಜಗತ್ತು
ಇಂದು ಕೂಡಾ ಪತನದ ಹಾದಿ ತುಳಿದಿರಿವುದನ್ನು ನೀವು ನೋಡುತ್ತಿಲ್ಲವೇ.ವಿಚಾರಗಳು ವಿನಾಶವನ್ನುಹೊತ್ತುಕೊಂಡಿವೆ. ಮಕ್ಕಳು ಭಯಾನಕ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ. ಯುವ ಪೀಳಿಗೆಯ ರಕ್ತದಲ್ಲಿ ವಿಷ ಸಂಚರಿಸುತ್ತಿದೆ. ವ್ರಧ್ಯಾಪವು ವಿಕಾರಗೊಳ್ಳುತ್ತಿವೆ. ಮಾನವ ಸಭ್ಯತೆ ಮತ್ತು ನಾಗರಿಕತೆ ಹೆಸರಲ್ಲಿ ಮ್ರಗತ್ವವನ್ನು ಸ್ವೀಕರಿಸುತ್ತಿದ್ದಾನೆ. ಹೀಗಿರುವಾಗ ಮೋಕ್ಷದ ಏಕೈಕ ಮಾರ್ಗ ಇಸ್ಲಾಂ ಮಾತ್ರ ಆಗಿರುತ್ತದೆ. ಇಸ್ಲಾಂ ಮನುಷ್ಯನನ್ನು ಮನುಷ್ಯನಾಗಿಸುತ್ತದೆ. ಅವನ ಆತ್ಮ ಮತ್ತು ಶರೀರ ವನ್ನು ಪರಿಶುದ್ಧ ಮತ್ತು ಪಾವನ ಗೊಳಿಸುತ್ತದೆ. ಇದು ಸಕಲ ಮಾನವರ ಬದುಕನ್ನು ಸುಗಮ ಮತ್ತು ಸುಂದರ ಗೊಳಿಸಲು ಅವತೀರ್ಣಗೊಂಡ ದೈವಿಕ ಜೀವನ ವ್ಯವಸ್ಥೆಯಾಗಿದೆ. ಆದರೆ ಅನೇಕರುಇದನ್ನರಿಯದೆ
ಅರಿತೂ ಅರಿಯದವರು
ಪವಿತ್ರ ಕುರ್ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ :
"ಹೇ ಜನರೇ! ನಿಮ್ಮನ್ನೂ ನಿಮ್ಮ ಪೂರ್ವಿಕರನ್ನೂ ಸ್ರಷ್ಟಿಸಿದ ನಿಮ್ಮ ಪ್ರಭುವಿನ ದಾಸ್ಯಾರಾಧನೆ ಮಾಡಿರಿ. ಹೀಗೆ ಮಾಡಿದರೆ ನೀವುರಕ್ಷಣೆ ಹೊಂದಬಹುದು. ಅವನೇ ಭೂಮಿಯನ್ನುನಿಮಗೆ ಹಾಸನ್ನಾಗಿ ಹಾಸಿದನು. ನಿಮಗಾಗಿ ಆಕಾಶವನ್ನು ಮೇಲ್ಛಾವಣಿ ಮಾಡಿದನು. ಮೇಲ್ಭಾಗದಿಂದ ಮಳೆ ಸುರಿಸಿದನು.ಅದರ ಮೂಲಕ ತರತರದ ಬೆಳೆಗಳನ್ನು ಉತ್ಪಾದಿಸಿ ನಿಮಗೆ ಆಹಾರ ಒದಗಿಸಿದನು. ಇದನ್ನುನೀವು ಅರಿತಿರುತ್ತ ಇತರ ರನ್ನು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನಾಗಿ ಮಾಡದಿರಿ (ಪವಿತ್ರಕುರ್ಆನ್:ಅಧ್ಯಾಯ 2,ಸೂಕ್ತ 22)

ಇಸ್ಲಾಂ ಎಂದರೇನು?
ಆತ್ಮೀಯರೇ! ನಾವು ಇನ್ನೂ ಸ್ವಲ್ಪ ಮುಂದೆ ಸಾಗಿ ಇಸ್ಲಾಮಿನ ಅಧಿಕ್ರತ ವ್ಯಾಖ್ಯಾನವನ್ನು ತಿಳಿಯೋಣ
ಅರಬೀ ಭಾಷೆಯ'ಇಸ್ಲಾಂ'ಎಂಬ ಪದಕ್ಕೆ ನಿಘಂಟುಗಳಲ್ಲಿ ಅನುಸರಣೆ, ವಿಧೇಯತೆ,ಸಮರ್ಪಣೆ ಎಂಬರ್ಥಗಳಿವೆ. ಅಲ್ಲಾಹನಅನುಸರಣೆ ಮಾಡುವುದು, ಆತನಿಗೆ ವಿಧೇಯತೆ ತೋರುವುದು ಮತ್ತು
ಸರ್ವಸ್ವವನ್ನೂ ಆತನಿಗಾಗಿ ಸಮರ್ಪಿಸುವುದನ್ನು ಇಲ್ಲಿ ಇಸ್ಲಾಂ ಎಂದು ಕರೆಯಲಾಯಿತು. ಹೌದು,ಅಲ್ಲಾಹನ ಸಾನಿಧ್ಯದಲ್ಲಿಸಂಪೂರ್ಣ ಸಮರ್ಪಣೆಯ ಹೆಸರೇ ಇಸ್ಲಾಂ ಆಗಿದೆ.ಆತ್ಮ ಮತ್ತು ಶರೀರದ ಸಂಪೂರ್ಣ ಸಮರ್ಪಣೆ.
ಮನುಷ್ಯ ತನ್ನ ಜೀವನದ ಪ್ರತಿಯೊಂದು ರಂಗದಲ್ಲಿಯೂ ಅಲ್ಲಾಹನ ಆದೇಶ, ನಿರ್ದೇಶಗಳನ್ನು ಪಾಲಿಸ ಬೇಕೆಂದು ಇಸ್ಲಾಂಆಶಿಸುತ್ತದೆ. ಶಿರವನ್ನು ಬಾಗಿಸಿ ದವನು ಮನವನ್ನೂ ಬಾಗಿಸ ಬೇಕೆಂದು ಅದು ಹೇಳುತ್ತದೆ. ಅಲ್ಲಾಹನ ಆದೇಶ ಗಳಿಗೆವಿರುದ್ಧವಾಗಿರುವ ಎಲ್ಲವಿಧ ಆಚಾರ-ವಿಚಾರ,ಸಂಪ್ರದಾಯ ಮತ್ತು ದೇಹೇಚ್ಛೆಗಳನ್ನೂ ಮೆಟ್ಟಿ ನಿಲ್ಲಬೇಕೆಂದು ಇಸ್ಲಾಂ ಆದೇಶಿಸುತ್ತದೆ. ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ ಅವನ ಕಾನೂನುಗಳಿಗೆ ಬದ್ಧನಾಗಿ ಜೀವಿಸಬೇಕು. ವಿಧೇಯತೆಗೆ ಅರ್ಹ ಅಲ್ಲಾಹನುಮಾತ್ರನಾಗಿದ್ದಾನೆ. ಇಸ್ಲಾಂ ಸ್ವೀಕರಿಸುವುದೆಂದರೆ ತನ್ನನ್ನು ದೇಹೇಚ್ಛೆಗಳಿಂದಲೂ,ಅಲ್ಲಾಹೇತರ ದೈವಿಕ ಶಕ್ತಿಗಳ ನಂಬಿಕೆಯಿಂದಲೂಮುಕ್ತಗೊಳಿಸಿ ಅಲ್ಲಾಹನ ಮಾತ್ರ ಅಧೀನತೆ ಯನ್ನು ಸ್ವೀಕರಿಸುವುದಾಗಿದೆ. ಇಸ್ಲಾಮನ್ನು ಪ್ರವೇಶಿಸುವಾಗ ಹೇಳುವ 'ಲಾ ಇಲಾಹಇಲ್ಲಲ್ಲಾಹು'ಎಂಬ ಪವಿತ್ರ ವಚನದ ತಾತ್ಪರ್ಯವೂ ಇದೇ ಆಗಿರುತ್ತದೆ.

ಇಲ್ಲಿ ಯಾಕಿಷ್ಟು ನೀರವತೆ?
ಇಸ್ಲಾಂ ಎಂಬ ಪದಕ್ಕಿರುವ ಇನ್ನೊಂದರ್ಥ ಶಾಂತಿ ಮತ್ತು ಸಮಾಧಾನ ಎಂದಾಗಿದೆ. ಅಲ್ಲಾಹನ ನಿಯಮ ಗಳ ಪಾಲನೆ ಮತ್ತುಆತನ ಕಲ್ಪನೆಗಳ ಅನುಸರಣೆ ಸಂಘರ್ಷ ರಹಿತ ಜೀವನ ನಡೆಸಲು ಅನುಕೂಲಕರ ವಾತಾವರಣವನ್ನು ಸ್ರಷ್ಟಿ ಸುತ್ತದೆ. ಕುಟುಂಬ, ಸಮಾಜ ಮತ್ತು ರಾಷ್ಟ್ರದಲ್ಲೂ ಸಮಾಧಾನ ನೆಲೆಸುತ್ತದೆ. ಹ್ರದಯವು ನೆಮ್ಮದಿಯ ತಾಣವಾಗಿ ಬಿಡುತ್ತದೆ. ಸ್ವಲ್ಪತನ್ನ ಸುತ್ತಮುತ್ತಲಿನಜಗತ್ತನ್ನೊಮ್ಮೆ ಗಮನಿಸಿ ನೋಡಿ ಸೂರ್ಯ, ಚಂದ್ರ, ಭೂಮಿ, ನಕ್ಷತ್ರ ಮತ್ತು ವಿಶ್ವದಲ್ಲಿರುವ ಅಸಂಖ್ಯ ಅಂಗಗಳೆಲ್ಲವೂ ಸೌಹಾರ್ದಯುತ ವಾಗಿ,ಶಾಂತ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆಯಾದರೆ ಅವೆಲ್ಲವೂ ಮುಸ್ಲಿಂ ಆಗಿದೆಯೆಂದರ್ಥ ಇದು ಅವೆಲ್ಲವೂ ಒಬ್ಬನೇದೇವನ ನಿಯಂತ್ರಣದಲ್ಲಿರುವುದನ್ನು ಸಾಬೀತು ಪಡಿಸುತ್ತದೆ . ಆತನಿಗೆ ವಿಧೇ ಯತೆ ತೋರಿ ಅವನನ್ನು ಅನುಸರಿಸುವುದರಿಂದಲೇಇಲ್ಲಿ ಶಾಂತಿ ನೆಲೆಸಿರುವುದು.ಇದೇ ವಾಸ್ತವಿಕತೆ ಯನ್ನು ಪವಿತ್ರ ಕುರ್ಆನ್ ಅತ್ಯಂತ ಮನೋಜ್ಞವಾಗಿ ರೀತಿ ವಿವರಿಸುತ್ತದೆ.
"ಭೂಮಿ ಆಕಾಶಗಳಲ್ಲಿ ಏಕೈಕ ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಇವೆರಡರ ವ್ಯವಸ್ಥೆಯೂ ಕೆಟ್ಟು ಹೋಗುತ್ತಿತ್ತು. ಆದುದರಿಂದ ವಿಶ್ವ ಸಿಂಹಾಸನದ ಪ್ರಭುವಾಗಿರುವ ಅಲ್ಲಾಹ್ ಇವರು ಹೊರಿಸುವ ಆರೋಪಗಳಿಂದ ಪರಿಶುದ್ಧನಾಗಿರುತ್ತಾನೆ. (ಪವಿತ್ರಕುರ್ಆನ್:ಅಧ್ಯಾಯ21,ಸೂಕ್ತ 22)

ಭೂಮಿಯ ಮೇಲೆ ಈಗ ತಾಂಡವಾಡುತ್ತಿರುವ ಅರಾಜಕತೆ, ಅಶಾಂತಿ ಮತ್ತು ಅಸಮಾಧಾನಕ್ಕೆ ಅಲ್ಲಾಹೇತರ ನಿಯಮ ,ನಿರ್ದೇಶಮತ್ತು ಮನುಷ್ಯ ನಿರ್ಮಿತ ಕಾನೂನುಗಳೇ ಮೂಲ ಕಾರಣ ವಾಗಿದೆ. ನಿಯಮ ನಿರ್ಮಿಸುವ ಅಧಿಕಾರ ಕೇವಲ ಅಲ್ಲಾಹನಿಗೆ ಮಾತ್ರಸೀಮಿತವಾಗಿ ರುತ್ತದೆ.' ಯಾರೂ ಯಾರಿಗೂ ನಿಯಮ ನಿರ್ಮಿಸದಿರಿ, ಎಲ್ಲರೂ ಸ್ರಷ್ಟಿಕರ್ತನೂ,ಜಗದೊಡೆಯನೂ ಆದ ಅಲ್ಲಾಹನನಿಯಮಗಳನ್ನು ಮಾತ್ರ ಪಾಲಿಸಿರಿ'ಎಂದು ಇಸ್ಲಾಂ ಸಾರಿ ಹೇಳುತ್ತದೆ. ಅಲ್ಲಾಹನು ನೀಡಿದ ಜೀವನ ವ್ಯವಸ್ಥೆಯನ್ನು ಮನಃಪೂರ್ವಕ,ಪೂರ್ಣ ಸ್ವತಂತ್ರನಾಗಿ ಸ್ವೀಕರಿಸಿ ಅದನ್ನನುಸರಿಸುವ ಪ್ರತಿಜ್ಞೆ ಮಾಡಿದವನೇ ಯತಾರ್ಥದಲ್ಲಿ ಮುಸ್ಲಿಂ ಆಗಿರುತ್ತಾನೆ.


ಏಕದೇವ ವಿಶ್ವಾಸ
ಏಕದೇವ ವಿಶ್ವಾಸವು ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಮೊದಲನೆ ಯದಾಗಿದೆ. ಜಗತ್ತು ಮತ್ತದರಲ್ಲಿರುವ ಸಕಲವಸ್ತುಗಳೂ ಏಕ ಸ್ರಷ್ಟಿಕರ್ತನ ಸ್ರಷ್ಟಿಗಳಾಗಿವೆ, ಸಮಸ್ತ ವಿಶ್ವದ ಪರಿಪಾಲಕನೂ, ಒಡೆಯನೂ, ಅಧಿಪತಿಯೂ ಅವನೇ ಆಗಿರುತ್ತಾನೆ. ಆದುದರಿಂದ ಅವನೊಬ್ಬನೇ ಎಲ್ಲ ವಿಧ ಆರಾಧನೆ ಮತ್ತು ಅರ್ಪಣೆಗಳಿಗೆ ಅರ್ಹನಾದವನು, ಅವನ ಹೊರತು ಪೂಜೆ ಮತ್ತುಆರಾಧನೆಗೆ ಅರ್ಹನಾದವನು ಯಾರೂ ಇಲ್ಲ.ಅವನಲ್ಲದೆ ದಾಸ್ಯ ಮತ್ತು ಅನುಸರಣೆಗೆ ಯೋಗ್ಯ ಯಾರೂ ಇಲ್ಲ. ಅವನೊಂದಿಗೆಭಾಗೀ ದಾರನಾಗಿ ಯಾರೂ ಇಲ್ಲ. ಎಲ್ಲರೂ ಆತನ ಆಶ್ರಿತರು,ಅವನಿಂದ ಸಹಾಯ ಯಾಚಿಸಲು ನಿರ್ಬಂಧಿತರು. ಅವನುಭೌತಿಕವಾದ ಒಂದು ವಸ್ತು ಅಲ್ಲದಿರುವುದರಿಂದ ಅವನಿಗೆ ನಿರ್ದಿಷ್ಟ ಬಣ್ಣ,ರೂಪ ಮತ್ತು ಸ್ಥಳ ಎಂಬ
ಬಂಧನಗಳಿಲ್ಲ.ಆದ್ದರಿಂದ ಮಾನವ ಕಣ್ಣಿಗೆ ಆತನನ್ನು ನೋಡಲು ಸಾಧ್ಯವಿಲ್ಲ . ಪ್ರವಾದಿ ಇಬ್ರಾಹೀಂ() ಘಟನೆಯನ್ನು ಲ್ಲೇಖಿಸಿಪವಿತ್ರ ಕುರ್ಆನ್ ಹೇಳುತ್ತದೆ:
"ನಾವು ಇಬ್ರಾಹೀಮರಿಗೆ ಇದೇ ರೀತಿಯಲ್ಲಿ ಭೂಮಿ-ಆಕಾಶಗಳ ಸಾಮ್ರಾಜ್ಯ ವ್ಯವಸ್ಥೆಯನ್ನು ತೋರಿಸಿ ಕೊಡುತ್ತಿದ್ದೆವು.ಅವರು ದ್ರಢವಿಶ್ವಾಸವುಳ್ಳವರಾಗ ಬೇಕೆಂದು. ಒಮ್ಮೆ ರಾತ್ರಿಕಾಲವು ಅವರನ್ನಾವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು.'ಇದು ನನ್ನ ಪ್ರಭುಎಂದರು.ಆದರೆ ಅದು ಅಸ್ತಮಿಸಿ ದಾಗ 'ನಾನು ಅಸ್ತಮಿಸುವವರಿಗೆ ಮಾರು ಹೋಗುವುದಿಲ್ಲ 'ಎಂದರು.
ಅನಂತರ ಚಂದ್ರವು ಪ್ರಕಾಶಿಸುತ್ತಿರುವುದನ್ನು ಕಂಡಾಗ'ಇದು ನನ್ನ ಪ್ರಭು'ಎಂದರು.ಆದರೆ ಅದೂ ಮುಳುಗಿ ದಾಗ'ನನ್ನ ಪ್ರಭು ನನಗೆಮಾರ್ಗದರ್ಶನ ವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ ಎಂದರು' ತರುವಾಯ ಸೂರ್ಯನನ್ನು ಪ್ರಕಾಶಮಯವಾಗಿಕಂಡಾಗ 'ಇದು ನನ್ನ ಪ್ರ ಭು,ಇದು ಎಲ್ಲಕ್ಕಿಂತ ದೊಡ್ಡ ದಾಗಿದೆ' ಎಂದರು.ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರುಉದ್ಗರಿಸಿದರು:
",ನನ್ನ ಜನಾಂಗ ಬಾಂಧವರೆ ನೀವು ಯಾವುದನ್ನೆಲ್ಲಾ ದೇವನೊಂದಿಗೆ ಸಹಭಾಗಿಗಳನ್ನಾಗಿಸುತ್ತೀರಿ ಅವುಗಳಿಂದ ನಾನುವಿರಕ್ತನಾಗುವೆನು.(ನಂತರ ಹೇಳಿದರು) ನಾನು ಏಕನಿಷ್ಥೆಯಿಂದ ನನ್ನ ಮುಖವನ್ನು ಭೂಮಿ-ಆಕಾಶಗಳನ್ನು ಸ್ರಷ್ಟಿಸಿದವನ ಕಡೆಗೆತಿರುಗಿಸಿದೆನು.ನಾನು ಎಷ್ಟುಮಾತ್ರಕ್ಕೂ ಅಲ್ಲಾಹ ನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ" (ಪವಿತ್ರಕುರ್ಆನ್ :ಅಧ್ಯಾಯ 66,ಸೂಕ್ತ 25-29)

ನೈಜ ಆರಾಧ್ಯ
ಪವಿತ್ರ ಕುರ್ಆನ್ ನೈಜ ಆರಾಧ್ಯನ ವಿವರಣೆ ನೀಡುತ್ತಾ ಹೇಳುತ್ತದೆ."ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂಇಲ್ಲ. ಗೋಚರವಾಗಿರುವ ಮತ್ತು ಅಗೋಚರವಾಗಿರುವ ಎಲ್ಲವನ್ನೂ ಬಲ್ಲವನು. ಅವನು ಪರಮ ದಯಾ
ಮಯನೂ ಕರುಣಾನಿಧಿಯೂ ಆಗಿರುತ್ತಾನೆ. ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ.ಅವನು ಸಾಮ್ರಾಟನು, ಪರಮ ಪಾವನನು. ಸಾಧ್ಯಂತ ಮಂಗಲಮಯನು. ಶಾಂತಿದಾತನು, ಸಂರಕ್ಷಕನು,ಪ್ರಬಲನು, ತನ್ನ ಆಜ್ಞೆಯನ್ನು ಶಕ್ತಿಯಿಂದಅನುಷ್ಥಾನಿಸಿ ಬಿಡುವವನು, ಸದಾ ಸರ್ವೊನ್ನತನಾಗಿಯೇ ಇರುವವನು,ಜನರು ಮಾಡುವ ಸಹಭಾಗಿತ್ವದಿಂದ ಅಲ್ಲಾಹನುಪರಿಶುದ್ಧನು ಸ್ರಷ್ಟಿಯ ಯೋಜನೆ ಮಾಡುವವನೂ ಅದನ್ನು ಜಾರಿ ಗೊಳಿಸುವವನೂ ಅದರಂತೆ ರೂಪ ಕೊಡುವವನೂಅಲ್ಲಾಹನೇ.ಅವನಿಗೆ ಅತ್ಯುತ್ತಮವಾದ ನಾಮಗಳಿವೆ. ಭೂಮಿ ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನನ್ನು ಜಪಿಸುತ್ತದೆ. ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. (ಪವಿತ್ರಕುರ್ಆನ್ :ಅಧ್ಯಾಯ 59,ಸೂಕ್ತ 22-24)

ದೇವನ ಸಹಭಾಗಿ ಯಾರು ತಾನೇ ಆಗಲು ಸಾಧ್ಯ?
ಹಿಂದೆ ನಾನು ಅಣ್ಣಾದೊರೈಯವರನ್ನು ಪ್ರಸ್ತಾವಿಸಿ ಬಂದಿದ್ದೇನೆ. ನಾನು ಪುನಃ ಅವರ ಭಾಷಣವನ್ನು ಉಲ್ಲೇಖಿಸುತ್ತಿದ್ದೇನೆ.ತನ್ನಭಾಷಣದಲ್ಲಿ ಅವರು ಇಸ್ಲಾಮಿನ ಏಕ ದೇವತ್ವವನ್ನು ವಿವರಿಸುತ್ತಾ ಹೇಳಿದ್ದರು "ದೇವನೊಂದಿಗೆ ಯಾರನ್ನೂ ಸಹಭಾಗಿಗಳಾಗಿಮಾಡಬಾರದು" ಎಂಬುದು ಪ್ರವಾದಿವರ್ಯರ ಶಿಕ್ಷಣ ಗಳಲ್ಲಿ ಅತಿ ಪ್ರಾಮುಖ್ಯವಾದುದು. ಶಿಕ್ಷಣವನ್ನು ನಾನು ಮನಸಾರೆಗೌರವಿಸುತ್ತೇನೆ ಮತ್ತು ಅದನ್ನು ಮೆಚ್ಚುತ್ತೇನೆ.
ಶಿಕ್ಷಣವನ್ನು ಏಕೆ ಇಷ್ಟೊಂದು ಗೌರವಿಸಬೇಕು?
ಏಕೆಂದರೆ ಶಿಕ್ಷಣವು ಮನುಷ್ಯನನ್ನು ವಿಚಾರ ಮಾಡಲು ಪ್ರಚೋದಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ.
ಮುಂದೆ ಹೇಳುತ್ತಾರೆ:ದೇವನೊಂದಿಗೆ ಇತರರನ್ನು ಸಹಭಾಗಿಗಳಾಗಿಸುವು ದೆಂದರೆ ಅವರನ್ನು ದೇವನಿಗೆ ಸಮಾನರೆಂದು
ಪರಿಗಣಿಸಿದಂತಾಗುವುದು.ದೇವನ ಸಹಭಾಗಿ ಯಾರು ತಾನೇ ಆಗಲು ಸಾಧ್ಯ? ಆದುದ ರಿಂದಲೇ ಪ್ರವಾದಿವರ್ಯರುಬಹುದೇವಾರಾಧನೆಯಿಂದ ಜನರನ್ನು ತಡೆದರು.
ಅಣ್ಣಾದೊರೈಹೇಳುತ್ತಾರೆ" ಇತರ ಧರ್ಮಗಳಲ್ಲಿ ಬಹುದೇವಾರಾಧನೆಯ ಶಿಕ್ಷಣ ಮತ್ತು ಅನುಮತಿಯಿರುವು ದರಿಂದ ನಮ್ಮಂಥವರುಅನೇಕ ತರದ ನಷ್ಟಗಳಿಗೆ ಗುರಿಯಾಗಿದ್ದಾರೆ. ಬಹುದೇವಾರಾಧನೆಯ ಎಲ್ಲ ದಾರಿ ಗಳನ್ನು ಮುಚ್ಚುವ ಮೂಲಕ ಇಸ್ಲಾಂ ಮನುಷ್ಯನಿಗೆಹಿರಿಮೆ ಮತ್ತು ಔನ್ನತ್ಯವನ್ನು ನೀಡಿದೆಯಲ್ಲದೆ ನೀಚತೆ ಮತ್ತದರ ಪರಿಣಾಮಗಳಿಂದ ಅವನನ್ನು ರಕ್ಷಿಸಿದೆ."(ಅಡಿಯಾರ್ ಪುಸ್ತಕನಾನ್ ಕಾದಲಿಕ್ಕುಂ ಇಸ್ಲಾಂ"(ನಾನು ಪ್ರೀತಿಸುವ ಇಸ್ಲಾಂ )ಪುಟ 39.ಅನುವಾದಕರು:ಇಬ್ರಾಹೀಂ ಸಯೀದ್ )

ಪ್ರವಾದಿತ್ವದ ಮೇಲಿನ ವಿಶ್ವಾಸ
ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಎರಡೆನೆಯದು ಪ್ರವಾದಿತ್ವದ ಮೇಲಿನ ವಿಶ್ವಾಸವಾಗಿದೆ. ಮನುಷ್ಯ ಇತಿಹಾಸದಆರಂಭ ಕಾಲದಿಂದಲೂ ಅಲ್ಲಾಹನು ಕೆಲವು ಚುನಾಯಿತ ವ್ಯಕ್ತಿಗಳನ್ನು ಮಾನವರ ಮಾರ್ಗದರ್ಶನಕ್ಕಾಗಿ ನಿಯೋಜಿಸುತ್ತಿದ್ದನು. ಇವರನ್ನೇ ಪ್ರವಾದಿ ಗಳೆಂದು ಕರೆಯಲಾಯಿತು. ಎಲ್ಲ ಪ್ರವಾದಿಗಳ ಮೇಲೆ ವಿಶ್ವಾಸವಿಡುವುದು ಪ್ರತಿಯೊಬ್ಬ ಮುಸ್ಲಿಮನ ಮೇಲೆಕಡ್ಡಾಯವಾಗಿದೆ. ಇವರ ಪೈಕಿ ಯಾವುದಾದರೊಂದು ಪ್ರವಾದಿಯನ್ನು ನಿರಾಕರಿಸಿದರೆ ಅವನು ಮುಸ್ಲಿಮನಾಗಲು ಸಾಧ್ಯವಿಲ್ಲ. ಮನುಷ್ಯ ಪ್ರಕ್ರತಿಯನ್ನು ಗ್ರಹಿಸಲು ಮತ್ತವರ ಅವಶ್ಯಕತೆಗಳನ್ನರಿಯಲು ದೇವಚರರಿಗೋ ಅಥವಾ ಮನುಷ್ಯೇತರ ಇತರಜೀವಿಗಳಿಗೋ ಸಾಧ್ಯವಿಲ್ಲ. ಆದರಿಂದಲೇ ಅಲ್ಲಾಹನು ಮಾನವರನ್ನೇ ಮಾನವಸುಧಾರಕರಾಗಿ
ನೇಮಿಸಿದನು.ಮನುಷ್ಯರಾಗಿದ್ದರೂ ಪ್ರವಾದಿಗಳು ಶ್ರೇಷ್ಠ ಸ್ವಭಾವದವರಾಗಿದ್ದರು. ಉತ್ತಮ ಚಾರಿತ್ರ್ಯದಉತ್ತುಂಗಕ್ಕೇರಿದವರಾಗಿದ್ದರು .ಇತರರಂತೆ ಅವರೂ ಆಹಾರವನ್ನು ಸೇವಿಸುತ್ತಿದ್ದರು .ಮಲಮೂತ್ರ ವಿಸ ರ್ಜನೆಮಾಡುತ್ತಿದ್ದರು.ವೈವಾಹಿಕ ಜೀವನ ನಡೆಸುತ್ತಿದ್ದರು.ಸಾರ್ವಜನಿಕ ಮತ್ತು ಸಾಮಾಜಿಕ ಚಟುವಟಿಕೆ ಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇತರರಿಗೆ ನೀಡದ ಪ್ರ ತ್ಯೇಕತೆಯೊಂದನ್ನು ಲ್ಲಾಹನು ಅವರಿಗೆ ನೀಡಿದ್ದನು.ಅಗೋಚರವಾಗಿ ದೇವಚರರು ಬಂದುಮಾನವರ ಮಾರ್ಗದರ್ಶನಕ್ಕಾಗಿ ಅಲ್ಲಾಹನ ಸಂದೇಶ ಗಳನ್ನು ನೀಡುತ್ತಿದ್ದರು.ದೇವ ಮಾರ್ಗದಿಂದ ದೂರ ಸರಿಯುತ್ತಿದ್ದಮಾನವಸಮೂಹವನ್ನು ದೇವಸಾನಿಧ್ಯಕ್ಕೆ ಕರೆತರಲು ಪ್ರತ್ಯೇಕ ಕಾಲ ಮತ್ತು ವಿಭಿನ್ನ ಸಮುದಾಯಗಳಲ್ಲಿ ಪ್ರವಾದಿಗಳನ್ನುನಿಯೋಜಿಸುವುದು ಅನಿ ವಾರ್ಯವಾಗಿತ್ತು. ಹೀಗೆ ನಿಯೋಜಿಸಲ್ಪಟ್ಟ ಪ್ರವಾದಿಗಳ ಪೈಕಿ .ಮುಹಮ್ಮದ್()ಕೊನೆಯ ಮತ್ತುಅಂತಿಮ ಪ್ರವಾದಿಯಾಗಿರುವರು. ಇನ್ನು ಅಂತ್ಯ ದಿನದವರೆಗೆ ಬೇರೆ ಯಾವ ಪ್ರವಾದಿಯೂ ಆಗಮಿಸ ಲಿಕ್ಕಿಲ್ಲ . ಎಲ್ಲ ಪ್ರವಾದಿಗಳಮೇಲೆ ವಿಶ್ವಾಸವಿಡುವುದು ಕಡ್ದಾಯವಾಗಿದೆಯಾದರೂ ಪ್ರವಾದಿ ಮುಹಮ್ಮದ್()ರನ್ನು ಮಾತ್ರ ಅನುಸರಿಸಬೇಕೆಂದು ಇಸ್ಲಾಂಆದೇಶಿಸುತ್ತದೆ.ಇಸ್ಲಾಮನ್ನು ಪ್ರವೇಶಿಸುವಾಗ 'ಮುಹಮ್ಮದುರ್ರಸೂಲುಲ್ಲಾಹಿ 'ಎಂದು ಹೇಳಿ ಇದನ್ನೇ ಪ್ರಖ್ಯಾಪಿಸಲಾಗುತ್ತದೆ.

ಪರಲೋಕ ವಿಶ್ವಾಸ
ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಪರಲೋಕ ವಿಶ್ವಾಸವ ಒಂದಾಗಿದೆ. ಇಹಲೋಕಜೀವನ ನಶ್ವರ ಯತಾರ್ಥ ಜೀವನಇದರ ನಂತರ ಬರುವ ಪರಲೋಕದ ಜೀವನವಾಗಿದೆ.ಮನುಷ್ಯ ಇಲ್ಲಿ ಮಾಡಿದ ಪ್ರತಿಯೊಂದು ಕರ್ಮದ ಮರಣಾ ನಂತರಜೀವನದಲ್ಲಿ ಅಲ್ಲಾಹನು ವಿಚಾರಣೆ ನಡೆಸುವನು,ಇಲ್ಲಿ ಯಾರು ಅಲ್ಲಾಹನನ್ನು ತನ್ನ ಏಕೈಕ ನೈಜಆರಾಧ್ಯನೆಂದು ಅಂಗೀಕರಿಸಿಆತನಿಗೆ ವಿಧೇಯತೆ ತೋರಿ ಅವನ ಅನು ಸರಣೆ ಮಾಡಿ,ಸತ್ಕರ್ಮಗಳನ್ನು ಮಾಡುತ್ತಾ ಜೀವಿಸಿರುವವರು ತಮ್ಮ ಕರ್ಮಗಳಿಗೆಅರ್ಹವಾದ ಪ್ರತಿಫಲ 'ಸ್ವರ್ಗ'ವನ್ನು ಪಡೆಯುವರು.ಅವರು ತಮ್ಮ ತಮ್ಮ
ಕರ್ಮಗಳಿಗನುಸಾರ ಸ್ವರ್ಗದಲ್ಲಿ ಉನ್ನತ ಪದವಿ ಗಳಲ್ಲಿ ಅಲಂಕರಿಸಲ್ಪಡುವರು.ಅಲ್ಲಿ ಅವರಿಗಾಗಿ ಅವರು ಬಯಸಿದ್ದೆಲ್ಲವೂಇರುವುದು. ಅಲ್ಲಿ ಅವರಿಗೆ ಚಿಲುಮೆಗಳು ಹರಿಯುತ್ತಿರುವ ಉದ್ಯಾನಗಳಿರುವುವು. ಹಚ್ಚ ಹಸುರಾದ ಮರಗಳಿರುವಉದ್ಯಾನವದು.ಅಲ್ಲಿ ಅವರು ದಪ್ಪ ಗಿನ ರೇಷ್ಮೆಯ ಕವಚಗಳಿರುವ ಹಾಸುಗಳ ಮೇಲೆ ದಿಂಬಿಗೊರಗಿ ಕುಳಿತಿರುವರು.ಅಲ್ಲಿಯಮರಗಳು ಫಲ ಗಳ ಭಾರದಿಂದ ಬಾಗುತ್ತಿರುವುವು. ಸ್ವರ್ಗನಿವಾಸಿಗಳಿಗೆ ಮಾನವನಾಗಲಿ ಅಥವಾ ಜಿನ್ನ್ಆಗಲೀ ಹಿಂದೆಂದೂಸ್ಪರ್ಶಿಸಿರದಂತಹ ವಜ್ರ ಮತ್ತು ಮುತ್ತುಗಳಂತೆ ಸೌಂದರ್ಯವುಳ್ಳ ಲಜ್ಜಾಪೂರ್ಣ ನಯನೆಯರಿರುವರು.
ಇನ್ನು ಯಾರು ಅಲ್ಲಾಹನಿಗೆ ಅವಿಧೇಯತೆ ತೋರಿ ದುಷ್ಕರ್ಮಗಳನ್ನೆಸಗಿರುವರೋ ಅವರು ತಮ್ಮ ಕರ್ಮ ಗಳಿಗೆ ತಕ್ಕ ಶಿಕ್ಷೆಯನ್ನೂಪಡೆಯುವರು.ಶರೀರವನ್ನು ಮಾತ್ರವಲ್ಲ ಮನ ಮಸ್ತಿಷ್ಕವನ್ನೂ ಸುಟ್ಟು ಕರಕಲಾಗಿ ಸುವ 'ನರಕ' ವೆಂಬ ಅಗ್ನಿಕುಂಡವಾಗಿರುವುದುಅವರ ವಾಸಸ್ಥಳ.ಸತ್ಯವನ್ನು ನಿಷೇಧಿಸಿದವರನ್ನು ಅಗ್ನಿಜ್ವಾಲೆ ಗಳು ಆವರಿಸಿರುವುದು.ಅಲ್ಲಿ ಅವರು ದಾಹವನ್ನು ಸಹಿಸಲಾಗದೆನೀರನ್ನು ಕೇಳುವರು ಆಗ ಅವರ ಬಾಯನ್ನು ಸುಟ್ಟುಹಾಕುವಂಥ ಎಣ್ಣೆಯ ಮಡ್ಡಿಯನ್ತಿರುವ ನೀರಿನಿಂದ ಅವರನ್ನು ಸತ್ಕರಿಸ ಲಾಗುವುದು. ಅಲ್ಲಿ ಅನುಕಂಪ ತೋರುವವರಾರೂ ಇರಲಾರರು. ಗಾಯದ ಕೀವು ಇವರ ಆಹಾರವಾಗಿರುವುದು

ಇಸ್ಲಾಮೀ ಸೌಧದ ಅಧಾರ ಸ್ತಂಭಗಳು
ಆತ್ಮೀಯರೇ!ಇದುವರೆಗೆ ಇಸ್ಲಾಂ ಎಂದರೇನು?ಅದು ಏನನ್ನು ಬಯಸುತ್ತದೆ? ಅದು ಯಾರಿಗಾಗಿ ಬಂದಿದೆ ಮತ್ತದರ ಮೂಲಭೂತವಿಶ್ವಾಸಗಳೇನೆಂಬುದನ್ನು ವಿವರಿಸಿದ್ದೇನೆ.ಮುಂದೆ ಸಾಗೋಣ ಮತ್ತು ಇಸ್ಲಾಮಿನ ಮೂಲಭೂತ ಕರ್ಮಗಳ ಕುರಿತೂ ಒಂದಿಷ್ಟುತಿಳುವಳಿಕೆಯನ್ನು ಪಡೆಯೋಣ.
ಇಸ್ಲಾಮಿನ ಮಹಾ ಸೌಧವು ಐದು ಅಧಾರ ಸ್ತಂಭಗಳ ಮೇಲೆ ನಿಂತಿದೆ.ಅವುಗಳಲ್ಲಿ
ಮೊದಲನೆಯದು ಸತ್ಯದ ಸಾಕ್ಷ್ಯ ವಹಿಸುವುದು
ಎರಡನೆಯದು ನಮಾಜ್ ನಿರ್ವಹಿಸುವುದು
ಮೂರನೆಯದು ಝಕಾತ್ ನೀಡುವುದು
ನಾಲ್ಕನೆಯದು ರಮದಾನ್ ತಿಂಗಳ ವ್ರತಾಚರಿಸುವುದು ಮತ್ತು
ಐದನೆಯದು ಹಜ್ಜ್ ನಿರ್ವಹಿಸುವುದು
ಇನ್ನು ಪ್ರತಿಯೊಂದನ್ನೂ ಸವಿಸ್ತಾರವಾಗಿ ತಿಳಿಯೋಣ

ಸತ್ಯದ ಸಾಕ್ಷ್ಯ ವಹಿಸುವುದೆಂದರೇನು?

ಈಗ
ತಾನೆ ವಿವರಿಸಿ ಬಂದಂತೆ ಇಸ್ಲಾಂ ಏಕದೇವತ್ವ,ಪ್ರವಾದಿತ್ವ ಮತ್ತು ಪರಲೋಕವಿಶ್ವಾಸಗಳಂತಹ ಮೂಲಭೂತನಂಬಿಕೆಗಳನ್ನೊಳಗೊಂಡಿದೆ. ನಂಬಿಕೆಗಳ ಅಂಗೀಕಾರ ಪ್ರಖ್ಯಾಪನೆಯನ್ನೇ ಸತ್ಯದ ಸಾಕ್ಷ್ಯ ವಹಿಸುವುದೆಂದು ಹೇಳಲಾಗುತ್ತದೆ. "ಸ್ರಷ್ಟಿಕರ್ತನೂ,ಪರಿಪಾಲಕನೂ ಆದ ಏಕಅಲ್ಲಾಹನ ಹೊರತು ಆರಾಧನೆ,ವಿಧೇಯತೆ ಮತ್ತು ಅನುಸರಣೆಗೆ ಅರ್ಹರಾದವರುಬೇರಾರೂ ಇಲ್ಲ ಮತ್ತು ಮುಹಮ್ಮದ್() ಅಲ್ಲಾಹನ ದಾಸರೂ ಅಂತಿಮ ದೂತರೂ ಆಗಿರುವರು" ಎಂದಾಗಿದೆ ಪ್ರಖ್ಯಾಪನೆಯಸಾರ.

ಇದು ಅಂತರಂಗ ಶುದ್ಧಿ, ಇದು...
ಎರಡೆನೆಯ ಕರ್ಮ ನಮಾಜ್ ನಿರ್ವಹಿಸುವುದಾಗಿದೆ.ಪ್ರತಿ ದಿನ ಹಗಲು ರಾತ್ರಿ ಯಾಗಿ ಐದುಬಾರಿ ತನ್ನ ಸ್ರಷ್ಟಿಕರ್ತನೊಂದಿಗೆನೇರಸಂಪರ್ಕ ಸಾಧಿಸ ಬಹುದಾದ ಆರಾಧನೆಯಾಗಿದೆ ನಮಾಜ್. ನಿಜ ಜೀವ ನದ ಪ್ರತಿ ಘಳಿಗೆಯಲ್ಲೂ ಅಲ್ಲಾಹನೊಂದಿಗೆನಿರಂತರ ಸಂಪರ್ಕ ಸಾಧಿಸುವುದೂ ಇದರ ಮೂಲೋದ್ದೇಶ ಗಳಲ್ಲೊಂದು. ನಮಾಜ್ ಮನುಷ್ಯನ ಅಂತರಂಗವನ್ನೂಬಹಿರಂಗವನ್ನೂ ಕೊಳಕು ಮತ್ತು ಮಾಲಿನ್ಯ ಗಳಿಂದ ಶುಚಿಗೊಳಿಸುವ ಸಾಧನವೂ ಹೌದು.ಅಂಗಾಂಗಗಳನ್ನು ಶುಚಿಗೊಳಿಸದೆನಮಾಜ್ ನಿರ್ವಹಿಸಲು ಸಾಧ್ಯವೇ ಇಲ್ಲ.ಪವಿತ್ರ ಕುರ್ಆನ್ ಹೇಳುತ್ತದೆ:
",ಸತ್ಯ ವಿಶ್ವಾಸಿಗಳೇ!ನೀವು ನಮಾಜಿಗೆಂದು ಹೊರಟಾಗ ನಿಮ್ಮಮುಖಗಳನ್ನು ಮತ್ತು ಮೊಣಕೈ ಗಂಟುಗಳವರೆಗೆ ಕೈಗಳನ್ನುತೊಳೆದು ಕೊಳ್ಳಿರಿ. ಜನಾಬತ್ ಅಥವಾ ವೀರ್ಯಸ್ಖಲನಾ ನಂತರದ ಮಾಲಿನ್ಯದ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ಧ ರಾಗಿ ಕೊಳ್ಳಿರಿ. ನೀವು ಅನಾರೋಗ್ಯದಿಂದಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲಾರಾದರೂ ಮಲ ಮೂತ್ರ ವಿಸರ್ಜನೆ ಮಾಡಿ ಬಂದರೆಅಥವಾ ನೀವು ಸ್ತ್ರೀಯರನ್ನು ಸ್ಪರ್ಶಿಸಿದ್ದರೆ ಮತ್ತು ಆಬಳಿಕ ನೀರು ಸಿಗದೇ ಹೋದರೆ ಶುದ್ಧ ಮಣ್ಣನ್ನು ಉಪಯೋಗಿಸಿ ಕೊಳ್ಳಿರಿ. ಅದರಮೇಲೆ ಹಸ್ತಗಳನ್ನು ಬಡಿದು ನಿಮ್ಮ ಮುಖ ಮತ್ತು ಕೈಗಳ ಮೇಲೆ
ಸವರಿಕೊಳ್ಳಿರಿ. ಅಲ್ಲಾಹ್ ನಿಮ್ಮ ಜೀವನ ವನ್ನು ಸಂಕುಚಿತಗೊಳಿಸಲಿಚ್ಛಿಸುವುದಿಲ್ಲ.ಬದಲಾಗಿನೀವು ಕ್ರತಜ್ಞರಾಗಲೆಂದು.ಅವನುನಿಮ್ಮನ್ನು ಪರಿಶುದ್ಧಗೊಳಿಸಲಿಕ್ಕೂ ನಿಮ್ಮಮೇಲೆ ತನ್ನ ಕೊಡುಗೆಗಳನ್ನು ಪರಿಪೂರ್ಣಗೊಳಿಸಲಿಕ್ಕೂ . (ಪವಿತ್ರಕುರ್ಆನ್:ಅಧ್ಯಾಯ5ಸೂಕ್ತ 6)
ಪ್ರವಾದಿ ಮುಹಮ್ಮದ್() ರೀತಿ ಹೇಳಿರುವರು:
"ನಿಮ್ಮ ಪೈಕಿ ಒಬ್ಬಾತನ ಮನೆಯ ಮುಂದೆ ಒಂದು ನದಿ ಹರಿಯುತ್ತಿದೆ ಅದರಲ್ಲಿ ಅವನು ಪ್ರತಿ ದಿನ ಐದುಬಾರಿ ಸ್ನಾನಮಾಡುತ್ತಾನೆಂದಾದರೆ ಅವನ ಕುರಿತು ನಿಮ್ಮ ಅಭಿಪ್ರಾಯವೇನು?ಆತನ ಶರೀರದಲ್ಲಿ ಅಲ್ಪವಾದರೂ ಮಲಿನತೆ ಅಥವಾ ಕೊಳಕುಬಾಕಿಯಿರುವುದೇ? ಸಹಚರರು ಉತ್ತರಿಸಿದರು, ಇಲ್ಲ, ಅವನ ಶರೀರದಲ್ಲಿ ಸ್ವಲಪವೂ ಮಲಿನತೆ ಅಥವಾ ಕೊಳಕು ಬಾಕಿಯಿರಲಾರದು. ಆಗ ಪ್ರವಾದಿ() ಹೇಳಿದರು ಇದೇತರ ಐದು ಸಮಯದ ನಮಾಜ್ ಗಳಿಂದಲೂ ಅಲ್ಲಾಹನು ವ್ಯಕ್ತಿಯ ಪಾಪಗಳನ್ನುಕ್ಷಮಿಸಿ ಬಿಡುತ್ತಾನೆ"
ಹೌದು, ನಮಾಜ್ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ.

ಸಂಪಾದನೆಯಲ್ಲಿ ಆರಾಧನೆ
ಇಸ್ಲಾಮಿನ ಮೂರನೇ ಕಡ್ಡಾಯ ಕರ್ಮ ಝಕಾತ್ ಆಗಿದೆ.ನಮಾಜ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ದೇವಸಂಪ್ರೀತಿಯನ್ನು ಗಳಿಸುವ ಮಾರ್ಗವಾಗಿದೆ.ಒಬ್ಬ ಸ್ಥಿತಿವಂತ ಮುಸ್ಲಿಂ ತನ್ನ ಸಂಪಾದನೆಯ ನಿರ್ದಿಷ್ಟ ಭಾಗವನ್ನು ಅರ್ಹರಿಗೆನಿರ್ಬಂಧಿತವಾಗಿ ಕೊಡಲೇ ಬೇಕು.ಝಕಾತ್ ಸಿರಿವಂತರು ತೋರುವ ಔದಾರ್ಯವಲ್ಲದೆ ಅದು ಬಡವರ ಹಕ್ಕಾಗಿದೆ ಎಂದು ಇಸ್ಲಾಂತಿಳಿಸುತ್ತದೆ.ಸಂಪತ್ತಿನ ಒಡೆಯ ಅಲ್ಲಾಹನಾಗಿರುತ್ತಾನೆ.ಮನುಷ್ಯಅದರ ಮೇಲ್ವಿಚಾರಕ ಮಾತ್ರನಾಗಿರುತ್ತನೆಂದೂ ಅದುನೆನಪಿಸುತ್ತದೆ.ಸಮಾಜಿಕ ಜೀವನದ ಕೆಲವು ಮಹತ್ತರವಾದ ಉದ್ದೇಶಗಳನ್ನು ಈಡೇರಿಸುವುದೂ ಝಕಾತಿನ ಔಚಿತ್ಯಗಳಲ್ಲೊಂದು . ಅವುಗಳಲ್ಲಿ ಮುಖ್ಯವಾದುದನ್ನು ನಾನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ.
1. ಸಂಪತ್ತನ್ನು ಶುಚಿಗೊಳಿಸುವುದು.ಅದನ್ನು ವ್ರದ್ಧಿಸುವುದು ಮತ್ತು ಅಲ್ಲಾಹನ ಆಜ್ಞಾಪಾಲನೆಯಿಂದ ಸಂಭವನೀಯ ವಿಪತ್ತುಗಳಿಂದಅದನ್ನು ರಕ್ಷಿಸಿಕೊಳ್ಳುವುದು.
2. ಲೋಭ,ಜಿಪುಣತೆ ಮತ್ತು ದುರಾಸೆಗಳಂತಹ ದುಶ್ಚಟಗಳಿಂದ ಮನುಷ್ಯ ಮನಸ್ಸನ್ನು ಸ್ವಚ್ಛಗೊಳಿಸುವುದು.
3. ಬಡವರು ಮತ್ತು ನಿರ್ಗತಿಕರೊಂದಿಗೆ ಸಹಾನುಭೂತಿ ತೋರುವುದರ ಜೊತೆಗೆ ದರಿದ್ರರ,ವಂಚಿತರ ಮತ್ತು ಹಸಿದವರಅವಶ್ಯಕತೆಗಳನ್ನು ಪೂರೈಸುವುದು.
4. ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಸಮಾಜವನ್ನು ಬಲಿಷ್ಠಗೊಳಿಸುವುದು.
ಇದೇ ಕಾರಣದಿಂದ ಝಕಾತ್ ನೀಡದವರಿಗೆ ಮತ್ತು ಅದನ್ನು ತಡೆಹಿಡಿದವರಿಗೆ ಕಠಿಣ ಶಿಕ್ಷೆಯಾಗುವುದೆಂದು ಪವಿತ್ರಕುರ್ಆನ್ಎಚ್ಚರಿಕೆ ನೀಡುತ್ತದೆ. ಅದು ಹೇಳುತ್ತದೆ:
" ಸತ್ಯ ವಿಶ್ವಾಸಿಗಳೇ! ಗ್ರಂಥದವರ ಅಧಿಕಾಂಶ ವಿಧ್ವಾಂಸರೂ ಸಂತರೂ ಜನರ ಸಂಪತ್ತನ್ನು ಅನಧಿಕ್ರತ ವಿಧಾನಗಳಿಂದಕಬಳಿಸುತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನುದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ
ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ. ಚಿನ್ನ ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು.ತರುವಾಯಅದರಿಂದಲೇ ಅವರ ಹಣೆಗಳಿಗೂ,ಪಾರ್ಶ್ವಗಳಿಗೂ ಮತ್ತು ಬೆನ್ನುಗಳಿಗೂ ಬರೆ ಹಾಕಲಾಗು ವುದು.ನೀವು ನಿಮಗಾಗಿ ಸಂಗ್ರಹಿಸಿಟ್ಟಿದ್ದಸಂಪತ್ತು ಇದುವೇ,ಈಗ ನೀವು ಕೂಡಿ ಹಾಕಿದ್ದ ಸಂಪತ್ತನ್ನು ಸವಿಯಿರಿ"(ಎನ್ನಲಾಗುವುದು)(ಪವಿತ್ರಕುರ್ಆನ್:ಅಧ್ಯಾಯ 9ಸೂಕ್ತ
ಮಾನ್ಯರೇ!ಒಂದು ವಿಭಾಗ ಜನರು ಸಂಪತ್ತನ್ನು ಶೇಖರಿಸಿಡುವುದು ಮತ್ತೊಂದು ವಿಭಾಗ ಜನರು ನಿರ್ಗತಿಕರಾಗಿರುವುದಕ್ಕೆ ಇಸ್ಲಾಂಎಂದಿಗೂ ಆಸ್ಪದ ಕೊಡುವುದಿಲ್ಲ.

ಉಪವಾಸವೆಂಬ ಸೆರೆವಾಸ
ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿಮುಹಮ್ಮದ್()ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ,ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯದೌರ್ಬಲ್ಯ ಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣವ್ರತಾಚರಣೆಯ ಉದ್ದೇಶವಾಗಿದೆ.

ಏಕತೆಯ ಪ್ರತೀಕ
ಐದನೆಯ ಮತ್ತು ಕೊನೆಯ ಕಡ್ಡಾಯಕರ್ಮ ಹಜ್ಜ್ ನಿರ್ವಹಿಸುವುದಾಗಿದೆ. ಆರ್ಥಿಕವಾಗಿಯೂ ದೈಹಿಕವಾಗಿಯೂ ಸಾಮರ್ಥ್ಯ ವುಳ್ಳವರು ನಿರ್ಬಂಧಿತರಾಗಿ ಕೈಗೊಳ್ಳಲೇಬೇಕಾದ ಅರೇಬಿಯಾದಲ್ಲಿರುವ ಮಕ್ಕಾನಗರದ ತೀರ್ಥಯಾತ್ರೆಯ ಹೆಸರೇ ಹಜ್ಜ್ ಆಗಿರುತ್ತದೆ. ಹಜ್ಜ್ ವಿಶ್ವ ಸಹೋದರತೆಯನ್ನು ಪ್ರತಿಪಾದಿಸುವ ಮಹಾ ಸಮ್ಮೇಳನವಾಗಿದೆ. ಸಕಲ ಮನುಷ್ಯರೂ ಅಲ್ಲಾಹನ ದಾಸರು ಮತ್ತು ಅವನ ಅನುಸರಣೆ ಮಾಡಬೇಕಾದವರು ಮತ್ತು ಆತನ ಅನುಸರಣೆಯಲ್ಲಿಯೇ ಸಮಾನತೆ ಮತ್ತು ಸಮಾಧಾನ ಕಂಡು ಕೊಳ್ಳಬೇಕಾದವರು ಎಂಬ ತಾತ್ಪರ್ಯ ವನ್ನು ಹಜ್ಜ್ ನೀಡುತ್ತದೆ.ಯತಾರ್ಥದಲ್ಲಿ ಏಕದೇವತ್ವವನ್ನು ಬಲವಾಗಿ ಪ್ರತಿಪಾದಿ ಸುವ ಇಸ್ಲಾಂ, ಏಕತೆಯನ್ನು ಸಾಧಿಸಿ ತೋರಿಸಿದ ಏಕೈಕ ಧರ್ಮವಾಗಿದೆ. ಇದೇ ಕಾರಣದಿಂದ
'ಮಾನವ ಸಮಾನತೆಯ ಯಾವ ಎತ್ತರಕ್ಕೆ ಇಸ್ಲಾಂ ತಲುಪಿರುತ್ತದೆ ಅಲ್ಲಿಗೆ ತಲುಪಲು ಇತರ ಯಾವ ಧರ್ಮಕ್ಕೂಸಾಧ್ಯವಾಗಿಲ್ಲವೆಂದು' ಸ್ವಾಮಿ ವಿವೇಕಾನಂದರು ಹೇಳಿರುವರು

ಹ್ರದಯಗಳು ಬೆಸೆದಾಗ
ನಾನು ಇಲ್ಲಿ ಪುನಃ ಅಣ್ಣಾದೊರೈಯವರನ್ನು ಪ್ರಸ್ತಾಪಿಸುವುದು ಉಚಿತವೆನಿಸುತ್ತದೆ ಹೇಳುತ್ತಾರೆ. ಇಸ್ಲಾಮಿನ ಇನ್ನೊಂದು ಗುಣವಿಶೇಷತೆಯೇನಂದರೆ ಯಾರು ಧರ್ಮವನ್ನು ಸ್ವೀಕರಿಸದನೋ ಅವನು ಕುಲ-ಗೋತ್ರಗಳ ಭೇದಭಾವವನ್ನು ಮರೆತೇಬಿಟ್ಟನು.ಮುದಗತ್ತೂರಿನಲ್ಲಿ (ತಮಿಳುನಾಡಿನ ಒಂದು ಊರು) ಪರಸ್ಪರ ಕತ್ತು ಕೊಯ್ಯುತ್ತಿದ್ದ ಜನರು ಇಸ್ಲಾಂ ಸ್ವೀಕರಿಸತೊಡಗಿದಾಗ ಇಸ್ಲಾಂ ಅವರನ್ನು ಅಣ್ಣ ತಮ್ಮಂದಿರಾಗಿ ಮಾರ್ಪಡಿಸಿತು.ಎಲ್ಲ ಭೇದಭಾವವೂ ಕೊನೆಗೊಂಡಿತು.ನೀಚ ಕುಲದವರುನೀಚರಾಗಿ ಉಳಿಯಲಿಲ್ಲ.ಎಲ್ಲರೂ ಸನ್ಮಾನ್ಯರೂ ಗೌರವಾನ್ವಿತರೂ ಆಗಿ ಮಾರ್ಪಟ್ಟರು. ಎಲ್ಲರೂ ಸಮಾನ ಹಕ್ಕುಗಳನ್ನೂಹೊಂದಿದವರಾಗಿ ಪರಸ್ಪರ ಸಹೋದರತೆಯ ಬಂಧನದಲ್ಲಿ ಬಿಗಿಯಲ್ಪಟ್ಟಿತು.
(ಅಡಿಯಾರ್ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"(ನಾನು ಪ್ರೀತಿಸುವ ಇಸ್ಲಾಂ) ಪುಟ 40. ಅನುವಾದಕರು:ಇಬ್ರಾಹೀಂಸಯೀದ್

ಒಟ್ಟಿನಲ್ಲಿ ಇಸ್ಲಾಂ ಅಂಧಕಾರದಲ್ಲೊಂದು ನಂದಾದೀಪ
ವ್ಯಾಕುಲರಿಗೊಂದು ಸಂಧ್ಯಾರಾಗ
ಕತ್ತಲು ಭಾಗ್ಯದ ಆಶಾ ಕಿರಣ

ليست هناك تعليقات:

إرسال تعليق