الجمعة، 6 فبراير 2009

ವ್ಯಕ್ತಿ ಮತ್ತು ಆತನ ಪ್ರಭು



ಮನುಷ್ಯನ ತನ್ನ ಸ್ರಷ್ಟಿಕರ್ತನೊಂದಿಗಿರುವ ಸಂಬಂಧವು ಏಕದೇವತ್ವದ ಸಂದೇಶವನ್ನು ಸಾರುವ "ಲಾ ಇಲಾಹ ಇಲ್ಲಲ್ಲಾಹು" ಎಂಬ ಪವಿತ್ರ ವಚನದ ಆಧಾರದ ಮೇಲೆ ನಿಂತಿದೆ. ಇದರ ಅರ್ಥ ಅಲ್ಲಾಹನ ಹೊರತು ಆರಾಧನೆಗೆ ಅರ್ಹ ಯಾರೂ ಇಲ್ಲ ವೆಂದಾಗಿರುತ್ತದೆ. ವ್ಯಕ್ತಿಯು ತನ್ನ ಪ್ರಭುವಿಗೆ ತೋರುವ ವಿಧೇಯತೆಯು ಎಲ್ಲ ಸಮಯ ಮತ್ತು ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಕಟವಾಗಬೇಕು. ಕೇವಲ ಅವನನ್ನು ಮಾತ್ರ ಸರ್ವಾಧಿಕಾರಿಯನ್ನಾಗಿ ಅಂಗೀಕರಿಸಬೇಕು, ಅವನ ಮೇಲೆ ಭರವಸೆಯಿಡಬೇಕು, ಅವನನ್ನು ಭಯ ಪಡಬೇಕು, ಅವನೆಡೆಗೆ ಮರಳುವವನಾಗಿರಬೇಕು, ಅವನ ನಿಯಮವನ್ನು ಜಾರಿ ಗೊಳಿಸಬೇಕು, ಅವನ ಧರ್ಮವನ್ನು ಸಂಸ್ಥಾಪಿಸಬೇಕು. ಇವುಗಳೆಲ್ಲ ವ್ಯಕ್ತಿಯ ಸಂಬಂಧವನ್ನು ಆತನ ಪ್ರಭುವಿನೊಂದಿಗೆ ಗಟ್ಟಿಯಾಗಿಸುತ್ತದೆ. ಮತ್ತು ಅಲ್ಲಾಹನ ಮುಂದೆ ಆತನ ಶರಣಾಗತಿಯ ಪ್ರಮಾಣವನ್ನು ವ್ಯಕ್ತವಾಗಿಸುತ್ತದೆ.

ಆರಾಧನೆಗಳು ಆತ್ಮವನ್ನು ಸಂಸ್ಕರಿಸುತ್ತದೆ ಮತ್ತು ಅದನ್ನು ನಿರ್ಮಲಗೊಳಿಸುತ್ತದೆ. ತೆರೆಯಲ್ಲಿಯೂ ಮರೆಯಲ್ಲಿಯೂ ಅಲ್ಲಾಹನ ಸ್ಮರಣೆ ಅವನನ್ನು ದುಷ್ಕರ್ಮಗಳಿಂದ ತಡೆದು ನಿಲ್ಲಿಸುತ್ತದೆ ಹಾಗೂ ಸತ್ಕರ್ಮಗಳನ್ನು ಮಾಡಲು ಪ್ರೇರೇಪಿಸುತ್ತದೆ. ಇದು ಸಮಾಜದ ಸ್ಥಿರತೆಗೆ ಕಾರಣವಾಗುತ್ತದೆ. ಮಾತ್ರವಲ್ಲ ಇದು ಸಮಾಜದಲ್ಲಿ ಸಮಾನತೆ, ನ್ಯಾಯ, ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಹಿರಿಮೆ, ಹೊಂದಾಣಿಕೆ ಮತ್ತು ತ್ಯಾಗಗಳಂತಹ ಉತ್ತಮ ಆದರ್ಶಗಳನ್ನು ವ್ರದ್ಧಿಸಲೂ ಕಾರಣವಾಗುತ್ತದೆ. ಹೀಗೆ ವ್ಯಕ್ತಿ ಮತ್ತು ಆತನ ಪ್ರಭುವಿನ ಮಧ್ಯೆ ಸಂಬಂಧ ಗಟ್ಟಿಯಾದಂತೆಲ್ಲಾ ವ್ಯಕ್ತಿ ಮತ್ತು ಸಮಾಜದ ಮಧ್ಯೆ ಸಂಬಂಧವನ್ನು ವ್ರದ್ಧಿಸಲು ವಿಶಾಲ ದಾರಿ ಉಂಟಾಗುತ್ತದೆ.

ಏಕ ದೇವ ವಿಶ್ವಾಸ ಮತ್ತು ಏಕ ದೇವೋಪಾಸನೆಯೇ ಈ ಸಂಬಂಧಕ್ಕೆ ಅಡಿಪಾಯ ವಾಗಿರುತ್ತದೆ

ليست هناك تعليقات:

إرسال تعليق