السبت، 7 فبراير 2009

ವಜ್ರ ಮಣಿಗಳು



ದಿನವೊಂದರಲ್ಲಿ ಹಲವು ಬಾರಿ ಮುಖವನ್ನು ತೊಳೆದುಕೊಳ್ಳಲು ತೋರುವ ಉತ್ಸಾಹವನ್ನು ವರ್ಷಕ್ಕೊಮ್ಮೆಯಾದರೂ ಮನ ತೊಳೆದುಕೊಳ್ಳಲು ತೋರಬೇಡವೇ?!
ಒಬ್ಬ ವ್ಯಕ್ತಿಯ ಯತಾರ್ಥ ಗೌರವ ಅವನೆಷ್ಟು ಉನ್ನತಿ ಗೇರಿದ್ದಾನೆಂಬುದರಲ್ಲಿಲ್ಲ ಬದಲಾಗಿ ಆ ಉನ್ನತಿಗೇರಲು ತುಳಿದ ಹಾದಿಯಿಂದ ಬರುತ್ತದೆ.
ಮೌನವಾಗಿರು ಜನರ ಪ್ರೀತಿಗೆ ಪಾತ್ರನಾಗುವೆ. ಮ್ರದುವಾಗಿರು ಜನರ ಗೌರವಕ್ಕೆ ಪಾತ್ರನಾಗುವೆ.
ತನ್ನನ್ನು ಯಾರೊಂದಿಗೂ ಹೋಲಿಸ ಬೇಡ . ಅದು ನಿನ್ನನ್ನು ನೀನೇ ಹೀಯಾಳಿಸಿದಂತೆ.
ಇತರರನ್ನು ದೂರಬೇಡ ಸಾಧ್ಯವಾದರೆ ತನ್ನನ್ನು ತಾನೇ ಬದಲಾಯಿಸಿಕೊಳ್ಳು ಏಕೆಂದರೆ ಭೂಮಿಗೆ ಹೊದಿಕೆ ಹಾಸುವುದಕ್ಕಿಂತ ಮೆಟ್ಟು ಧರಿಸಿ ಕಾಲನ್ನು ರಕ್ಷಿಸಿಕೊಳ್ಳುವುದೇ ಲೇಸು.
ಆರಂಭವು ಕೆಟ್ಟದಾಗಿತ್ತೆಂದು ಹಿಂದೆ ಹೋಗಿ ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ತತ್ ಕ್ಷಣ ಕ್ರಿಯಾಶೀಲನಾಗಿ ಒಳ್ಳೆಯ ಅಂತ್ಯವನ್ನು ಕಾಣಲು ಎಲ್ಲರಿಂದಲೂ ಸಾಧ್ಯ.
ಇತರರ ತಪ್ಪುಗಳೆಡೆಗೆ ಬೆರಳು ತೋರಿಸುವುದು ಸುಲಭದ ಕೆಲಸ ಆದರೆ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದೇ ಕಷ್ಟ ಬಗೆಹರಿಸಲು ಸಾಧ್ಯವಿರುವ ಸಮಸ್ಯೆಯ ಕುರಿತು ಬೇಸರ ಪಡುವ ಅಗತ್ಯವಿಲ್ಲ.
ಬಗೆಹರಿಸಲಸಾಧ್ಯವಾದ ಸಮಸ್ಯೆಯ ಕುರಿತು ಬೇಸರ ಪಟ್ಟು ಲಭಿಸುವುದಾದರೂ ಏನು? ಸೋಲನ್ನು ಧೈರ್ಯದಿಂದ ಎದುರಿಸು ಮತ್ತು ಗೆದ್ದೂ ಶಾಂತವಾಗಿರು.
ಕೈ ಇಲ್ಲದ ಕೀಲಿಯನ್ನು ಯಾವೊಬ್ಬನೂ ತಯಾರಿಸುವುದಿಲ್ಲ ಅಂದ ಹಾಗೆ ಪರಿಹಾರವಿಲ್ಲದ ಸಮಸ್ಯೆಯನ್ನೂ ದೇವನು ಸ್ರಷ್ಟಿಸಿಲ್ಲ. ಯಶಸ್ಸನ್ನರಸಿದ ಪ್ರತಿಯೊಬ್ಬನ ಹಿಂದೆಯೂ ವೇದನಾಜನಕ ಕಥೆಯೊಂದಿರುತ್ತದೆ ಅದೇ ಪ್ರಕಾರ ಪ್ರತಿಯೊಂದು ವೇದನಾಯುಕ್ತ ಕಥೆಯೂ ಯಶಸ್ಸಿನೊಂದಿಗೆ ಅಂತ್ಯಗೊಳ್ಳುತ್ತದೆ ಎಂಬ ನಂಬಿಕೆ ಇಡು. ಕಾಯಿಸಿದ ಸ್ವರ್ಣ ಆಭರಣವಾಗಿ ಬದಲಾಗುತ್ತದೆ.
ಪೆಟ್ಟು ತಿಂದ ತಾಮ್ರ ತಂತಿಯಾಗಿ ರೂಪುಗೊಳ್ಳುತ್ತದೆ ಮತ್ತು ಕೆತ್ತಲ್ಪಟ್ಟ ಶಿಲೆಯು ಶಿಲ್ಪವಾಗುತ್ತದೆ. ಹಾಗಾದರೆ ನೋವು ತಿಂದಷ್ಟೂ ನೀನು ಅಮೂಲ್ಯನಾಗುತ್ತಾ ಹೋಗುವೆ.
ತಪ್ಪು ಸಂಭವಿಸುವುದು ಮನುಷ್ಯ ಸಹಜ . ತಪ್ಪು ಸಂಭವಿಸಿದ ಕ್ಷಣ ಬಹಳ ಖೇದ ಉಂಟಾಗುತ್ತದೆ ಆದರೆ ಒಂದು ಹಂತದಲ್ಲಿ ಇದೇ ತಪ್ಪುಗಳು ವಿಜಯದತ್ತ ಸಾಗಿಸುವ ಅನುಭವ ಜ್ಞಾನವಾಗಿರುತ್ತದೆ.
ನೀನು ವ್ಯಾಕುಲನಾದಾಗ ಜೀವನ ನಿನ್ನನ್ನು ಗೇಲಿಮಾಡಿ ನಗುತ್ತದೆ. ನಿನ್ನನ್ನು ಸಂತ್ರಪ್ತನಾಗಿ ಕಂಡಾಗ ಜೀವನ ಮಂದಹಾಸ ಬೀರುತ್ತದೆ. ಆದರೆ ನೀನು ಇತರರನ್ನು ಸಂತೋಷ ಪಡಿಸಿದರೆ ಜೀವನ ನಿನ್ನನ್ನು ಅಬಿವಂದಿಸುತ್ತದೆ.
ಒಂದು ಸುದವಕಾಶವು ಕೈ ಚೆಲ್ಲಿತೆಂದು ಕಣ್ಣಲ್ಲಿ ನೀರು ತುಂಬಿಕೊಳ್ಳಬೇಡ, ಇತರ ಉತ್ತಮ ಅವಕಾಶಗಳೂ ಕಾಣದೆ ಹೋಗಬಹುದು.

ليست هناك تعليقات:

إرسال تعليق